ಎಲ್ಲಾ ಭಾಷೆಗಳೂ ಶ್ರೀಮಂತ : ಯುಆರ್ಎ
ಬೆಂಗಳೂರು,
ಆ. 14 : ಭಾರತ ಬಹುಭಾಷೆ ಮತ್ತು ಸಂಸ್ಕೃತಿಗಳಿಂದ ಕೂಡಿದ ದೇಶ. ಕನ್ನಡ, ತೆಲುಗು, ತಮಿಳು ಸೇರಿದಂತೆ ಪ್ರತಿಯೊಂದು ಭಾಷೆಯೂ ಸಾಹಿತ್ಯ ದೃಷ್ಟಿಯಿಂದ ಬಹಳ ಶ್ರೀಮಂತಿಕೆ ಹೊಂದಿದೆ. ಹೀಗಿರುವಾಗ ಕನ್ನಡ ಮತ್ತು ತಮಿಳು ಭಾಷಿಗರು ಪರಸ್ಪರ ವಿಚಾರ ವಿನಿಮಯ ಮೂಲಕ ನಮ್ಮ ಕಲೆ ಮತ್ತು ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಯು ಆರ್ ಅನಂತಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. id="toptextpromo">ಅಖಿಲ
ಭಾರತ ಲೇಖಕಿಯರ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಿದ್ದ ಅನಂತಮೂರ್ತಿ, ಸಾಹಿತ್ಯದ ಬೆಳವಣಿಗೆಯ ದೃಷ್ಟಿಯಿಂದ ದೇಶೀಭಾಷೆಗಳ ನಡುವಿನ ಸಂಬಂಧ, ಸಂಪರ್ಕ ಜಾಸ್ತಿಯಾಗಬೇಕು. ನಮ್ಮಲ್ಲಿ ಒಂದು ಸ್ಥಳೀಯ ಭಾಷೆಯು ಇನ್ನೊದು ಭಾಷೆಯಿಂದ ಕಲಿಯಲು ಆಸಕ್ತಿ ತೋರುತ್ತಿಲ್ಲ. ಇಂಗ್ಲಿಷ್ ವ್ಯವಹಾರಿಕ ಭಾಷೆಯಾಗಿರುವುದರಿಂದ ಅದಕ್ಕೆ ಜಾಗತಿಕ ಮನ್ನಣೆ ಲಭಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications