ಚನ್ನಪಟ್ಟಣದಲ್ಲಿ ಹಂದಿಗಳಿಗೆ 'ಮರಣದಂಡನೆ'
ಚನ್ನಪಟ್ಟಣ, ಸೆ. 2 : ಎಚ್1ಎನ್1 ಹಂದಿಜ್ವರದ ಭೀತಿಯ ಹಿನ್ನಲೆಯಲ್ಲಿ ಚನ್ನಪಟ್ಟಣ ನಗರಾಡಳಿತ ನಗರದಲ್ಲಿ ನಿರ್ಭೀತವಾಗಿ ಓಡಾಡುತ್ತಿರುವ ಹಂದಿಗಳ ತಲೆದಂಡಕ್ಕೆ ಮುಂದಾಗಿದೆ. ಎಲ್ಲೆಂದರಲ್ಲಿ ಓಡಾಡುತ್ತಿರುವ ಸುಮಾರು 11 ಹಂದಿಗಳನ್ನು ಈಗಾಗಲೆ ಕೊಲ್ಲಲಾಗಿದೆ.
ಹಂದಿಗಳನ್ನು ಕೊಲ್ಲಲು ನಿಪುಣತೆ ಪಡೆದಿರುವ ತಮಿಳುನಾಡಿನ ಅಯ್ಯಪ್ಪನ್ ಸೇರಿದಂತೆ ಮೂವರನ್ನು ಈ ಕಾರ್ಯಕ್ಕೆ ನಿಯೋಜಿಸಿರುವ ನಗರಾಡಳಿತ ಕಳೆದ ಮೂರು ದಿನಗಳಿಂದ ಹಂದಿಗಳ ಭೇಟೆಯಲ್ಲಿ ನಿರತವಾಗಿದೆ. ತಮಿಳುನಾಡಿನ ಪಡೆ ಮತ್ತು ನಗರಸಭೆಯ ವಿಶೇಷ ಪಡೆ ಶೋದ ಕಾರ್ಯಕೈಗೊಂಡಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications