ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸೋಮಣ್ಣ ಸೋಲು ಬೇಸರ ತಂದಿದೆ : ಸಿಎಂ
ಫಲಿತಾಂಶದ ನಂತರ ತೀವ್ರ ಬೇಸರದಿಂದಲೇ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ, ಗೋವಿಂದರಾಜ ನಗರ ಮತ್ತು ಚನ್ನಪಟ್ಟಣದಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಈ ಎರಡು ಕ್ಷೇತ್ರಗಳು ಬಿಜೆಪಿ ಕ್ಷೇತ್ರಗಳಲ್ಲ, ಆದರೂ ನಾವು ಅಲ್ಲಿ ಎರಡನೇ ಸ್ಥಾನದಲ್ಲಿ ಇದ್ದೇವೆ. ಸರಕಾರ ಅಭಿವೃದ್ಧಿ ಕಾರ್ಯಗಳು ಜನರಿಗೆ ತಲುಪಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೇವೆ ಎಂದು ಯಡಿಯೂರಪ್ಪ ವಿವರಿಸಿದರು.
ನಮ್ಮ ನಿರೀಕ್ಷೆ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ನಂಬಿಕೆ ಇತ್ತು. ಒಂದು ವಿಷಯ ಸ್ಪಷ್ಟವೆಂದರೆ, ಕೊಳ್ಳೇಗಾಲ ಮತ್ತು ಚಿತ್ತಾಪುರದಲ್ಲಿ ಬಿಜೆಪಿ ಪ್ರಬಲ ಪೈಪೋಟಿ ನೀಡಲಿದೆ ಎಂಬ ನಿರೀಕ್ಷೆಯಿಂತ್ತು. ಗೆಲುವು ಸಾಧಿಸಿದ್ದೇವೆ. ಇದು ಹೆಮ್ಮೆಯ ಸಂಗತಿ. ಸರಕಾರದ ಅಭಿವೃದ್ಧಿ ಕೆಲಸಕ್ಕಾಗಿ ಜನರು ಆಶೀರ್ವಾದ ಮಾಡಿದ್ದಾರೆ ಎಂದು ಅವರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
Comments
ಕಾಂಗ್ರೆಸ್ congress ಯಡಿಯೂರಪ್ಪ ಉಪ ಚುನಾವಣೆ v somanna bypoll chittapur ಚಿತ್ತಾಪುರ kollegal ಕೊಳ್ಳೇಗಾಲ ಪ್ರಿಯಾಕೃಷ್ಣ priyakrishna
Story first published: Saturday, August 22, 2009, 13:37 [IST]