ನೇಮಿತ ಗುಜರಾತ್ ರಾಜ್ಯಪಾಲ ದ್ವಿವೇದಿ ನಿಧನ
ನವದೆಹಲಿ, ಆ.1: ಗುಜರಾತ್ ರಾಜ್ಯಪಾಲರಾಗಿ ನೇಮಕವಾಗಿದ್ದ ಡಿ ಎನ್ ದ್ವಿವೇದಿ(74) ಶನಿವಾರ (ಆ.1) ಮುಂಜಾನೆ ನಿಧನರಾಗಿದ್ದಾರೆ. ಪಿತ್ತಜನಕಾಂಗದ ತೊಂದರೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಪಿತ್ತಜನಕಾಂಗದ ತೊಂದರೆಯಿಂದ ತೀವ್ರವಾಗಿ ಬಳಲಿದ್ದ ಅವರನ್ನು ಶ್ರೀ ಗಂಗಾರಾಮ್ ಆಸ್ಪತ್ರೆಯ ಶೀಘ್ರ ನಿಗಾ ಘಟಕದಲ್ಲಿ ಇಡಲಾಗಿತ್ತು. ಜುಲೈ 23ರಂದೇ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ನವಲ್ ಕಿಶೋರ್ ಶರ್ಮಾ ಅವರ ಅಧಿಕಾರ ಅವಧಿ ಜುಲೈ 24ಕ್ಕೆ ಅಂತ್ಯವಾದ ಕಾರಣ ರಾಜ್ಯಪಾಲರ ಪದವಿಗೆ ದ್ವಿವೇದಿ ಆಯ್ಕೆಯಾಗಿದ್ದರು. ಆರೋಗ್ಯ ಸಮಸ್ಯೆಯ ಕಾರಣ ಅವರು ಪದವಿಯನ್ನು ಸ್ವೀಕರಿಸಿರಲಿಲ್ಲ. ಹಾಗಾಗಿ ಮಹಾರಾಷ್ಟ್ರ ರಾಜ್ಯಪಾಲ ಎಸ್ ಸಿ ಜಮೀರ್ ಅವರಿಗೆ ಗುಜರಾತ್ ನ ಹೆಚ್ಚುವರಿ ಅಧಿಕಾರ ನೀಡಲಾಗಿತ್ತು.
(ಏಜನ್ಸೀಸ್)











Click it and Unblock the Notifications