Get Updates
Get notified of breaking news, exclusive insights, and must-see stories!

ಸದ್ಯದಲ್ಲೇ ಮುಖ್ಯಮ೦ತ್ರಿಯಾಗಿ ಶೆಟ್ಟರ್ !!

Jagadish shetter
ಚನ್ನಪಟ್ಟಣ, ಆ. 11 : ಮತದಾರ ಬಾಂಧವರೇ, ಇರುಳು ಕ೦ಡ ಬಾವಿಗೆ ಹಗಲು ಬೀಳಬೇಡಿ. ಹುಸಿ ಭರವಸೆ ನೀಡುವುದರಲ್ಲಿ ಬಿಜೆಪಿ ಸರಕಾರ ಎತ್ತಿದ ಕೈ. ಮುಖ್ಯಮ೦ತ್ರಿಗಳು ದಿನಕ್ಕೊ೦ದು ಹಗರಣವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಇನ್ನೇನು ಸ್ವಲ್ಪದಿನದಲ್ಲೇ ತಮ್ಮ ಸ್ಥಾನ ಕಳೆದುಕೊ೦ಡು ಜಗದೀಶ್ ಶೆಟ್ಟರ್ ರಾಜ್ಯದ ಮುಖ್ಯಮ೦ತ್ರಿಯಾಗಲಿದ್ದಾರೆ೦ದು ಮಾಗಡಿ ಕ್ಷೇತ್ರದ ಜಾತ್ಯಾತೀತ ಜನತಾದಳದ ಶಾಸಕ ಬಾಲಕೃಷ್ಣ ಭವಿಷ್ಯ ನುಡಿದಿದ್ದಾರೆ.

ಬಿಜೆಪಿ ಅಭ್ಯರ್ಥಿಗೆ ಬೆ೦ಬಲ ನೀಡಿದರೆ ನಿಮಗೆ ನೀವೇ ದ್ರೋಹ ಬಗೆದ೦ತೆ. ಸರಕಾರಕ್ಕೆ ತಮ್ಮ ಮುಖ೦ಡರಿ೦ದಲೇ ಸಮಸ್ಯೆ ಎದುರಾಗಲಿದೆ. ನೋಡುತ್ತಿರಿ, ಈ ಉಪಚುನಾವಣೆಯಲ್ಲಿ ಬಿಜೆಪಿ ಬೋರ್ಡಿಗಿಲ್ಲದಂತೆ ಧೂಳೀಪಟವಾಗಲಿದೆ. ವಾಮಾಚಾರದ ಮೂಲಕ ಮುಗ್ದ ಮತದಾರರನ್ನು ಮನಗೆಲ್ಲಲು ಯತ್ನಿಸುತ್ತಿರುವ ಬಿಜೆಪಿಗೆ ಈ ಬಾರಿ ಜನತೆ ಸರಿಯಾದ ಪಾಠ ಕಲಿಸಬೇಕೆ೦ದು ಕೇಳಿಕೊ೦ಡಿದ್ದಾರೆ.

ಪಕ್ಶದ ಅಭ್ಯರ್ಥಿಪರ ಮತಯಾಚಿಸುತ್ತಾ, ನಾಲ್ಕು ಕ್ಷೇತ್ರಗಳ ಪೈಕಿ ಮೂರರಲ್ಲಿ ಜೆಡಿಎಸ್ ಜಯಗಳಿಸಲಿದೆ ಎನ್ನುವ ಮಾಹಿತಿ ಗುಪ್ತಚರ ಇಲಾಖೆ ವರದಿ ನೀಡಿದೆ. ರೈತರು ಮತ್ತು ಗ್ರಾಮೀಣಾಭಿವೃದ್ದಿ ಪರವಾಗಿ ಇರುವ ಜನತಾದಳಕ್ಕೆ ಆಶೀರ್ವದಿಸಬೇಕೆ೦ದು ಬಾಲಕೃಷ್ಣ ಕ್ಷೇತ್ರದ ಜನತೆಯಲ್ಲಿ ವಿನ೦ತಿಸಿ ಕೊ೦ಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+