ಮಾಜಿ ಶಾಸಕನ ಪತ್ನಿ ಈಗ ಭಿಕ್ಷುಕಿ !
ತುತ್ತಿನ ಚೀಲ ತುಂಬಿಸಿಕೊಳ್ಳಲು ಲಖನೌ ನಗರದ ಬೀದಿಬೀದಿಗಳಲ್ಲಿ ಅಲೆಯುತ್ತಿದ್ದ , ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಪ್ತ ವಿಶ್ವಾಸಿ ಎಂದೇ ಪರಿಗಣಿಸಲಾಗಿದ್ದ ಪ್ರೇಮಾರನ್ನು ಪತ್ತೆ ಹಚ್ಚಿದ ಸ್ಥಳೀಯ ವರದಿಗಾರರೆದರು ಆಕೆ ತನ್ನ ದುರಂತದ ಕಥೆಯನ್ನುಬಿಚ್ಚಿಟ್ಟಿದ್ದಾರೆ.
ಪತಿ ಸೂರಜ್ 2007 ರಲ್ಲಿ ಮೃತಪಟ್ಟ ನಂತರ ನನ್ನ ಜೀವನದ ಗತಿಯೇ ಬದಲಾಯಿತು. ಮಗನಿಗೆ ನನ್ನ ಜತೆ ಯಾವುದೇ ಸಂಬಂಧ ಇಟ್ಟುಕೊಳ್ಳುವುದು ಬೇಕಿಲ್ಲ. ಅಪ್ಪ ಸತ್ತ ಮೇಲೆ ಸಂಪೂರ್ಣವಾಗಿ ಬದಲಾದ ಆತ ನನ್ನನ್ನು ಬಲವಂತವಾಗಿ ಮನೆಯಿಂದ ಹೊರಹಾಕಿದ. ನನ್ನ ಪೋಷಣೆಯನ್ನು ನಾನೇ ನೋಡಿಕೊಳ್ಳುವಂತೆ ಹೇಳಿದ. ಕೆಲ ದಿನಗಳ ಹಿಂದೆ ಪೂರ್ವಜರ ಮನೆಯನ್ನು ಮಾರುವುದಕ್ಕೆ ಮಗ ಮುಂದಾದ. ಅದನ್ನು ವಿರೋಧಿ ಸಿದ್ದಕ್ಕೆ ಮನೆಯಿಂದ ಹೊರಹಾಕಿದ ಎಂದು ಹೇಳಿದ್ದಾರೆ.
ಪ್ರೇಮಾರ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸ್ಥಳೀಯ ವರದಿಗಾರರು, ಸಹಾಯಕ್ಕಾಗಿ ಜಿಲ್ಲಾಡಳಿತದ ನೆರವು ಕೋರಿದ್ದಾರೆ. ಮಾಜಿ ಶಾಸಕರ ಪತ್ನಿ ಭಿಕ್ಷೆ ಬೇಡುತ್ತಿದ್ದ ವಿಷಯ ತಿಳಿದು ಆಘಾತ ಮತ್ತು ಆಶ್ಚರ್ಯವೂ ಆಯಿತು' ಎಂದು ಗೋಂಡಾದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಖ್ಲಾಲ್ ಭಾರ್ತಿ ಹೇಳಿದ್ದಾರೆ. ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದ್ದು, ಪ್ರೇಮಾದೇವಿಗೆ ಸಾಧ್ಯವಾದ ಎಲ್ಲ ನೆರವನ್ನು ಒದಗಿಸುವುದಾಗಿ ಅವರು ಭರವಸೆ ನೀಡಿದ್ದಾರೆ.
ಪ್ರೇಮಾ ಅವರಿಗೆ ನೆರವು ಕಲ್ಪಿಸುವ ಸಂಬಂಧ ಮುಖ್ಯಮಂತ್ರಿ ಮಾಯಾವತಿ ಅವರನ್ನು ಸಂಪರ್ಕಿಸುವುದಾಗಿ ಮುಖ್ಯ ಅಭಿವೃದ್ಧಿ ಅಧಿಕಾರಿ ರಾಮ್ದಾಸ್ ಹೇಳಿದ್ದಾರೆ. ಗೋಂಡಾ ಪಟ್ಟಣದಿಂದ 35 ಕಿ.ಮೀ ದೂರದಲ್ಲಿರುವ ಬಲರಾಮ್ಪುರ ಜಿಲ್ಲೆಯ ಉತ್ರೌಲ ವಿಧಾನಸಭೆ ಕ್ಷೇತ್ರವನ್ನು ಸೂರಜ್ ಲಾಲ್ ಪ್ರತಿನಿಧಿಸಿದ್ದರು.
(ಏಜನ್ಸೀಸ್)