ಕಾಪ್ಸ್ ವರದಿ : ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನ

* ಚಿತ್ತಾಪುರ-ಕಾಂಗ್ರೆಸ್
* ಕೊಳ್ಳೇಗಾಲ-ಕಾಂಗ್ರೆಸ್
* ರಾಮನಗರ-ಕಾಂಗ್ರೆಸ್
* ಚನ್ನಪಟ್ಟಣ-ಬಿಜೆಪಿ
* ಗೋವಿಂದರಾಜನಗರ-ಬಿಜೆಪಿ
ಕಾಪ್ಸ್ ಸಮೀಕ್ಷಕರು 5 ವಿಧಾನಸಭಾ ಕ್ಷೇತ್ರಗಳ 125 ಮತಗಟ್ಟೆಗಳ 6,250 ಮತದಾರರನ್ನು Probabality propartionate to size (PPS) method ಮೂಲಕ ಸಮೀಕ್ಷೆಗೆ ಮತ ಚಲಾವಣೆಯ ಬಳಿಕ ಪ್ರಶ್ನಾವಳಿಗಳ ಮೂಲಕ ಮತದಾರರ ಅಭಿಪ್ರಾಯಗಳನ್ನು ಸಂಗ್ರಹಿಸಿತು. (ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ 25 ಮತಗಟ್ಟೆಗಳನ್ನು ಸಮೀಕ್ಷೆಗಾಗಿ ಆಯ್ದುಕೊಳ್ಳಲಾಗಿತ್ತು.)
ಮತಗಟ್ಟೆಗಳ ವ್ಯಾಪ್ತಿಗಳಲ್ಲಿ 100 ಮತದಾರರನನ್ನು random ಮಾದರಿಯಲ್ಲಿ ಸಮೀಕ್ಷೆಗೆ ಆರಿಸಿಕೊಂಡು ವೈಜ್ಞಾನಿಕವಾದ Systematic ramdom sampling technique ಮುಖೇನ ಮತದಾರರ ಅಭಿಪ್ರಾಯಗಳನ್ನು ಸಂಗ್ರಹಿಸಿತು. 5 ವಿಧಾನಸಭಾ ಕ್ಷೇತ್ರ x 125 ಮತಗಟ್ಟೆಗಳು x 50 ಮತದಾರರು = 6,250 ಮತದಾರರು.
ಕಾಪ್ಸ್ ಮತಗಟ್ಟೆ ಸಮೀಕ್ಷೆಯಲ್ಲಿ 130 ಜನ ಸಮೀಕ್ಷಕರು ಭಾಗವಹಿಸಿದ್ದು, ಒಟ್ಟು ಮತದಾರರ ಅಭಿಪ್ರಾಯಗಳನ್ನು ಸಂಗ್ರಹಿಸಲು ಅನುಕೂಲವಾಗುವಂತೆ 18 ಪ್ರಶ್ನೆಗಳ ಪ್ರಶ್ನಾವಳಿಗಳನ್ನು ಮತದಾರರಿಗೆ ಕೊಡಲಾಗಿತ್ತು. ಇದೆಲ್ಲದರ ಒಟ್ಟು ಸಾರಾಂಶವಾಗಿ 5 ಕ್ಷೇತ್ರಗಳ ಉಪ ಚುನಾವಣೆಯಲ್ಲಿ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ಆಡಳಿತಾರೂಢ ಬಿ.ಜೆ.ಪಿ. 2 ಸ್ಥಾನಗಳಲ್ಲಿ ಜಯಗಳಿಸಲಿದ್ದು ಸಮೀಕ್ಷೆಯಲ್ಲಿ ಗೋಚರವಾದಂತೆ ಜೆ.ಡಿ.ಎಸ್ ಯಾವುದೇ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದಿಲ್ಲ.
ಸಮೀಕ್ಷೆಯ ಸಾರಾಂಶ :
ರಾಜ್ಯದಲ್ಲಿ ಸ್ಥಿರತೆ ಕಾಪಾಡಲು ಯಾವ ರಾಜಕೀಯ ಪಕ್ಷದಿಂದ ಸಾಧ್ಯ ?
ಬಿಜೆಪಿ 40%
ಕಾಂಗ್ರೆಸ್ 37%
ಜೆಡಿಎಸ್ 23 %
ಶಾಸಕರ ಪಕ್ಷಾಂತರ ಪ್ರಹಸನದಿಂದ ರಾಜ್ಯದ ಅಭಿವೃದ್ಧಿಯಲ್ಲಿ ಸ್ಥಿರತೆ ಉಂಟಾಗಿದೆಯೇ ?
ಹೌದು 40%
ಇಲ್ಲ 60%
ಉಪ ಚುನಾವಣೆ ರಾಜ್ಯಕ್ಕೆ ಅಗತ್ಯವಿತ್ತೇ ?
ಹೌದು 35%
ಇಲ್ಲ 65%
ರಾಜ್ಯದ ಆಡಳಿತ ಸುಧಾರಣೆ ನಿಟ್ಟಿನಲ್ಲಿ ಯಾವ ರಾಜಕೀಯ ಪಕ್ಷಕ್ಕೆ ಮತದಾರರ ಬೆಂಬಲ ಇದೆ ?
ಬಿಜೆಪಿ 43%
ಕಾಂಗ್ರೆಸ್ 37%
ಜೆಡಿಎಸ್ 20%
(ದಟ್ಸ್ ಕನ್ನಡವಾರ್ತೆ)












Click it and Unblock the Notifications