ತಮಿಳುನಾಡಿಗೆ ಹೆಚ್ಚುವರಿ ನೀರು : ಪ್ರತಿಭಟನೆ

ಅಣೆಕಟ್ಟಿನಿಂದ ನದಿಗೆ ಮಂಗಳವಾರ 1500 ಕ್ಯುಸೆಕ್ ಹರಿಸಲಾಗುತ್ತಿತ್ತು, ಆದರೆ ಬುಧವಾರ ಈ ಪ್ರಮಾಣವನ್ನು ದಿಢೀರ್ ಹೆಚ್ಚಿಸಿ 3500 ಕ್ಯುಸೆಕ್ ನೀರು ಬಿಡಲಾಗುತ್ತಿದೆ. ಮಳೆಗಾಲ ಮುಗಿಯುವ ತನಕ ಅಣೆಕಟ್ಟಿನ ಗರಿಷ್ಟ ಮಟ್ಟವನ್ನು ಒಂದು ತಿಂಗಳಾದರೂ ಕಾಪಾಡಬೇಕಾಗಿತ್ತು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳುನಾಡು ಆಗ್ರಹಕ್ಕೆ ಮಣಿದು ಕೆಆರ್ಎಸ್ ಜಲಾಶಯದಿಂದ ನೀರು ಬಿಡುತ್ತಿಲ್ಲ. ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ನೀರು ಬಿಡಲಾಗುತ್ತಿದೆ ಎಂದು ಗೃಹ ಸಚಿವ ವಿ ಎಸ್ ಆಚಾರ್ಯ ನವದೆಹಲಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
(ದಟ್ಸ್ ಕನ್ನಡವಾರ್ತೆ)












Click it and Unblock the Notifications