ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಿರುದ್ಯೋಗಕ್ಕೆ ಫುಟ್ ಬಾಲ್ ಆಟಗಾರ ಬಲಿ
ಬೆಂಗಳೂರು, ಜು. 6 : ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಸಿಐಎಲ್ ಫುಟ್ ಬಾಲ್ ಆಟಗಾರ ಎ ರವೀಂದ್ರನ್ (32) ಅವರು ಭಾನುವಾರ ನಸುಕಿನಲ್ಲಿ ಮೃತಪಟ್ಟಿದ್ದಾರೆ.
ಶ್ರೀರಾಮಪುರ ಸಮೀಪದ ಗೌತಮ ನಗರದಲ್ಲಿ ವಾಸವಿದ್ದ ಅವರು ಶುಕ್ರವಾರ ರಾತ್ರಿ ಮದ್ಯದ ಜೊತೆಗೆ ಕ್ರಿಮಿನಾಶಕ ಬೆರಸಿ ಕುಡಿದು ಆತ್ಮಹತ್ಯಗೆ ಯತ್ನಿಸಿದ್ದರು. ತೀವ್ರವಾಗಿ ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಆತ್ಮಹತ್ಯೆಗೆ ಯತ್ನಿಸುವ ಮುನ್ನ ಪತ್ರ ಬರೆದಿಟ್ಟಿದ್ದ ರವೀಂದ್ರನ್ ಸಿಐಎಲ್ (Coal India Limited) ಅಧಿಕಾರಿಗಳು ಕೆಲಸ ಕೊಡಿಸುತ್ತೇವೆ ಎಂದು ನಂಬಿಸಿ ವಂಚಿಸಿದ್ದರು. ಅದರಿಂದ ಮನನೊಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Story first published: Monday, July 6, 2009, 10:34 [IST]