ಶಿಕ್ಷಕರ ದಿನಾಚರಣೆಯಂದೇ ಆತ್ಮಹತ್ಯೆಗೆ ಶಿಕ್ಷಕಿ ಯತ್ನ
ಶಕುಂತಲಾ ಅವರು ನಾಲ್ಕು ವರ್ಷ ಕಾಲ ಯೋಗ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ನಂತರ 2007ರಲ್ಲೇ ರಾಜೀನಾಮೆ ನೀಡಿದ್ದರು. ಆಡಳಿತ ಮಂಡಳಿಯ ಕಿರುಕುಳಕ್ಕೆ ಬೇಸತ್ತು ರಾಜೀನಾಮೆ ನೀಡಿದ್ದಾಗಿ ಅವರು ಆರೋಪಿಸಿದ್ದಾರೆ.
ಕಳೆದ ಎಂಟು ತಿಂಗಳಿಂದ ಬಾಕಿ ಉಳಿಸಿದ್ದ ಸಂಬಳಕ್ಕಾಗಿ ಶಾಲೆಗೆ ಎಡತಾಕಿದರೂ, ಆಡಳಿತ ಮಂಡಳಿ ಸತಾಯಿಸುತ್ತಿದೆ. ಆಡಳಿತ ಮಂಡಳಿ ಅಧ್ಯಕ್ಷ ಕರುಣಾಕರ ಅವರ ಬಳಿ ಹೋದಾಗ ಹೀಯಾಳಿಸಿ ಮಾನಸಿಕವಾಗಿ ಕಿರುಕುಳ ನೀಡಿದ್ದರಿಂದ ಆತ್ಮಹತ್ಯೆಗೆ ಯತ್ನಿಸಬೇಕಾಯಿತೆಂದು ಅವರು ಆಸ್ಪತ್ರೆಯಲ್ಲಿ ಹೇಳಿಕೆ ನೀಡಿದ್ದಾರೆ.
ಆದರೆ, ಶಾಲೆಯ ಆಡಳಿತ ಮಂಡಳಿ ಶಕುಂತಲಾ ಅವರ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ. ಅವರು ರಾಜೀನಾಮೆ ನೀಡಿದಾಗ ಅವರಿಗೆ ಬರಬೇಕಾಗಿದ್ದ ಎಲ್ಲ ಹಣವನ್ನು ಪಾವತಿಸಲಾಗಿದೆ. ಆಡಳಿತ ಮಂಡಳಿಯನ್ನು ಇಕ್ಕಟ್ಟಿಗೆ ಸಕ್ಕಿಸಬೇಕೆಂದೇ ಶಿಕ್ಷಕರ ದಿನಾಚರಣೆಯಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರಿಗೆ ಯಾವುದೇ ರೀತಿಯ ಕಿರುಕುಳ ನೀಡಿಲ್ಲ. ಅವರ ಆರೋಪದಲ್ಲಿ ಎಳ್ಳಷ್ಟೂ ಹುರುಳಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ ಆಡಳಿತ ಮಂಡಳಿ.
(ದಟ್ಸ್ ಕನ್ನಡ ವಾರ್ತೆ)