ಹುಸಿ ಬಾಂಬ್ ಕರೆ ವೈದ್ಯ ಬಂಧನ
ಬೆಂಗಳೂರು, ಜೂ. 26 : ಮುಂಬೈಗೆ ತೆರಳಬೇಕಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ಬಾಂಬ್ ಇರುವುದಾಗಿ ಅದರ ಪೈಲೆಟ್ ಗೆ ಕರೆ ಮಾಡಿ ಬೆದರಿಕೆ ಹಾಕಿದ ಆರೋಪದ ಮೇಲೆ ವಾಯುಪಡೆಯ ವೈದ್ಯನೊಬ್ಬನನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿರುವ ಘಟನೆ ಗುರುವಾರ ನಡೆದಿದೆ.
ಮುಂಬೈನ ಡಾ ಅಕ್ಷಯ್ ಗೋಯಲ್ (35) ಬಂಧಿತ ಆರೋಪಿ. ಕೆಲಸದ ನಿಮಿತ್ತ ನಗರಕ್ಕೆ ಬಂದಿದ್ದ ಈತ ಮುಂಬೈಗೆ ಹಿಂತಿರುಗಲು ಸ್ಪೈಸ್ ಜೆಟ್ ವಿಮಾನದಲ್ಲಿ ಟಿಕೆಟ್ ಕಾಯ್ದಿರಿಸಿದ್ದ. ರಾತ್ರಿ 7.05ಕ್ಕೆ ವಿಮಾನ ಬೆಂಗಳೂರು ನಿಲ್ದಾಣದಿಂದ ನಿರ್ಗಮಿಸಬೇಕಾಗಿತ್ತು. ಆದರೆ, ತಡವಾಗಿ ಬಂದ ಅಕ್ಷಯ್ ಗೆ ವಿಮಾನ ಸಿಬ್ಬಂದಿ ಒಳಗೆ ಹೋಗಲು ಅವಕಾಶ ನೀಡಲಿಲ್ಲ. ಇದರಿಂದ ಕೋಪಗೊಂಡ ಆತ ವಿಮಾನದ ಮುಖ್ಯ ಪೈಲೆಟ್ ಗೆ ದೂರು ನೀಡುವುದಾಗಿ ಸಿಬ್ಬಂದಿಯಿಂದಲೇ ಮೊಬೈಲ್ ಸಂಖ್ಯೆ ಪಡೆದುಕೊಂಡ.
ಬಳಿಕ ಪೈಲೆಟ್ ಗೆ ಕರೆ ಮಾಡಿ ವಿಮಾನದಲ್ಲಿ ಬಾಂಬ್ ಇದೆ ಎಂದು ಬೆದರಿಕೆ ಕರೆ ಮಾಡಿದ. ಆತನ ಕರೆಯ ಹಿನ್ನೆಲೆಯಲ್ಲಿ ಶ್ವಾನ ದಳ ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಜತೆಗೆ ವಿಮಾನವನ್ನು ತಪಾಸಣೆ ನಡೆಸಲಾಯಿತು. ಆದರೆ, ಯಾವುದೇ ಬಾಂಬ್ ಪತ್ತೆಯಾಗಲಿಲ್ಲ. ಆರೋಪಿಯ ವಿಚಾರಣೆಯನಂತು ಹುಸಿ ಕರೆ ಮಾಡಿರುವುದಾಗಿ ಅಕ್ಷಯ್ ಒಪ್ಪಿಕೊಂಡ ಎಂದು ಪೊಲೀಸರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications