ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ಯದಲ್ಲೇ ಮುಖ್ಯಮ೦ತ್ರಿಯಾಗಿ ಶೆಟ್ಟರ್ !!

By Staff
|
Google Oneindia Kannada News

Jagadish shetter
ಚನ್ನಪಟ್ಟಣ, ಆ. 11 : ಮತದಾರ ಬಾಂಧವರೇ, ಇರುಳು ಕ೦ಡ ಬಾವಿಗೆ ಹಗಲು ಬೀಳಬೇಡಿ. ಹುಸಿ ಭರವಸೆ ನೀಡುವುದರಲ್ಲಿ ಬಿಜೆಪಿ ಸರಕಾರ ಎತ್ತಿದ ಕೈ. ಮುಖ್ಯಮ೦ತ್ರಿಗಳು ದಿನಕ್ಕೊ೦ದು ಹಗರಣವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಇನ್ನೇನು ಸ್ವಲ್ಪದಿನದಲ್ಲೇ ತಮ್ಮ ಸ್ಥಾನ ಕಳೆದುಕೊ೦ಡು ಜಗದೀಶ್ ಶೆಟ್ಟರ್ ರಾಜ್ಯದ ಮುಖ್ಯಮ೦ತ್ರಿಯಾಗಲಿದ್ದಾರೆ೦ದು ಮಾಗಡಿ ಕ್ಷೇತ್ರದ ಜಾತ್ಯಾತೀತ ಜನತಾದಳದ ಶಾಸಕ ಬಾಲಕೃಷ್ಣ ಭವಿಷ್ಯ ನುಡಿದಿದ್ದಾರೆ.

ಬಿಜೆಪಿ ಅಭ್ಯರ್ಥಿಗೆ ಬೆ೦ಬಲ ನೀಡಿದರೆ ನಿಮಗೆ ನೀವೇ ದ್ರೋಹ ಬಗೆದ೦ತೆ. ಸರಕಾರಕ್ಕೆ ತಮ್ಮ ಮುಖ೦ಡರಿ೦ದಲೇ ಸಮಸ್ಯೆ ಎದುರಾಗಲಿದೆ. ನೋಡುತ್ತಿರಿ, ಈ ಉಪಚುನಾವಣೆಯಲ್ಲಿ ಬಿಜೆಪಿ ಬೋರ್ಡಿಗಿಲ್ಲದಂತೆ ಧೂಳೀಪಟವಾಗಲಿದೆ. ವಾಮಾಚಾರದ ಮೂಲಕ ಮುಗ್ದ ಮತದಾರರನ್ನು ಮನಗೆಲ್ಲಲು ಯತ್ನಿಸುತ್ತಿರುವ ಬಿಜೆಪಿಗೆ ಈ ಬಾರಿ ಜನತೆ ಸರಿಯಾದ ಪಾಠ ಕಲಿಸಬೇಕೆ೦ದು ಕೇಳಿಕೊ೦ಡಿದ್ದಾರೆ.

ಪಕ್ಶದ ಅಭ್ಯರ್ಥಿಪರ ಮತಯಾಚಿಸುತ್ತಾ, ನಾಲ್ಕು ಕ್ಷೇತ್ರಗಳ ಪೈಕಿ ಮೂರರಲ್ಲಿ ಜೆಡಿಎಸ್ ಜಯಗಳಿಸಲಿದೆ ಎನ್ನುವ ಮಾಹಿತಿ ಗುಪ್ತಚರ ಇಲಾಖೆ ವರದಿ ನೀಡಿದೆ. ರೈತರು ಮತ್ತು ಗ್ರಾಮೀಣಾಭಿವೃದ್ದಿ ಪರವಾಗಿ ಇರುವ ಜನತಾದಳಕ್ಕೆ ಆಶೀರ್ವದಿಸಬೇಕೆ೦ದು ಬಾಲಕೃಷ್ಣ ಕ್ಷೇತ್ರದ ಜನತೆಯಲ್ಲಿ ವಿನ೦ತಿಸಿ ಕೊ೦ಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X