ಜಮ್ಮು ಕಾಶ್ಮೀರ : ಒಮರ್ ಅಬ್ದುಲ್ಲಾ ರಾಜೀನಾಮೆ

ಇದು ನನ್ನ ಮೇಲೆ ಆರೋಪಿಸಲಾಗುತ್ತಿರುವ ಸುಳ್ಳು ಆಪಾದನೆ. ಆದರೆ ರಾಜ್ಯದ ಜನರಿಗೆ ನನ್ನ ಮೇಲಿರುವ ವಿಶ್ವಾಸ ಕಮ್ಮಿಯಾಗಬಾರದು. ಪಿಡಿಪಿ ಸದಸ್ಯರೊಬ್ಬರು ಇಂತಹ ಸುಳ್ಳು ಆರೋಪಗಳನ್ನು ನನ್ನ ವಿರುದ್ಧ ಮಾಡುತ್ತಿರುವುದು ದುರಾದೃಷ್ಟ. ನಾನು ನಿರ್ದೋಷಿ ಎಂದು ಸಾಬೀತಾಗುವ ತನಕ ತನಗೆ ನೈತಿಕವಾಗಿ ಆ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ ಎಂದು ತೀರಾ ಭಾವುಕರಾಗಿ ಸದನದಿಂದ ಹೊರ ನಡೆದರು.
ಜಮ್ಮುಕಾಶ್ಮೀರದ ವಿಧಾನಸಭೆಯಲ್ಲಿಂದು ನಾಟಕೀಯ ಬೆಳವಣಿಗೆಯಲ್ಲಿ ಪಿಡಿಪಿ ಸಂಸದ ಮುಜಾಫರ್ ಬಿಯಾಗ್ ಮಾತನಾಡುತ್ತ, ಮೂರು ವರ್ಷಗಳ ಹಿಂದಿನ ಶ್ರೀನಗರ ಲೈಂಗಿಕ ಹಗರಣದಲ್ಲಿ ಒಮರ್ ಅಬ್ದುಲ್ಲಾ ಅವರೂ ಒಳಗೊಂಡಿದ್ದಾರೆ. ಮುಖ್ಯಮಂತ್ರಿಯಾಗಿ ಮುಂದುವರಿಯಲು ಒಮರ್ ಅಬ್ದುಲ್ಲಾ ಅವರಿಗೆ ನೈತಿಕ ಹಕ್ಕು ಇಲ್ಲ ಆಪಾದಿಸಿ ರಾಜೀನಾಮೆಗೆ ಒತ್ತಾಯಿಸಿದ್ದರು.
(ಏಜನ್ಸೀಸ್)












Click it and Unblock the Notifications