ಈಜಿಪ್ಟ್ :ಭಾರತ - ಪಾಕ್ ಪ್ರಧಾನಿಗಳ ಭೇಟಿ
ಶರ್ಮ್-ಎಲ್-ಶೇಖ್ (ಈಜಿಪ್ಟ್), ಜು. 16 : ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಣ ಸಂಬಂಧದಲ್ಲಿನ ಬಿಕ್ಕಟ್ಟು ಶಮನಗೊಳ್ಳುವ ಲಕ್ಷಣಗಳು ಕಂಡು ಬರತೊಡಗಿದ್ದು, ಮುಂಬೈ ದಾಳಿ ಸಂಚುಕೊರರನ್ನು ಶಿಕ್ಷಿಸಲು ಇಸ್ಲಾಮಾಬಾದ್ ಕೈಗೊಂಡಿರುವ ಕ್ರಮಗಳ ಪ್ರಗತಿಯನ್ನು ಅವಲೋಕಿಸಲು ಮನಮೋಹನ್ ಸಿಂಗ್ ಮತ್ತು ಯೂಸುಫ್ ಗಿಲಾನಿ ಇಲ್ಲಿ ಭೇಟಿಯಾಗಲಿದ್ದಾರೆ.
ಮುಂಬೈ ದಾಳಿಯ ಸೂತ್ರದಾರನೆಂದು ನಂಬಲಾದ ಜಮಾತ್-ಉದ್-ದವಾ ಸಂಘಟನೆಯ ಮುಖ್ಯಸ್ಥ ಮೊಹಮ್ಮದ್ ಹಫೀಜ್ ಸಯೀದ್ ನ ಬಂಧನ ಮತ್ತು ಬಿಡುಗಡೆ ಸಹಿತ ಎಲ್ಲಾ ವಿಷಯಗಳ ಕುರಿತು ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ಸಭೆ ಬುಧವಾರ ನಡೆಯಿತು. ಭಾರತದ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ ಮೆನನ್ ಬುಧವಾರ ಪ್ಯಾರಿಸ್ ಗೆ ಬಂದಿಳಿದ ಸ್ವಲ್ಪ ಹೊತ್ತಿನಲ್ಲೇ ಪಾಕ್ ವಿದೇಶಾಂಗ ಕಾರ್ಯದರ್ಶಿ 90 ನಿಮಿಷಗಳ ಕಾಲ ಇವರ ಜೊತೆ ಮಾತುಕತೆ ನಡೆಸಿದ್ದರು.
ಕಳೆದ ತಿಂಗಳು ಪಾಕ್ ಅಧ್ಯಕ್ಷ ಆಸೀಫ್ ಆಲಿ ಜರ್ದಾರಿ ಜತೆ ನಡೆಸಿದ ಮಾತುಕತೆ ವೇಳೆ ಪಾಕ್ ತನ್ನ ನೆಲದಿಂದ ಭಾರತದೆಡೆ ಹೊಮ್ಮುವ ಭೀತಿವಾದವನ್ನು ನಿಲ್ಲಿಸಬೇಕೆನ್ನುವ ಬಲವಾದ ಸಂದೇಶ ಪ್ರಧಾನಿ ಸಿಂಗ್ ಪಾಕ್ ಅಧ್ಯಕ್ಷರಿಗೆ ನೀಡಿದ್ದರು.
(ಏಜನ್ಸೀಸ್)












Click it and Unblock the Notifications