ಜಮ್ಮು ಕಾಶ್ಮೀರ : ಒಮರ್ ಅಬ್ದುಲ್ಲಾ ರಾಜೀನಾಮೆ

Omar abdullah
ಶ್ರೀನಗರ, ಜು. 28 : ಕಳೆದ ವರ್ಷದ ಶ್ರೀನಗರ ಲೈಂಗಿಕ ಹಗರಣವೊ೦ದರಲ್ಲಿ ತಾನೂ ಭಾಗಿಯಾಗಿದ್ದೇನೆಂಬ ಪಿಡಿಪಿ ನಾಯಕರುಗಳ ಹೇಳಿಕೆಗೆ ಪ್ರತಿಭಟಿಸಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಿಡಿಪಿ ನಾಯಕರುಗಳ ಹೇಳಿಕೆಯಿಂದ ಭಾವೋದ್ರೇಕಕ್ಕೆ ಒಳಗಾದ ಒಮರ್ ಈ ಹಗರಣದಲ್ಲಿ ತಾನು ನಿರ್ದೋಷಿಯೆಂದು ಸಾಬೀತಾಗುವ ತನಕ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲಾರೆ ಎಂದು ಹೇಳಿಕೆ ನೀಡಿದ್ದಾರೆ.

ಇದು ನನ್ನ ಮೇಲೆ ಆರೋಪಿಸಲಾಗುತ್ತಿರುವ ಸುಳ್ಳು ಆಪಾದನೆ. ಆದರೆ ರಾಜ್ಯದ ಜನರಿಗೆ ನನ್ನ ಮೇಲಿರುವ ವಿಶ್ವಾಸ ಕಮ್ಮಿಯಾಗಬಾರದು. ಪಿಡಿಪಿ ಸದಸ್ಯರೊಬ್ಬರು ಇಂತಹ ಸುಳ್ಳು ಆರೋಪಗಳನ್ನು ನನ್ನ ವಿರುದ್ಧ ಮಾಡುತ್ತಿರುವುದು ದುರಾದೃಷ್ಟ. ನಾನು ನಿರ್ದೋಷಿ ಎಂದು ಸಾಬೀತಾಗುವ ತನಕ ತನಗೆ ನೈತಿಕವಾಗಿ ಆ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ ಎಂದು ತೀರಾ ಭಾವುಕರಾಗಿ ಸದನದಿಂದ ಹೊರ ನಡೆದರು.

ಜಮ್ಮುಕಾಶ್ಮೀರದ ವಿಧಾನಸಭೆಯಲ್ಲಿಂದು ನಾಟಕೀಯ ಬೆಳವಣಿಗೆಯಲ್ಲಿ ಪಿಡಿಪಿ ಸಂಸದ ಮುಜಾಫರ್ ಬಿಯಾಗ್ ಮಾತನಾಡುತ್ತ, ಮೂರು ವರ್ಷಗಳ ಹಿಂದಿನ ಶ್ರೀನಗರ ಲೈಂಗಿಕ ಹಗರಣದಲ್ಲಿ ಒಮರ್ ಅಬ್ದುಲ್ಲಾ ಅವರೂ ಒಳಗೊಂಡಿದ್ದಾರೆ. ಮುಖ್ಯಮಂತ್ರಿಯಾಗಿ ಮುಂದುವರಿಯಲು ಒಮರ್ ಅಬ್ದುಲ್ಲಾ ಅವರಿಗೆ ನೈತಿಕ ಹಕ್ಕು ಇಲ್ಲ ಆಪಾದಿಸಿ ರಾಜೀನಾಮೆಗೆ ಒತ್ತಾಯಿಸಿದ್ದರು.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+