ವಕೀಲ ಸಂಘದ ಅಧ್ಯಕ್ಷರಾಗಿ ಪುಟ್ಟೇಗೌಡ ಆಯ್ಕೆ
ಬೆಂಗಳೂರು, ಜು. 13 : ಬೆಂಗಳೂರು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ವಕೀಲ ಕೆ ಎನ್ ಪುಟ್ಟೇಗೌಡ ಆಯ್ಕೆಯಾಗಿದ್ದಾರೆ. ತಮ್ಮ ಸಮೀಪದ ಪ್ರಸ್ಪರ್ಧಿ ಇನ್ನೊಬ್ಬ ಹಿರಿಯ ವಕೀಲ ಹಾಗೂ ಬಸವನಗುಡಿ ಕ್ಷೇತ್ರ ಮಾಜಿ ಶಾಸಕ ಕೆ ಎನ್ ಸುಬ್ಬಾರೆಡ್ಡಿ ಅವರನ್ನು 383 ಮತಗಳ ಅಂತರದಿಂದ ಸೋಲಿಸಿ ಜಯಭೇರಿ ಬಾರಿಸಿದರು.
ಮೂಲತಃ ನಾಗಮಂಗಲದವರಾದ ಪುಟ್ಟೇಗೌಡರ ಅಧಿಕಾರ ಅವಧಿ 2011ರ ವರೆಗೆ ಸಂಘದ ಕಾರ್ಯಧ್ಯಕ್ಷರಪಾಗಿ ಕಾರ್ಯನಿರ್ವಹಿಸಲಿದ್ದಾರೆ. ಸಂಘದ ಸದಸ್ಯರಾಗಿದ್ದು ಮತದಾನಕ್ಕೆ ಅರ್ಹತೆ ಪಡೆದಿದ್ದ 9,462 ವಕೀಲರ ಪೈಕಿ. 7,934 ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು. ವಿಜೇತರಾದ ಪುಟ್ಟೇಗೌಡ 2,547 ಮತಗಳನ್ನು ಪಡೆದರೆ, ಸಮೀಪದಜ ಪ್ರತಿಸ್ಪರ್ಧಿ ಸುಬ್ಬಾರೆಡ್ಡಿ 2,164 ಮತಗಳನ್ನು ಗಳಿಸಿದರು.
ಸಂಘದ ನೂತನ ಕಾರ್ಯದರ್ಶಿಯಾಗಿ ರಾಜಣ್ಣ ಆಯ್ಕೆಯಾಗಿದ್ದಾರೆ. ಅವಕು ತಮ್ಮ ಸಮೀಪಿದ ಪ್ರತಿಸ್ಪರ್ಧಿ ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರೂ ಆಗಿರುವ ಎಂ ಪಿ ರಂಗನಾಥ್ ಅವರನ್ನು 117 ಮತಗಳ ಅಂತರದಿಂದ ಪರಾಭವಗೊಳಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications