123795iskconಬೆಂಗಳೂರು ಇಸ್ಕಾನ್ Vs ಮುಂಬೈ ಇಸ್ಕಾನ್/news/2009/07/29/bengaluru-iskcon-vs-mumbai-iskcon-mid-day-meal.htmlಬೆಂಗಳೂರು, ಜು. 29 : ಅಕ್ಷಯಪಾತ್ರೆ ಯೋಜನೆಗೆ ಸಂಗ್ರಹಿಸಿದ ಆರ್ಥಿಕ ನೆರವಿನಿಂದ ಇಸ್ಕಾನ್ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದೆ ಎಂಬ ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಆರೋಪದ ಹಿಂದೆ ಮುಂಬೈ ಇಸ್ಕಾನ್ ಪಿತೂರಿಯಿದೆ. ಮುಂಬೈ ಇಸ್ಕಾನ್ ಕಳೆದ ಹತ್ತು ವರ್ಷಗಳಿಂದ ಹಾಡುತ್ತಿರುವ ರಾಗವನ್ನು ಶಿವಕುಮಾರ್ ಈಗ ಜಪಿಸುತ್ತಿದ್ದಾರೆ. ಹೀಗಾಗಿ ಇದರ ಹಿಂದೆ ಮುಂಬೈ ಇಸ್ಕಾನ್ ಕೈವಾಡವಿದೆ 38286http://kannada.oneindia.com/img/2009/07/29-iskcon-temple1.jpg123795iskconವಿದ್ಯಾರ್ಥಿಗಳಿಗೆ ಭಗವದ್ ಗೀತೆ ಪ್ರಶ್ನೋತ್ತರ ಮಾಲಿಕೆ/news/2009/07/30/bhagavad-gita-quiz-contest-for-students.htmlಬೆಂಗಳೂರು, ಜು. 30 : ಶಾಲಾಮಕ್ಕಳಿಗೆ ಭಗವದ್ ಗೀತೆಯ ಬಗ್ಗೆ ಹೆಚ್ಚಿನ ತಿಳಿವಳಿಕೆ ಮೂಡಿಸಲು ಕಲ್ಚರ್ ಇಂಡಿಯಾ ಸಂಸ್ಥೆ ಮಕ್ಕಳಿಗಾಗಿ ಭಗವದ್ ಗೀತಾ ಪ್ರಶ್ನೋತ್ತರ ಮಾಲಿಕೆಯನ್ನು ಹಮ್ಮಿಕೊಂಡಿದೆ.ಇದರ ಪ್ರಯುಕ್ತ, ಶತಾವಧಾನಿ ಡಾ. ಗಣೇಶ್ ಅವರ ನೇತೃತ್ವದಲ್ಲಿ ಆಗಸ್ಟ್ 2ರಂದು 10 ಶಾಲೆಗಳ 100 ಮಕ್ಕಳು ಕಾಲ್ನಡಿಗೆ ಗೀತಾಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಗೀತಾಯಾತ್ರೆ ಮಹಾಲಕ್ಷ್ಮಿ ಬಡಾವಣೆಯ ಇಸ್ಕಾನ್ ನಿಂದ ರಾಜಾಜಿನಗರದ 38326http://kannada.oneindia.com/img/2009/07/30-bhagavadgita1.jpg123795iskconಸಕಲಕಲಾವಲ್ಲಭ ಶ್ರೀಕೃಷ್ಣನ ಹುಟ್ಟುಹಬ್ಬ!/festivals/shravana/2009/0813-srikrishna-janmashtami-hindu-festival.htmlಶ್ರಾವಣ ಕೃಷ್ಣ ಪಕ್ಷದ ಅಷ್ಟಮಿಯಂದು (ಆಗಸ್ಟ್ 13) ಆಚರಿಸಲಾಗುವ ಹಬ್ಬವೇ ಗೋಕುಲಾಷ್ಟಮಿ ಅಥವಾ ಶ್ರೀಕೃಷ್ಣಜನ್ಮಾಷ್ಟಮಿ. ಮಥುರಾ ನಗರದ ಅರಸ ಕಂಸಮಹಾರಾಜನಿಗೆ ತನ್ನ ತಂಗಿ ದೇವಕಿಯಿಂದ ಹುಟ್ಟುವ ಮಕ್ಕಳಿಂದ ಮರಣ ನಿಶ್ಚಿತ ಎನ್ನುವ ಸುದ್ದಿ ಅಶರೀರವಾಣಿಯಿಂದ ತಿಳಿಯುತ್ತದೆ. ಇದರಿಂದ ಚಿಂತಾಕ್ರಾಂತನಾಗುವ ಕಂಸ ತನ್ನ ತಂಗಿ ದೇವಕಿ ಮತ್ತು ಭಾವ ವಸುದೇವನನ್ನು ಬಂಧಿಸಿ ಅವರಿಗೆ ಹುಟ್ಟುವ ಮಕ್ಕಳನ್ನು ಹತ್ಯೆ ಮಾಡುತ್ತಾ 38605http://kannada.oneindia.com/img/2009/08/13-krishna5.jpg123795iskconನಾರಾಯಣ ಗೋಸ್ವಾಮಿ ಮಹಾರಾಜರಿಂದ ಆಶೀರ್ವಚನ/news/2009/08/31/divine-discourse-by-narayana-goswami-iskcon.htmlಶ್ರೀಕೃಷ್ಣನ ಅಪರಾವತಾರವೆಂದೇ ಪೂಜಿಸಲ್ಪಡುವ ಶ್ರೀ ಶ್ರೀ ಚೈತನ್ಯಮಹಾಪ್ರಭುಗಳ ಪರಂಪರೆಯ ಗೌಡಿಯ ಮಠದ ಬಹುಮುಖ್ಯ ಗುರುಗಳಾದ ಪೂಜ್ಯ ಶ್ರೀಲ ಭಕ್ತಿವೇದಾಂತ ನಾರಾಯಣ ಗೋಸ್ವಾಮಿ ಮಹಾರಾಜರು ಇದೇ ಸೆಪ್ಟಂಬರ್ 13 ಭಾನುವಾರ, ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಭಕ್ತಾದಿಗಳೆಲ್ಲರಿಗೂ ಆಶೀರ್ವಚನ ನೀಡಲಿದ್ದಾರೆ. ಈ ಸುಸಂದರ್ಭದಲ್ಲಿ ಅವರನ್ನು ಕನ್ನಡಿಗರಿಗೆ ಪರಿಚಯಿಸಲು ತುಂಬ ಸಂತೋಷವಾಗುತ್ತಿದೆ.ಪೂಜ್ಯ ಶ್ರೀ ಶ್ರೀಮದ್ ಭಕ್ತಿವೇದಾಂತ ನಾರಾಯಣ ಗೋಸ್ವಾಮಿ ಮಹಾರಾಜರು, 38933http://kannada.oneindia.com/img/2009/08/31-narayana-goswami-maharaj1.jpg123795iskconಸ್ವರ್ಣವಲ್ಲಿ ಸ್ವಾಮೀಜಿಗಳಿಂದ ಭಗವದ್ ಗೀತಾ ಕ್ವಿಜ್/news/2009/09/12/cultural-india-bhagavad-gita-quiz-final.htmlಬೆಂಗಳೂರು, ಸೆ. 12 : ಯುವ ಪೀಳಿಗೆಯಲ್ಲಿ ಭಾರತೀಯ ಸಂಸ್ಕೃತಿಯ ಬಿತ್ತಲೆಂದು ಉದಯಿಸಿರುವ CulturalIndia ಸಂಸ್ಥೆಯು ಶಾಲಾ ಮಕ್ಕಳಿಗೆ www.culturalindia.org ವೆಬ್‌ಸೈಟ್ ಮೂಲಕ ಹಮ್ಮಿಕೊಂಡಿದ್ದ ಭಗವದ್ಗೀತಾ ಪ್ರಶ್ನೋತ್ತರ ಮಾಲಿಕೆಯ ಅಂತಿಮ ಸುತ್ತು ಇದೇ ಭಾನುವಾರ ಸೆಪ್ಟೆಂಬರ್ 13, 2009ರಂದು ಸಂಜೆ 4 ಗಂಟೆಗೆ ಜಯನಗರ 9ನೇ ಬ್ಲಾಕ್ ನಲ್ಲಿರುವ ರಾಗಿ ಗುಡ್ಡ ಆಂಜನೇಯ ದೇವಸ್ಥಾನದಲ್ಲಿ ನಡೆಯುತ್ತದೆ.ಆಗಸ್ಟ್ 2ರಂದು 39148http://kannada.oneindia.com/img/2009/09/12-bhagavadgita1.jpg486770bhagavad gitaಶ್ರೀಮದ್ ಭಗವದ್ಗೀತೆಯಲ್ಲಿ ಆರೋಗ್ಯ ಸೂತ್ರಗಳು/column/gv/2008/1116-karma-yoga-dhyana-yoga-in-bhagavad-gita.htmlಭಗವದ್ಗೀತೆಯಲ್ಲಿ ಬರುವ ಹದಿನೆಂಟು ಯೋಗಶಾಸ್ತ್ರಗಳಲ್ಲಿ ಆರೋಗ್ಯ ಕಾಪಾಡಲು ಸೂತ್ರಗಳನ್ನು ಅಳವಡಿಸಲಾಗಿದೆ. ಮಹತ್ವದ ಯೋಗಗಳಾದ ಕರ್ಮಯೋಗ ಮತ್ತು ಧ್ಯಾನಯೋಗ ರೋಗಗಳನ್ನು ವಾಸಿಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಅನಾರೋಗ್ಯವೆಂಬುದು ಹತ್ತಿರ ಕೂಡ ಸುಳಿಯಲಾರದು. * ಡಾ. 'ಜೀವಿ' ಕುಲಕರ್ಣಿ, ಮುಂಬಯಿ ಶ್ರೀಮದ್ ಭಗವದ್ಗೀತೆ ಒಂದು ಯೋಗಶಾಸ್ತ್ರ. ಭವದ್ಗೀತೆಯ ಹದಿನೆಂಟು ಅಧ್ಯಾಯಗಳಲ್ಲಿ ಕೊನೆಗೆ ಓಂತತ್ಸತ್ ಇತಿ 32800http://kannada.oneindia.com/img/2008/11/bhagavadgita1.jpg486770bhagavad gitaಗೀತೆಯಲ್ಲಿ ಆರೋಗ್ಯ ಸೂತ್ರಗಳು (ಭಾಗ 2)/column/gv/2008/1122-health-tips-in-bhagavad-gita-part2.htmlಮನ ಒಂದು ದೈತ್ಯ ಇದ್ದಹಾಗೆ. ಅದಕ್ಕೆ ಸದಾ ಕೆಲಸ ಇರಬೇಕು. ಇಲ್ಲದಿದ್ದರೆ ಅದು ನಿಮ್ಮ ತಲೆ ತಿನ್ನುತ್ತದೆ. ಎಲ್ಲ ರೋಗಗಳಿಗೂ ಮನವೇ ಕಾರಣವಾಗುತ್ತದೆ. ಕೈಯಲ್ಲಿ ಒಂದು ಜಪಮಾಲೆ ಕೊಡಬೇಕು. ಕೆಲಸವಿಲ್ಲದೇ ಇದ್ದಾಗ ಜಪಮಾಲೆ ಎಣಿಸುತ್ತಿರಬೇಕು. ಕೆಲಸ ಬಂದಾಗ ಜಪ ಬದಿಗಿಟ್ಟು ಕೆಲಸ ಮಾಡಬೇಕು. * ಡಾ. 'ಜೀವಿ' ಕುಲಕರ್ಣಿ, ಮುಂಬಯಿ ನಮ್ಮ ಜೀವನದಲ್ಲಿಯ ಅಧ್ಯಾತ್ಮಿಕ ಹಾಗೂ ಆರೋಗ್ಯದ 32918http://kannada.oneindia.com/img/2008/11/bhagavadgita2.jpg486770bhagavad gitaಸಿಲಿಕಾನ್ ವೇಫರ್ ಮೇಲೆ ಭಗವದ್ಗೀತೆ!/nri/article/2009/0505-bhagavad-gita-on-silicon-wafer-pr-mukund.htmlಖಿಲವಾಗುತ್ತಿರುವ ಪುರಾತನ ಕಾಲದ ಅಮೂಲ್ಯವಾದ ಗ್ರಂಥಗಳನ್ನು ಸಿಲಿಕಾನ್ ವೇಫರ್ ಮೇಲೆ ಮೂಡಿಸಿ ಅಖಿಲವಾಗಿಸುವ ನಿಟ್ಟಿನಲ್ಲಿ ಅಮೆರಿಕದಲ್ಲಿರುವ ಬಸವನಗುಡಿಯ ಪಿಆರ್ ಮುಕುಂದ್ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಇದಕ್ಕಾಗಿಯೇ ಪ್ರೋಫೆಸರ್ ಗಿರಿಯನ್ನು ತ್ಯಜಿಸಿರುವ ಅವರು ನ್ಯಾನೋಆರ್ಕ್ ಎಂಬ ಕಂಪನಿಯನ್ನು ಹುಟ್ಟುಹಾಕಿದ್ದಾರೆ. ಮುಟ್ಟಿದರೆ ಮುರಿಯುವ ಸ್ಥಿತಿಯಲ್ಲಿರುವ ಪುರಾತನ ಕನ್ನಡ ಗ್ರಂಥಗಳೂ ಎಂದೂ ಅಳಿಯದ ಸಿಲಿಕಾನ್ ವೇಫರ್ಸ್ ಮೇಲೆ ಸಿಗುವಂತಾಗಲಿ.* ಟಿ. ಮಹದೇವ ರಾವ್, 36412http://kannada.oneindia.com/img/2009/05/05-silicon-wafers1.jpg486770bhagavad gitaಈ ಜೀವನವೇ ಒಂದು ಯುದ್ಧ : ಭಗವದ್ ಗೀತೆ/column/gv/2009/0711-life-is-like-a-war-bhagavad-gita.htmlಭಗದ್ಗೀತೆಯು ನಮ್ಮ ಜೀವನದ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ನಮ್ಮ ಜೀವನವೇ ಒಂದು ಯುದ್ಧದಂತೆ ಇದೆ. ಹೆಜ್ಜೆಹೆಜ್ಜೆಗೂ ನಾವು ಸಮಸ್ಯೆಗಳನ್ನು ಎದುರಿಸುತ್ತೇವೆ. ಜೀವನದ ಯುದ್ಧದಲ್ಲಿ ನಾವು ವಿಜಯವನ್ನು ಸಂಪಾದಿಸಬೇಕಾದರೆ ನಾವು ಸಮಸ್ಯೆಗಳನ್ನು ಎದುರಿಸಬೇಕು.700 ಶ್ಲೋಕಗಳಿರುವ ಈ ವಾಮನ ಗಾತ್ರದ ಧರ್ಮಸಂಹಿತೆಯ ಬಗ್ಗೆ ಟೀಕೆ-ಟಿಪ್ಪಣಿ-ವ್ಯಾಖ್ಯಾನ-ಪ್ರವಚನಗಳ ಗಾತ್ರ ಲಕ್ಷಾವಧಿಯಾಗಿದೆ, ತ್ರಿವಿಕ್ರಮಾಕಾರದಲ್ಲಿ ಬೆಳೆದುನಿಂತಿದೆ.* ಡಾ. 'ಜೀವಿ' ಕುಲಕರ್ಣಿ, ಮುಂಬಯಿಜಗತ್ತಿನ ಯಾವ ಧರ್ಮಗ್ರಂಥಕ್ಕೂ 37922http://kannada.oneindia.com/img/2009/07/11-bhagavadgita1.jpg486770bhagavad gitaವಿದ್ಯಾರ್ಥಿಗಳಿಗೆ ಭಗವದ್ ಗೀತೆ ಪ್ರಶ್ನೋತ್ತರ ಮಾಲಿಕೆ/news/2009/07/30/bhagavad-gita-quiz-contest-for-students.htmlಬೆಂಗಳೂರು, ಜು. 30 : ಶಾಲಾಮಕ್ಕಳಿಗೆ ಭಗವದ್ ಗೀತೆಯ ಬಗ್ಗೆ ಹೆಚ್ಚಿನ ತಿಳಿವಳಿಕೆ ಮೂಡಿಸಲು ಕಲ್ಚರ್ ಇಂಡಿಯಾ ಸಂಸ್ಥೆ ಮಕ್ಕಳಿಗಾಗಿ ಭಗವದ್ ಗೀತಾ ಪ್ರಶ್ನೋತ್ತರ ಮಾಲಿಕೆಯನ್ನು ಹಮ್ಮಿಕೊಂಡಿದೆ.ಇದರ ಪ್ರಯುಕ್ತ, ಶತಾವಧಾನಿ ಡಾ. ಗಣೇಶ್ ಅವರ ನೇತೃತ್ವದಲ್ಲಿ ಆಗಸ್ಟ್ 2ರಂದು 10 ಶಾಲೆಗಳ 100 ಮಕ್ಕಳು ಕಾಲ್ನಡಿಗೆ ಗೀತಾಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಗೀತಾಯಾತ್ರೆ ಮಹಾಲಕ್ಷ್ಮಿ ಬಡಾವಣೆಯ ಇಸ್ಕಾನ್ ನಿಂದ ರಾಜಾಜಿನಗರದ 38326http://kannada.oneindia.com/img/2009/07/30-bhagavadgita1.jpg35075bengaluruಪತ್ನಿಯರಿಂದ ಅತಂತ್ರರಾದ ಗಂಡಂದಿರ ಸ್ವಾತಂತ್ರ್ಯ ಕಹಳೆ/news/2009/08/04/harassed-husbands-meet-on-august-15-in-shimla.htmlಬೆಂಗಳೂರು, ಆ. 4 : ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ ಎಂದು ಪ್ರೇಮಕವಿ ಕೆಎಸ್ ನರಸಿಂಹಸ್ವಾಮಿಯವರು ಹೆಂಡತಿಯನ್ನು ಕೋಟಿ ರುಪಾಯಿಗೆ ಹೋಲಿಸಿದ್ದಾರೆ. ಆದರೆ ಅದೇ ಕೋಟಿ ರುಪಾಯಿಯ ಹೆಂಡತಿಯರಿಂದ ಪೀಡನೆಗೊಳಗಾಗಿ ಕೋತಿಯಂತಾಗಿರುವ ಗಂಡಂದಿರು ಆಗಸ್ಟ್ 15ರಂದು ಸ್ವಾತಂತ್ರ್ಯ ಬಯಸಿ ಶೀಮ್ಲಾದಲ್ಲಿ ಸಮಾವೇಶ ನಡೆಸಲಿದ್ದಾರೆ.ದೇಶದೆಲ್ಲೆಡೆ ವರದಕ್ಷಿಣೆ ಸಾವು, ಪತಿಯರಿಂದ ಪತ್ನಿಯರ ಮೇಲೆ ದೌರ್ಜನ್ಯದಂತಹ ಸುದ್ದಿಗಳೇ ಪ್ರಾಮುಖ್ಯತೆ ಪಡೆಯುತ್ತವೆ. 38422http://kannada.oneindia.com/img/2009/08/04-harassed-husband1.jpg35075bengaluruಸ೦ತ್ರಸ್ತರಿಗಾಗಿ ಸಿಎಂ ಪಾದಯಾತ್ರೆ/news/2009/10/06/yeddyurappa-and-his-colleagues-does-padayatra.htmlಬೆಂಗಳೂರು, ಅ. 6 : ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯ ಪ್ರವಾಹದಿ೦ದಾಗಿ ತತ್ತರಿಸಿರುವ ಸ೦ತ್ರಸ್ತರ ನೆರವಿಗೆ ಮುಖ್ಯಮ೦ತ್ರಿಗಳು, ಸಚಿವರು, ಸ೦ಸದರು ಮತ್ತು ಜನಪ್ರತಿನಿಧಿಗಳೊ೦ದಿಗೆ ಅಕ್ಟೋಬರ್ 7ರ೦ದು ಬೆ೦ಗಳೂರಿನಲ್ಲಿ ಪಾದಯಾತ್ರೆ ನಡೆಸಲಿದ್ದಾರೆ.ನಗರದಲ್ಲಿ ಸುದ್ದಿಗಾರರೊ೦ದಿಗೆ ಮಾತನಾಡುತ್ತಿದ್ದ ಅವರು, ನೆರೆಹಾವಳಿಯಿ೦ದ ಮನೆ, ಮಠ ಕಳೆದುಕೊ೦ಡ ನಿರಾಶ್ರಿತರಾಗಿರುವ ಜನತೆಗೆ ನೆರವು ನೀಡಲು ಬೆ೦ಗಳೂರಿನ ಬೀದಿಗಳಲ್ಲಿ ಮನೆ-ಮನೆಗೆ ಹೋಗಿ ದೇಣಿಗೆ ಸ೦ಗ್ರಹಿಸುವುದಾಗಿ 39536http://kannada.oneindia.com/img/2009/10/06-yediyurappa-oath2.jpg35075bengaluruಪ್ರವಾಹ ನಿಧಿ : ಅವರೆಲ್ಲಿ ಐಟಿ ಮಂದಿ?/news/2009/10/08/flood-corporates-conspicuous-by-their-absence.htmlಉತ್ತರ ಕರ್ನಾಟಕದಲ್ಲಿ ಆಗಿರುವ ಜಲಪ್ರಳಯಕ್ಕೆ ಲಕ್ಷಾಂತರ ಮಂದಿ ವಸತಿಹೀನರಾಗಿರುವ ತಿಳಿದಿರುವ ಸಂಗತಿ. ಪ್ರವಾಹಕ್ಕೀಡಾಗಿರುವ ನತದೃಷ್ಟರ ಪುನರ್ ವಸತಿಗೆ ನೂರಾರು ಕೋಟಿ ರುಪಾಯಿಗಳ ಅವಶ್ಯಕತೆ ಇದೆ. ಮನೆಯಿಲ್ಲ, ಮಠಯಿಲ್ಲ, ವರುಣ ಮುನಿಸಿಗೆ ಪ್ರವಾಹದ ಅಬ್ಬರಕ್ಕೆ ಎಲ್ಲವೂ ಕಳೆದುಹೋಗಿದೆ. ಇಂತಹ ಸಂಕಷ್ಟ ಸಮಯದಲ್ಲಿ ಅವರ ಕೈಹಿಡಿಯುವ ಮೂಲಕ ಮಾನವೀಯತೆ ಮೆರೆಯಬೇಕಿದೆ. ಇದೇ ಕಾರಣಕ್ಕೆ ನಿಧಿ ಸಂಗ್ರಹಕ್ಕಾಗಿ ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ 39576http://kannada.oneindia.com/img/2009/10/08-wipro-logo.jpg35075bengaluruಬೆಂಗಳೂರಿನಲ್ಲಿ ಆಸ್ಕರ್ ವಿಜೇತ ಸ್ಮೈಲ್ ಪಿಂಕಿ/movies/headlines/2009/10/08-smile-pinki-in-bengaluru-pvr-cinemas.html2009ರ ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ 'ಸ್ಮೈಲ್ ಪಿಂಕಿ' ಬೆಂಗಳೂರಿನ ಪಿವಿಆರ್ ಚಿತ್ರಮಂದಿರಗಳಲ್ಲಿ ಬುಧವಾರದಿಂದ(ಅ.7) ಪ್ರದರ್ಶನಗೊಳ್ಳುತ್ತಿದೆ. ಒಂದು ವಾರ ಕಾಲ ಈ ಚಿತ್ರ ನಗರದಲ್ಲಿ ಪ್ರದರ್ಶನ ಕಾಣಲಿದೆ. ಈಗಾಗಲೇ ಈ ಚಿತ್ರ ಮುಂಬೈ ಮತ್ತು ಚೆನ್ನೈ ನಗರಗಳಲ್ಲಿ ಪ್ರದರ್ಶನಗೊಂಡು ಉತ್ತಮ ಪ್ರತಿಕ್ರಿಯೆಗೆ ಪಾತ್ರವಾಗಿದೆ.'ಸ್ಮೈಲ್ ಪಿಂಕಿ' ಚಿತ್ರ ಭಾರತದ ಐದು ನಗರಗಳಲ್ಲಿ ಪ್ರದರ್ಶನಗೊಳ್ಳತ್ತಿದ್ದು ದೆಹಲಿ ಮತ್ತು ವಾರಣಾಸಿಗಳಲ್ಲೂ 39579http://kannada.oneindia.com/img/2009/10/08-smile-pinki1.jpg35075bengaluruಹಸಿವು ಹೆಚ್ಚಿಸುವ ದಂಟಿನ ಸೊಪ್ಪಿನ ಪಲ್ಯ/recipe/palya/2009/1008-dantina-soppina-palya.htmlಹೆಚ್ಚು ನಾರಿನಂಶ ಹೊಂದಿರುವ ದಂಟಿನ ಸೊಪ್ಪಿನ ಪಲ್ಯ ಊಟದ ರುಚಿಯನ್ನು ಹೆಚ್ಚಿಸುತ್ತದೆ ಮಾತ್ರವಲ್ಲ ಆರೋಗ್ಯಕ್ಕೂ ಹಿತಕರ. ದಂಟಿನ ಸೊಪ್ಪಿನ ಪಲ್ಯವನ್ನು ಬಿಸಿಬಿಸಿ ಅನ್ನದೊಂದಿಗೆ ತುಪ್ಪ ಬೆರೆಸಿ ತಿಂದರೆ ನಿಮಗೆ ಗೊತ್ತಿಲ್ಲದಂತೆಯೇ ಎರಡು ತುತ್ತು ಜಾಸ್ತಿಯೇ ಹೊಟ್ಟೆಗಿಳಿದಿರುತ್ತದೆ. ಚಪಾತಿ, ರೊಟ್ಟಿಯೊಡನೆಯೂ ದಂಟಿನ ಸೊಪ್ಪಿನ ಪಲ್ಯವನ್ನು ತಿನ್ನಬಹುದು.* ಭಾರತಿ ಎಚ್ಎಸ್, ಬೆಂಗಳೂರುಬೇಕಾಗುವ ಪದಾರ್ಥಗಳುದಂಟಿನ ಸೊಪ್ಪು ಒಂದು ಬಟ್ಟಲುಬೆಳ್ಳುಳ್ಳಿ ಆರು ಎಸಳು 39590http://kannada.oneindia.com/img/2009/10/08-dantina-soppina-palya1.jpgnews"> ನಾರಾಯಣ ಗೋಸ್ವಾಮಿ ಮಹಾರಾಜರಿಂದ ಆಶೀರ್ವಚನ | Narain Goswamy Maharaj | Divine Discourse | ISKCON | Chowdaiah Hall - ನಾರಾಯಣ ಗೋಸ್ವಾಮಿ ಮಹಾರಾಜರಿಂದ ಆಶೀರ್ವಚನ - Kannada Oneindia

ನಾರಾಯಣ ಗೋಸ್ವಾಮಿ ಮಹಾರಾಜರಿಂದ ಆಶೀರ್ವಚನ

Narayana Goswamy Maharaj, ISKCON
ಶ್ರೀಕೃಷ್ಣನ ಅಪರಾವತಾರವೆಂದೇ ಪೂಜಿಸಲ್ಪಡುವ ಶ್ರೀ ಶ್ರೀ ಚೈತನ್ಯಮಹಾಪ್ರಭುಗಳ ಪರಂಪರೆಯ ಗೌಡಿಯ ಮಠದ ಬಹುಮುಖ್ಯ ಗುರುಗಳಾದ ಪೂಜ್ಯ ಶ್ರೀಲ ಭಕ್ತಿವೇದಾಂತ ನಾರಾಯಣ ಗೋಸ್ವಾಮಿ ಮಹಾರಾಜರು ಇದೇ ಸೆಪ್ಟಂಬರ್ 13 ಭಾನುವಾರ, ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಭಕ್ತಾದಿಗಳೆಲ್ಲರಿಗೂ ಆಶೀರ್ವಚನ ನೀಡಲಿದ್ದಾರೆ. ಈ ಸುಸಂದರ್ಭದಲ್ಲಿ ಅವರನ್ನು ಕನ್ನಡಿಗರಿಗೆ ಪರಿಚಯಿಸಲು ತುಂಬ ಸಂತೋಷವಾಗುತ್ತಿದೆ.

ಪೂಜ್ಯ ಶ್ರೀ ಶ್ರೀಮದ್ ಭಕ್ತಿವೇದಾಂತ ನಾರಾಯಣ ಗೋಸ್ವಾಮಿ ಮಹಾರಾಜರು, ಶ್ರೀ ಶ್ರೀಮದ್ ಭಕ್ತಿಪ್ರಜ್ಞಾನ ಕೇಶವ ಗೋಸ್ವಾಮಿ ಮಹಾರಾಜರ ಶಿಷ್ಯರು. ಶ್ರೀ ಭಕ್ತಿಪ್ರಜ್ಞಾನ ಕೇಶವ ಗೋಸ್ವಾಮಿ ಮಹಾರಾಜರು, ಶ್ರೀ ಶ್ರೀಮದ್ ಭಕ್ತಿಸಿದ್ಧಾಂತ ಸರಸ್ವತಿ ಪ್ರಭುಪಾದರ ಪ್ರಮುಖ ಶಿಷ್ಯರಲ್ಲಿ ಒಬ್ಬರು. ಶ್ರೀಲ ನಾರಾಯಣ ಮಹಾರಾಜರು ಗಂಗಾನದಿ ತೀರದಲ್ಲಿರುವ ಬಿಹಾರದ ಒಂದು ಪುಟ್ಟಹಳ್ಳಿಯಾದ ತಿವಾರಿಪುರದಲ್ಲಿ ಮೌನಿ ಅಮಾವಸ್ಯೆಯ ದಿನವಾದ ಫೆಬ್ರವರಿ 16, 1921ರಂದು ಜನಿಸಿದರು. ಬಾಲ್ಯದಿಂದಲೂ ಇವರು ಅಧ್ಯಾತ್ಮದೆಡೆಗೆ ಆಕರ್ಷಿತರಾಗಿ ಶ್ರೀ ಕೃಷ್ಣನ ನಾಮಸ್ಮರಣೆ ಮಾಡುತ್ತಿದ್ದರು. ಪೂರ್ವಾಶ್ರಮದಲ್ಲಿ ಇವರು ನಾರಾಯಣ ತಿವಾರಿಯೆಂಬ ಹೆಸರಿನಿಂದ ಪೋಲಿಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಒಮ್ಮೆ ಗೌಡೀಯ ಮಠದ ಶಿಷ್ಯರು ಇವರ ಸ್ಥಳಕ್ಕೆ ಬಂದು ಶ್ರೀ ಚೈತನ್ಯ ಮಹಾಪ್ರಭುಗಳ ಸಿದ್ಧಾಂತವನ್ನು ಪ್ರವಚನ ಮಾಡಿದರು. ಅವರ ಪ್ರವಚನಗಳನ್ನು ಕೇಳಿ ಶ್ರೀ ಕೃಷ್ಣನೆಡೆಗೆ ಇವರ ಮನಸ್ಸು ಸಂಪೂರ್ಣ ಆಕರ್ಷಿತವಾಯಿತು. ಲೌಕಿಕ ಜೀವನದಲ್ಲಿ ಆಸಕ್ತಿ ಕಳೆದುಕೊಂಡು ಕೆಲಸ, ಕುಟುಂಬ, ಆಸ್ತಿ ಎಲ್ಲವನ್ನೂ ತ್ಯಜಿಸಿ ಬಂಗಾಳದ ನವದ್ವೀಪ ಧಾಮದಲ್ಲಿರುವ ಶ್ರೀಲ ಭಕ್ತಿಪ್ರಜ್ಞಾನ ಕೇಶವ ಗೋಸ್ವಾಮಿ ಮಹಾರಾಜರಲ್ಲಿಗೆ ಬಂದು ಅವರ ಪಾದಗಳಿಗೆ ಶರಣಾದರು. ಶ್ರೀ ಕೇಶವ ಮಹಾರಾಜರು ಇವರಲ್ಲಿನ ಶುದ್ಧ ಕೃಷ್ಣಪ್ರೇಮವನ್ನು ಕಂಡು ಇವರಿಗೆ ಹರಿನಾಮವನ್ನು ಹಾಗೂ ಸಂನ್ಯಾಸ ದೀಕ್ಷೆಯನ್ನು ನೀಡಿದರು.

ಶ್ರೀಲ ನಾರಾಯಣ ಮಹಾರಾಜರು ತಮ್ಮ ಗುರುಗಳ ಆಶಯದಂತೆ ಶ್ರೀಲ ಭಕ್ತಿವಿನೋದ ಠಾಕೂರರು ಬಂಗಾಳಿಯಲ್ಲಿ ಬರೆದ ಜೈವ ಧರ್ಮ ಎಂಬ ಪುಸ್ತಕವನ್ನು ಹಿಂದಿಗೆ ಅನುವಾದ ಮಾಡಿದ್ದಾರೆ. ಇದು ಈಗ ಕನ್ನಡದಲ್ಲೂ ಪ್ರಕಟವಾಗುತ್ತಿದೆ. ಈ ಪುಸ್ತಕವು ವೇದೋಪನಿಷತ್ತು, ಶ್ರೀಮದ್ಭಾಗವತ ಪುರಾಣ, ಮಹಾಭಾರತ, ರಾಮಾಯಣ ಗ್ರಂಥಗಳ ಸಾರವನ್ನು ಒಳಗೊಂಡಿದೆ. ಶ್ರೀಲ ಗುರುದೇವರು ಹೀಗೇ ಇನ್ನೂ ಅನೇಕ ಅಧ್ಯಾತ್ಮಿಕ ಗ್ರಂಥಗಳನ್ನು ಬಂಗಾಳಿಯಿಂದ ಹಿಂದಿಗೆ ಹಾಗೂ ಆಂಗ್ಲ ಭಾಷೆಗೆ ಅನುವಾದಿಸಿದ್ದಾರೆ. ಇವರು ಶ್ರೀಲ ವಿಶ್ವನಾಥ ಚಕ್ರವರ್ಥಿ ಠಾಕೂರರ ಭಗವದ್ಗೀತಾ ಉಪನ್ಯಾಸದ ಆಧಾರದ ಮೇಲೆ ಭಗವದ್ಗೀತೆಯ ಮೇಲೆ ಒಂದು ಸಾವಿರ ಪುಟಗಳನ್ನೂ ಮೀರಿದ ಗ್ರಂಥವನ್ನು ರಚಿಸಿದ್ದಾರೆ.

ಶ್ರೀಲ ನಾರಾಯಣ ಮಹಾರಾಜರು ವಿಶ್ವಪ್ರಸಿದ್ಧ ಅಂತರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಸ್ಥೆಯ(ಇಸ್ಕಾನ್) ಸ್ಥಾಪಕರಾದ ಶ್ರೀಲ ಏ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ ಅತ್ಯಂತ ನಿಕಟ ಸ್ನೇಹಿತರಾಗಿದ್ದು ಅವರನ್ನು ತಮ್ಮ ಗುರುಗಳೆಂದು ಭಾವಿಸಿದ್ದರು. ಶ್ರೀಲ ಪ್ರಭುಪಾದರು ಶ್ರೀಲ ನಾರಾಯಣ ಮಹಾರಾಜರನ್ನು ತಮ್ಮ ಹರೇಕೃಷ್ಣ ಚಳವಳಿಯ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿದ್ದರು. ತಮ್ಮ ಜೀವನದ ಕೊನೆಯ ದಿನಗಳಲ್ಲಿ ಶ್ರೀಲ ಪ್ರಭುಪಾದರು ನಾರಾಯಣ ಮಹಾರಾಜರೇ, ತಮ್ಮ ದೇಹತ್ಯಾಗದ ನಂತರದ ಸಮಾಧಿ ವಿಧಿಗಳನ್ನು ನೆರವೇರಿಸಬೇಕೆಂದು ಕೋರಿಕೊಂಡರು. ಶ್ರೀಲ ನಾರಾಯಣ ಮಹಾರಾಜರು, ಪ್ರಭುಪಾದರ ಆಶಯದಂತೆ ಪ್ರಭುಪಾದರ ಸಮಾಧಿ ಕಾರ್ಯಗಳನ್ನು ನೆರವೇರಿಸಿದರು.

ಶ್ರೀಲ ನಾರಾಯಣ ಮಹಾರಾಜರು ಅರ್ಧ ಶತಮಾನದಿಂದಲೂ ತಮ್ಮ ಗುರುಗಳ ಆಶಯದಂತೆ ವಿಶ್ವದಾದ್ಯಂತ ಶ್ರೀ ಕೃಷ್ಣ ಭಕ್ತಿಯನ್ನು ಪ್ರಚುರಪಡಿಸುತ್ತಿದ್ದಾರೆ. ದಿವ್ಯ ದಂಪತಿಗಳಾದ ಶ್ರೀ ರಾಧಾ-ಕೃಷ್ಣರ ಹಾಗೂ ಶ್ರೀ ಚೈತನ್ಯ ಮಹಾಪ್ರಭುಗಳ ಸೇವೆಯನ್ನು ಮಾಡುತ್ತ ತಮ್ಮ ಜೀವನವನ್ನು ಶ್ರೀ ಕೃಷ್ಣ ಶುದ್ಧ ಭಕ್ತಿಗೇ ಮೀಸಲಿಟ್ಟಿದ್ದಾರೆ. ಜಾತಿಮತ ಬೇಧವಿಲ್ಲದೆ ಜನಸಾಮಾನ್ಯರು ಶ್ರೀ ಕೃಷ್ಣನಲ್ಲಿ ಶುದ್ಧಭಕ್ತಿಯನ್ನು ಮಾಡಲು ಅನುಕೂಲವಾಗಲೆಂದು www.purebhakti.com ಎಂಬ ಅಂತರ್ಜಾಲ ತಾಣವನ್ನು ಸ್ಥಾಪಿಸಿದ್ದಾರೆ. ಈ ತಾಣದಲ್ಲಿ ಗುರುಗಳ ಭೋದನೆಗಳು ಹಾಗೂ ಪ್ರವಚನಗಳನ್ನು ಓದಬಹುದು.

ಜನಸಾಮಾನ್ಯರು ತಮ್ಮ ದೈಹಿಕ ಹಾಗೂ ಮಾನಸಿಕ ತೊಂದರೆಗಳನ್ನು ನೀಗಿಸಿಕೊಳ್ಳಲು ಕೆಳಗೆ ಕೊಟ್ಟಿರುವ ಶ್ರೀ ಹರೇ ಕೃಷ್ಣ ಮಹಾಮಂತ್ರವನ್ನು ದಿನವೂ ಜಪಿಸಬೇಕೆಂದು ತಿಳಿಸುತ್ತಾರೆ.

ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ II
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ II

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+