ಬರಪೀಡಿತ ರಾಜಸ್ಥಾನಕ್ಕೆ ಹರಿದುಬಂದ ಆಕಾಶಗಂಗೆ
ಭರತಖಂಡದ ಮಹೋನ್ನತ ನದಿಗಳಲ್ಲಿ ಗಂಗಾನದಿಯೂ ಒಂದು. ಗಂಗೆ ಕೇವಲ ನೀರಲ್ಲ, ಪಾವಿತ್ರ್ಯದ ಸಂಕೇತವೂ ಹೌದು ಎನ್ನುವುದು ಹಿಂದೂಗಳ ನಂಬಿಕೆ. ಉತ್ತರಖಂಡದ ಹಿಮಾಲಯದಲ್ಲಿ ಜನಿಸಿ ಪಶ್ಚಿಮ ಬಂಗಾಲದ ಸುಂದರಬನದವರೆವಿಗೂ ಹರಿಯುವ ಗಂಗೆಯ ಪಾತ್ರ ವಿಶಾಲವಾದದ್ದು. ಆದರೆ ಉಷ್ಣವಲಯಕ್ಕೆ ಸೇರಿದ, ಬರಗಾಲಕ್ಕೆ ತುತ್ತಾಗುವ ರಾಜಸ್ತಾನವೆಲ್ಲಿ ಅಥವಾ ಚೀನಾದ ಗಿಯಾಂಗ್ ಮುನಿಸಿಪಾಲಿಟಿ ಎಲ್ಲಿ. ಅಲ್ಲಿಯವರೆಗೆ ಗಂಗೆ ತನ್ನ ಕೈಚಾಚುವುದಿಲ್ಲ. ಆದರೇನಂತೆ, ಸದಾ ನೀರಿಗೆ ಕೊರತೆ ಕಾಣುವ ರಾಜಸ್ಥಾನದಲ್ಲಿ ಈಗ ಗಂಗೆ ಅಂದರೆ ನೀರು ನಲಿದಾಡುತ್ತಿದ್ದಾಳೆ. ನೀರಿನ ಆಭಾವ ದಿನೇದಿನೇ ಕಡಿಮೆ ಆಗುತ್ತಿದೆ. ಇದಕ್ಕೆ ಕಾರಣ, ಆಕಾಶ ಗಂಗಾ!
ಮಳೆ ನೀರನ್ನು ಉಳಿಸಿಕೊಳ್ಳುವ ಮಹದಾಶೆಯ ಯೋಜನೆಯಿದು. ಈ ಪದ್ದತಿಗೆ ಮಳೆ ನೀರು ಕೊಯಿಲು ಎಂದು ಈಗೀಗ ಜನಜನಿತ. ಈ ಯೋಜನೆ ರಾಜಾಸ್ಥಾನದ ಆರು ಹಳ್ಳಿಗಳಲ್ಲಿ ಚಾಲ್ತಿಗೆ ಬಂದಿದೆ. ಯಥಾಪ್ರಕಾರ ಯೋಜನೆಗೆ ಬಂಡವಾಳ ಹರಿದುಬಂದಿರುವುದು ವಿಶ್ವಬ್ಯಾಂಕಿನಿಂದ. ಇತ್ತೀಚಿನ ವರದಿಗಳ ಪ್ರಕಾರ ವಿಶ್ವಬ್ಯಾಂಕ್ ಮತ್ತು ರಾಜಸ್ಥಾನ ಸರಕಾರದ ನಡುವೆ ಏರ್ಪಟ್ಟಿರುವ ಒಡಂಬಡಿಕೆಯ ಪ್ರಕಾರ ಆಕಾಶ ಗಂಗಾ ಯೋಜನೆಯನ್ನು ರಾಜ್ಯದ 70 ಹಳ್ಳಿಗಳಿಗೆ ವಿಸ್ತರಿಸಲಾಗುತ್ತಿದೆ. ಈ ಯೋಜನೆಯಿಂದಾಗಿ 2 ಲಕ್ಷ ಗ್ರಾಮೀಣ ಜನತೆಗೆ ನೀರು ಲಭ್ಯವಾಗುತ್ತದೆ.
ಸ್ವತಂತ್ರ ಭಾರತದ ಅತ್ಯಂತ ಜಟಿಲ ಸಮಸ್ಯೆಯೆಂದರೆ ನೀರು ಲಭ್ಯತೆ ಎನ್ನುತ್ತಾರೆ ಆಕಾಶ ಗಂಗಾ ಯೋಜನೆಯ ಪ್ರೇರಕ ಶಕ್ತಿ ಬಿ.ಪಿ. ಅಗರ್ ವಾಲ್. ಅವರು Sustainable Innovations (SI)ಸಂಸ್ಥೆಯ ಅಧ್ಯಕ್ಷರು. ಈ ಸಂಸ್ಥೆ 2007ರಲ್ಲಿ ಪ್ರಾರಂಭವಾಯಿತು. ಸುರಕ್ಷಿತ ಕುಡಿಯುವ ನೀರನ್ನು ಗ್ರಾಮೀಣ ಪ್ರದೇಶಗಳಿಗೆ ಒದಗಿಸುವುದೇ ಆಕಾಶ ಗಂಗೆಯ ಉದ್ದೇಶ. ಈ ಸಂಸ್ಥೆಯ ಇನ್ನೊಂದು ಯೋಜನೆ Arogya Ghar - whole health clinic. ಈ ಯೋಜನೆ ಕಂಡ ಯಶಸ್ಸು ವಿಶ್ವಬ್ಯಾಂಕಿನ ಪ್ರಶಸ್ತಿಗೆ ಪಾತ್ರವಾಗಿದೆ.
ಆಕಾಶ ಗಂಗಾ ಯೋಜನೆ ಕುರಿತಾದ ಸಮಗ್ರ ಲೇಖನವನ್ನು ಇಂಡಿಯಾ ನಾಲೆಡ್ಜ್ ವಾರ್ ಟನ್ ಸಂಸ್ಥೆ ತನ್ನ ವೆಬ್ ಪುಟಗಳಲ್ಲಿ ದಾಖಲಾಗಿದೆ. ಕರ್ನಾಟಕದಲ್ಲಿ ಮಳೆ ನೀರು ಕೊಯಿಲು, ಗ್ರಾಮೀಣ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಆಸಕ್ತಿಯಿರುವವರು ಓದಬಹುದು.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications