ಭಯೋತ್ಪಾದನ ನಿಗ್ರಹ ಬಿಲ್ ಮತ್ತೆ ವಾಪಾಸ್
ನವದೆಹಲಿ, ಜೂ.19: ಕೆಲವೊಂದು ತಿದ್ದುಪಡಿಗಳನ್ನು ಮಾಡಲು ಸೂಚಿಸಿ ಗುಜರಾತ್ ಸರಕಾರ ಅಂಗೀಕರಿಸಿರುವ ಭಯೋತ್ಪಾದನಾ ನಿಗ್ರಹದ ಕಠಿಣ ಕಾನೂನು ಮಸೂದೆಯನ್ನು ಕೇಂದ್ರ ಗೃಹಖಾತೆ ಮತ್ತೆ ಹಿಂದುರುಗಿಸಿದೆ. ಮಸೂದೆಯಲ್ಲಿ ಮೂರು ತಿದ್ದುಪಡಿ ಮಾಡಿ ಹಿಂದಿರುಗಿಸುವಂತೆ ಗುಜರಾತ್ ಸರಕಾರಕ್ಕೆ ಆದೇಶ ನೀಡಬೇಕೆಂದು ಕೇಂದ್ರ ಗೃಹ ಸಚಿವ ಪಿ ಚಿದಂಬರಂ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿದ್ದಾರೆ.
ಗುಜರಾತ್ ಸರಕಾರ ಈಗ ಕಳುಹಿಸಿರುವ ಹಾಗೆ ಗೃಹ ಖಾತೆ ಇದಕ್ಕೆ ಒಪ್ಪಿಗೆ ನೀಡಲು ಸಾಧ್ಯವಿಲ್ಲ. ಮಸೂದೆಯಲ್ಲಿ ಮೂರು ಅಂಶಗಳು ತಿದ್ದುಪಡಿಯಾಗಲೇ ಬೇಕಾಗಿದೆ. ಕಳೆದ ವರ್ಷ ಸಂಸತ್ತಿನಲ್ಲಿ ಅಂಗೀಕರಿಸಲಾಗಿದ್ದ ಭಯೋತ್ಪಾದನೆಯ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಗೆ ಸಮವಾಗಿರಬೇಕು ಎಂದು ಗೃಹಸಚಿವರು ನುಡಿದರು.
(ಏಜೆನ್ಸೀಸ್)












Click it and Unblock the Notifications