ಪೂಜಾರಿ ಬುಡಬುಡಿಕೆ ಇದ್ದಂತೆ : ಬಿಜೆಪಿ
ಬೆಂಗಳೂರು,
ಆ. 13 : ರಾಜ್ಯದಲ್ಲಿ ಉಪಚುನಾವಣೆಗಳ ಪ್ರಚಾರ ಭರಾಟೆ ತೀವ್ರಗೊಂಡಿದ್ದು, ಮತದಾರ ಸೆಳೆಯಲು ರಾಜಕೀಯ ಪಕ್ಷಗಳು ಭಾರಿ ಸಾಹಸ ನಡೆಸಿವೆ. ವಿವಿಧ ಪಕ್ಷಗಳ ಮುಖಂಡರ ಆರೋಪ ಪ್ರತ್ಯಾರೋಪಗಳು ಜನರಿಗೆ ಮನರಂಜನೆ ಒದಗಿಸಿರುವುದಂತೂ ಸುಳ್ಳಲ್ಲ. id="toptextpromo">ಪ್ರಚಾರದ
ವೇಳೆಯಲ್ಲಿ ಸರಕಾರದ ವಿರುದ್ಧ ಟೀಕೆ ಮಾಡಿರುವವರ ವಿರುದ್ಧ ಬಿಜೆಪಿ ವಕ್ತಾರ ಧನಂಜಯಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರನ್ನು ಬುಡುಬುಡಿಕೆಗೆ ಹೋಲಿಸಿದ್ದರೆ, ಮಾಜಿ ಪ್ರಧಾನಿ ಹಳೆಯ ಗ್ರಾಮಾ ಫೋನ್ ಗೆ ಹೋಲಿಸಿ ಲೇವಡಿ ಮಾಡಿದ್ದಾರೆ. ಮತದಾರರನ್ನು ಓಲೈಸಲು ಜೆಡಿಎಸ್ ಮುಖಂಡ ಎಚ್ ಡಿ ರೇವಣ್ಣ ಅವರ ವಿದ್ಯುತ್ ಖರೀದಿಗೆ ಸಂಬಂಧಿಸಿದಂತೆ ಸುಳ್ಳು ಆರೋಪದಲ್ಲಿ ನಿರತರಾಗಿದ್ದಾರೆ. ಅವರು ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಕಿಡಿಕಾರಿದರು. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications