ಅಭಿಷೇಕ್ ಶೋಧ ಕಾರ್ಯ ಕೈಬಿಟ್ಟ ಬಿಬಿಎಂಪಿ
ಬೆಂಗಳೂರು ಜೂ 13: ಲಿಂಗರಾಜಪುರದ ಮೋರಿಯಲ್ಲಿ ಕೊಚ್ಚಿಹೋದ ಆರು ವರ್ಷ ವಯಸ್ಸಿನ ನತದೃಷ್ಟ ಬಾಲಕ ಅಭಿಷೇಕ್ ನ ಮೃತದೇಹ ಪತ್ತೆಹಚ್ಚುವ ಕಾರ್ಯವನ್ನು ಬಿಬಿಎಂಪಿ ಕೈಬಿಟ್ಟಿದೆ.
ಮೇ ತಿಂಗಳು 31 ರ ರಾತ್ರಿ ಸುರಿದ ಭಾರಿ ಮಳೆಯಲ್ಲಿ ಅಬಿಷೇಕ್ ಮೋರಿ ಪಾಲಾಗಿದ್ದ. ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಬಾಲಕನ ದೇಹ ಹುಡುಕಲು ಹರಸಾಹಸ ಮಾಡಿದ ಬಿಬಿಎಂಪಿ ವಿಫಲವಾಗಿತ್ತು. ಬಳಿಕ ಸೇನಾ ಕಾರ್ಯಾಚರಣೆ ಕೂಡ ವಿಫಲವಾಯಿತು. ಬಿಬಿಎಂಪಿ ಬಾಲಕನ ಶೋಧಕ್ಕಾಗಿ ಎಂಇಜಿ ಸಹಾಯ ಕೋರಿತ್ತು ಮತ್ತು ಅವರು ಕೂಡ ಇದರಲ್ಲಿ ಯಶಸ್ವಿಯಾಗಲಿಲ್ಲ.
ಬಿಬಿಎಂಪಿ ಬಗ್ಗೆ ಸಾರ್ವಜನಿಕರು ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದ್ದರು. ಕರ್ನಾಟಕ ಹೈಕೋರ್ಟ್ ಸಹ ಬಿಬಿಎಂಗೆ ಛೀಮಾರಿ ಹಾಕಿತ್ತು. ಜೂನ್ 9ರಂದು ಹೆಣ್ಣೂರು ಕೆರೆಯಲ್ಲಿ ಎಂಇಜಿ ಹುಡುಕಾಟ ಆರಂಭಿಸಿತು. ಆದರೆ ಅಭಿಷೇಕ್ ನ ಮೃತದೇಹವನ್ನು ಪತ್ತೆ ಹಚ್ಚುವಲ್ಲಿ ಎಂಇಜಿ ಸಹ ವಿಫಲವಾಯಿತು. ಮೃತ ದೇಹ ಕೆರೆಯ ಕಳೆಯಲ್ಲಿ ಹೂತು ಹೋಗಿರುವ ಶಂಕೆಯನ್ನು ಎಂಇಜಿ ವ್ಯಕ್ತಪಡಿಸಿದೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications