ಕೊಚ್ಚಿ ಹೋಗಿದ್ದ ಬಾಲಕ ಅಭಿಷೇಕ್ ಜೀವಂತ?
ಬೆಂಗಳೂರು,
ಆ.8: ಮೇ 31ರಂದು ಲಿಂಗರಾಜಪುರದ ಬಳಿ ಮೋರಿಯಲ್ಲಿ ಕೊಚ್ಚಿ ಹೋಗಿದ್ದ ಬಾಲಕ ಅಭಿಷೇಕ್ ಬದುಕುಳಿದಿದ್ದಾನೆ ಎನ್ನುವ ವದಂತಿ ಹಬ್ಬಿದೆ. ಮಳೆ ನೀರಲ್ಲಿ ಕೊಚ್ಚಿಹೋಗಿದ್ದ ಈ ಬಾಲಕನನ್ನು ಶನಿವಾರ ಮಧ್ಯಾಹ್ನ ಮನೆಗೆ ಕರೆತರಲಾಗುವುದು ಎಂದು ಪೋಷಕರು ನೆರೆಹೊರೆಯವರ ಬಳಿ ಹೇಳಿ ಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಭೇಟಿ ನೀಡಿದ ಮಾಧ್ಯಮದವರಿಗೆ ಅಭಿಷೇಕ್ನ ತಾಯಿ ಭಾರತಿ ಪ್ರಕಾಶ್ಹೇಳಿದ್ದು ಹೀಗೆ.-
'ನಾನು ಶುಕ್ರವಾರ ಕಾಚರಕನಹಳ್ಳಿಯಲ್ಲಿ ನಡೆದುಕೊಂಡುಹೋಗುತ್ತಿದ್ದಾಗ, ಅಭಿಷೇಕ್ ಓದುತ್ತಿದ್ದ ಶಾಲೆಯಲ್ಲಿನ ಪರಿಚಿತರೊಬ್ಬರುಬಂದು, ನಿಮ್ಮ ಮಗ ಬದುಕಿದ್ದಾನೆ. ನಮ್ಮ ಬಳಿ ಇದ್ದಾನೆ. ಅವನನ್ನು ಶನಿವಾರನಿಮ್ಮ ಮನೆಗೆ ಕಳುಹಿಸಲಾಗುವುದು ಎಂದರು. ಮೋರಿಯಲ್ಲಿ ಕೊಚ್ಚಿಹೋದನನ್ನ ಮಗ ಬದುಕಿದ್ದಾನೆ ಎಂಬ ವಿಷಯ ತಿಳಿದು ನನಗೆ ತುಂಬಾಸಂತೋಷವಾಗಿದೆ. ಆದರೆ, ನೀರಿನಲ್ಲಿ ಕೊಚ್ಚಿ ಹೋದ ಮಗು ಹೇಗೆಬದುಕುಳಿದಿರಬಹುದು ಎಂಬುದು ನನಗೆ ಆಶ್ಚರ್ಯ ತಂದಿದೆ. ಇದನ್ನುನಂಬಲೂ ಸಾಧ್ಯವಾಗುತ್ತಿಲ್ಲ. id="toptextpromo">
ಮಗು
ಸಿಕ್ಕಿರುವ ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರಿಗೆ ಮಾಹಿತಿಏಕೆ ನೀಡಲಿಲ್ಲ ಎಂದು ಪ್ರಶ್ನಿಸಿದಾಗ, 'ಮಗು ನಮ್ಮ ಕೈಗೆ ಸಿಕ್ಕಿದ ಬಳಿಕಪೊಲೀಸರಿಗೆ ವಿಷಯ ತಿಳಿಸಲು ನಿರ್ಧರಿಸಿದ್ದೇವೆ. ಹೀಗಾಗಿ, ನಾವುಯಾರಿಗೂ ಹೇಳಲಿಲ್ಲ" ಎಂದು ತಿಳಿಸಿದರು. ಅಭಿಷೇಕ್ ಬದುಕಿರುವ ಬಗ್ಗೆಬಾಲಕನ ತಾಯಿಯಿಂದ ವಿಷಯ ಗೊತ್ತಾಗುತ್ತಿದ್ದಂತೆಯೇ ಆಪ್ರದೇಶದಲ್ಲಿರುವ ಜನರು ಅವರ ಮನೆಗೆ ಬಂದು ಹೋಗುತ್ತಿದ್ದಾರೆ. id='are-slot-1' class='oiad oi-axt oiadv'> id='top-searched-articles'>(ಸ್ನೇಹಸೇತು:
ವಿಜಯಕರ್ನಾಟಕ)











Click it and Unblock the Notifications