ಆಂಧ್ರ ಶಾಸಕರ ಭೇಟಿ : ಕೇಂದ್ರಕ್ಕೆ ದೂರು

Basavaraj Bommai
ಬೆಂಗಳೂರು,ಜು.17 : ಕೃಷ್ಣಾಕೊಳ್ಳದ ನೀರಾವರಿ ಯೋಜನೆ ಕಾಮಗಾರಿಗಳ ಸ್ಥಳಕ್ಕೆ ಆಂಧ್ರಪ್ರದೇಶದ ಶಾಸಕರು ಅನಧಿಕೃತ ಭೇಟಿ ನೀಡಿದ್ದ ಬಗ್ಗೆ ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರಕ್ಕೆ ದೂರನ್ನು ನೀಡಲು ಹಾಗೂ ಕೃಷ್ಣಾ ನ್ಯಾಯಧೀಕರಣ-2 ರ ಮುಂದೆ ಮಂಡಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ ಎಂದು ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಜುಲೈ 15 ರಂದು ಆಂಧ್ರ ಪ್ರದೇಶದ ತೆಲಗುದೇಶಂ ಪಕ್ಷದ 12 ಶಾಸಕರು ಹಾಗೂ ಮಾಜಿ ಸಂಸದರೊಬ್ಬರು ಆಂಧ್ರದ ಟಿ.ವಿ. ನ್ಯೂಸ್ ಚಾನಲ್ ಸಿಬ್ಬಂದಿಯೊಂದಿಗೆ ಭೀಮಾನದಿಗೆ ಅಡ್ಡಲಾಗಿ ನಿರ್ಮಿಸಿರುವ ಮುಷ್ಟೂರು ಹತ್ತಿರವಿರುವ ಕವಳೂರು ಬ್ಯಾರೇಜ್ ಮತ್ತು ಗುರಸಣಗಿ ಹತ್ತಿರವಿರುವ ಯಾದಗಿರ ಬ್ಯಾರೇಜ್ ಸ್ಥಳಕ್ಕೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಇಂದು ಜಲಸಂಪನ್ಮೂಲ ಸಚಿವರು ವಿಧಾನ ಪರಿಷತ್ತಿನಲ್ಲಿ ಸ್ವಪ್ರೇರಣೆ ಹೇಳಿಕೆ ನೀಡಿದರು.

ಕೃಷ್ಣಾ ನ್ಯಾಯಧೀಕರಣ-1 ನೀಡಿರುವ ಆದೇಶದ ಹಂಚಿಕೆಯ ಮಿತಿಯಲ್ಲಿ ಮಾತ್ರ ಕರ್ನಾಟಕವು ತನ್ನ ಹಕ್ಕಿನ ನೀರನ್ನು ಬಳಸಿಕೊಳ್ಳಲು ಯೋಜನೆಗಳನ್ನು ಹಾಕಿಕೊಂಡಿದೆ. ಆಂಧ್ರ ಪ್ರದೇಶದ ಅನಧೀಕೃತ ನೀರಾವರಿ ಯೋಜನೆಗಳಿಗೆ ನೀರು ದೊರೆಯುವುದಿಲ್ಲವೆಂಬ ಭೀತಿಯಿಂದ ತೆಲಗು ದೇಶಂ ಶಾಸಕರು ಆಂಧ್ರದ ನ್ಯೂಸ್ ಚಾನಲ್‌ನೊಂದಿಗೆ ಭೇಟಿ ನೀಡಿದ್ದಾರೆ. ಆಂಧ್ರ ಶಾಸಕರ ಈ ಅನಧಿಕೃತ ಭೇಟಿ ಅನುಚಿತ ಮತ್ತು ನ್ಯಾಯಧೀಕರಣ ನಿರ್ದೇಶನದ ಉಲ್ಲಂಘನೆಯಾಗಿರುತ್ತದೆ ಹಾಗೂ ರಾಜ್ಯಗಳ ನಡುವಿನ ಸೌಹಾರ್ದಯುತ ಸಂಬಂಧಕ್ಕೆ ಧಕ್ಕೆ ಉಂಟುಮಾಡುತ್ತದೆ. ಇಂತಹ ಕಾನೂನು ಬಾಹಿರ ಘಟನೆಗಳನ್ನು ಆಂಧ್ರ ಪ್ರದೇಶದ ಸರ್ಕಾರವು ತಡೆಯಬೇಕೆಂದು ಆಗ್ರಹಿಸುವುದಾಗಿ ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+