ಹಂದಿಜ್ವರಕ್ಕೆ ಮತ್ತೆ ನಾಲ್ಕು ಬಲಿ

ಕೆಂಪೇಗೌಡ ರಸ್ತೆಯ ಸೇಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ಪುಷ್ಪ ಲತಾ (35), ಜಯನಗರದ ಸಾಗರ್ ಆಸ್ಪತ್ರೆಯಲ್ಲಿ ನಾಗರಾಜು (38), ಚಾಮರಾಜಪೇಟೆ ಸಮೀಪದ ಕಿಮ್ಸ್ ಆಸ್ಪತ್ರೆಯಲ್ಲಿ ವೆಂಕಟೇಶ್ (45) ಮತ್ತು ಸೇಂಟ್ ಪಿಲೋಮಿನಾ ಆಸ್ಪತ್ರೆಯಲ್ಲಿ ಪಿ ಮುನಿರತ್ನಂ (48) ಮೃತಪಟ್ಟಿದ್ದಾರೆ.
ತೀವ್ರ ನ್ಯೂಮೋನಿಯಾ ಬಳಲುತ್ತಿದ್ದ ಚಂದ್ರಾ ಬಡಾವಣೆಯ ನಿವಾಸಿ ಪುಷ್ಪಲತಾ ಅವರು ಆಗಸ್ಟ್ 23 ರಂದು ನಮ್ಮ ಆಸ್ಪತ್ರೆಗೆ ದಾಖಲಾಗಿದ್ದರು. ಇದಕ್ಕೂ ಮುನ್ನ ಬೇರೆ ಕಡೆ ಚಿಕಿತ್ಸೆ ಪಡೆದರೂ ಅವರು ಗುಣಮುಖರಾಗಿರಲಿಲ್ಲ ಎಂದು ಸೇಂಟ್ ಮರ್ಥಾಸ್ ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications