ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ
ಬೆಂಗಳೂರು, ಜು. 8 : ಲೋಕಾಯುಕ್ತರು ಪೊಲೀಸರು ಬುಧವಾರ ಬೆಳಗ್ಗೆಯಿಂದಲೇ ರಾಜ್ಯದ ವಿವಿಧೆಡೆ ಏಕಕಾಲದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ದ ಕಾರ್ಯಾಚರಣೆ ಆರಂಭಿಸಿದ್ದಾರೆ. ಧಾರವಾಡ, ರಾಯಚೂರು, ಬೆಂಗಳೂರು, ಬೀದರ್, ಹುಬ್ಬಳ್ಳಿ ಮಂಗಳೂರು, ದಕ್ಷಿಣ ಕನ್ನಡ ಸೇರಿದಂತೆ ಏಳು ಜಿಲ್ಲೆಗಳಲ್ಲಿ ಭ್ರಷ್ಟ ತಿಮಿಂಗಲ ಕಚೇರಿ, ಮನೆಗಳ ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.
ದಾಳಿಗೊಳಗಾಗಿರುವ ಅಧಿಕಾರಿಗಳು
*ರಾಯಚೂರಿನ ಸಾರಿಗೆ ಇಲಾಖೆ ಅಧಿಕಾರಿ ಈರಣ್ಣ
*ಸಯ್ಯದ್ ಮುಬೀನ್, ಭೂಸೇನಾ ನಿಗಮದ ಅಧಿಕಾರಿ
*ಎಫ್ ಬಿ ಚವ್ಹಾಣ್, ಎಸಿಪಿ ಹುಬ್ಬಳ್ಳಿ
*ಇಕ್ರಂ ಪಾಷಾ, ಬೀದರ್ ನ ಸಾರಿಗೆ ಅಧಿಕಾರಿ ಇಲಾಖೆ ಅಧಿಕಾರಿ
*ಎ ಡಿ ನಾಗರಾಜ್, ಬೆಂಗಳೂರು ರೈಲ್ವೆ ನಿಲ್ದಾಣದ ಪಿಎಸ್ ಐ
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications