ಬುರ್ಕಾ ವಿವಾದ: ದುಪ್ಪಟ ಬಳಸಲು ಅನುಮತಿ

ಈ ಸಂಬಂಧ ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ, ಸ್ಥಳೀಯ ಶಾಸಕ ಮತ್ತು ಕಾಲೇಜಿನ ಪ್ರತಿನಿಧಿಗಳು ಗುರುವಾರ (ಸೆ.3) ರಾತ್ರಿ ಸಭೆ ಸೇರಿ ಚರ್ಚಿಸಿ ಸ್ಕಾರ್ಫ್ ಗೆ ಬದಲಾಗಿ ದುಪ್ಪಟ ಅಥವಾ ಶಾಲು ಬಳಸುವ ಒಮ್ಮತ ನಿರ್ಧಾರಕ್ಕೆ ಬಂದಿದ್ದಾರೆ.
ವೆಂಕಟರಮಣಸ್ವಾಮಿ ಕಾಲೇಜಿನ ಬಿಕಾಂ ತರಗತಿಯಲ್ಲಿ ಕೇವಲ ಇಬ್ಬರು ಮಾತ್ರ ಮುಸ್ಲಿಂ ಹೆಣ್ಣುಮಕ್ಕಳಿದ್ದಾರೆ. ಆದರಲ್ಲಿ ಒಬ್ಬರು ಕಾಲೇಜಿನ ನಿಯಮಕ್ಕೆ ಸಮ್ಮತಿಸಿದರೆ, ಆಯೇಷಾ ಆಸ್ಮಿನ್ ಎನ್ನುವ ವಿದ್ಯಾರ್ಥಿನಿ ಮಾತ್ರ, ತಾನು ಬುರ್ಕಾ ಹಾಕದೇ ತರಗತಿಗೆ ಹಾಜರಾಗಲು ಸ್ಪಷ್ಟವಾಗಿ ನಿರಾಕರಿಸಿದ್ದರು.
ಆಸ್ಮಿನ್ ನಿಲುವಿಗೆ ಆಕೆ ಪೋಷಕರು ಹಾಗೂ ಜಿಲ್ಲೆಯ ಕೆಲ ಮುಸ್ಲಿಂ ಸಂಘಟನೆಗಳು ಬೆಂಬಲಕ್ಕೆ ನಿಂತಿರುವುದರಿಂದ ಬುರ್ಕಾ ಮತ್ತು ಸ್ಕಾರ್ಫ್ ನಿಷೇಧ ಇನ್ನಷ್ಟು ಕಗ್ಗಂಟಾಗಿ ಪರಿಣಮಿಸಿತ್ತು. ಇದೀಗ ಕಾಲೇಜಿನ ಹೊಸ ಸುತ್ತೋಲೆಯಿಂದ ಆಸ್ಮಿನ್ ಪೋಷಕರು ಖುಷಿಯಾಗಿದ್ದಾರೆ ಎಂದು ಮೂಲಗಲು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications