ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕರ್ನಾಟಕ ನಬಾರ್ಡ್ ಮುಖ್ಯಸ್ಥರಾಗಿ ಡಾ.ತಗತ್
ದೆಹಲಿಯ ಇಂಡಿಯನ್ ಅಗ್ರಿಕಲ್ಚುರಲ್ ಇನ್ಸ್ಟಿಟ್ಯೂಟ್ ನಿಂದ ಮಣ್ಣು ಮತ್ತು ನೀರು ನಿರ್ವಹಣೆಯಲ್ಲಿ ಪಿಎಚ್ ಡಿ ಪಡೆದಿರುವ ತಗತ್ 1982ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿಗೆ ಸೇರಿದರು. ನಬಾರ್ಡ್ ಆರಂಭವಾದಾಗಿನಿಂದ ಸಂಸ್ಥೆಯ ಜತೆ ತಮ್ಮನ್ನು ಗುರುತಿಸಿಕೊಂಡಿರುವ ಅವರು ಗ್ರಾಮೀಣ ಸಾಲ ಕ್ಷೇತ್ರದಲ್ಲಿ ಅಪಾರ ಅನುಭವ ಪಡೆದಿದ್ದಾರೆ.
ಕರ್ನಾಟಕ ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಾಗಿ ನೇಮಕವಾಗುವ ಮುನ್ನ ತಗತ್ ಅವರು ನಬಾರ್ಡನ ಮುಂಬೈ ಕಚೇರಿಯಲ್ಲಿ ಕೃಷಿ ಕ್ಷೇತ್ರ ಮತ್ತು ಅಭಿವೃದ್ಧಿ ವಿಭಾಗದ ನೀತಿ ನಿರೂಪಕರಾಗಿ ಕಾರ್ಯನಿರ್ವಹಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Monday, July 6, 2009, 13:27 [IST]