ಶಾಸಕ ಪತ್ನಿ ಜೊತೆಗೆ ಅನೈತಿಕ ಸಂಬಂಧವಿತ್ತು : ಅತುಲ್

ಅತುಲ್ ತಾನಾಗಿಯೇ ಸಿಓಡಿಗೆ ನೀಡಿದ ಹೇಳಿಕೆಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ತನಗೆ ಅಡಿಕೆ ವ್ಯಾಪಾರ ಇದ್ದಿದ್ದರಿಂದ ಅಗಾಗ ಕಾರ್ಕಳಕ್ಕೆ ಹೋಗಿ ಬರುವ ಕೆಲಸವಿರುತ್ತಿತ್ತು. ಆಗ ತಾನು ಮತ್ತು ಪದ್ಮಪ್ರಿಯಾ 5-6 ಬಾರಿ ಖಾಸಗಿ ಲಾಡ್ಜ್ ಒಂದರಲ್ಲಿ ಉಳಿದುಕೊಂಡಿದ್ದೆವು. ತನಗೂ ಮತ್ತು ಪದ್ಮಪ್ರಿಯಾಗೂ ಅನೈತಿಕ ಸಂಬಂಧವಿದ್ದದ್ದು ನಿಜ ಎಂದು ಸಿಓಡಿಗೆ ಹೇಳಿಕೆ ನೀಡಿದ್ದಾರೆ.
ಶಾಸಕ ರಘುಪತಿ ಭಟ್ ಸಿಒಡಿ ಪ್ರತಿ, ಪ್ರಧಾನ ಸಾಕ್ಷಿಗಳಾದ ಮನೆಕೆಲಸದಾಕೆ ಮತ್ತು ತನ್ನ ಪುತ್ರ ರೋಹನ್ ಹೇಳಿಕೆ ಪ್ರತಿಗಳನ್ನು ಮಾಹಿತಿ ಹಕ್ಕು ಕಾಯ್ದೆ ಅನ್ವಯ ಪಡೆದುಕೊಂಡು ತಮ್ಮ ವಕೀಲ ಪ್ರದೀಪ್ ಕುಮಾರ್ ಮೂಲಕ ಉಡುಪಿಯ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ದೂರು ಸ್ವಿಕರಿಸಿರುವ ಸಿವಿಲ್ ನ್ಯಾಯಾಧೀಶರು ಆಗಸ್ಟ್ ಮೂರರ ಒಳಗೆ ವರದಿ ಸಲ್ಲಿಸುವಂತೆ ಮಣಿಪಾಲ ಠಾಣಾಧಿಕಾರಿಗೆ ಆದೇಶ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications