ಉದ್ಯಾನವನ ಸಂರಕ್ಷಣೆಗೆ ಅನಂತ್ ಕುಮಾರ್ ಕರೆ

ಸಮಾರಂಭದಲ್ಲಿ ಹಾಜರಿದ್ದ ಸ್ಥಳೀಯ ಶಾಸಕ ಎಂ. ಸತೀಶ್ರೆಡ್ಡಿ ಅವರು, "ವಿಶ್ವ ಪರಿಸರ ದಿನಾಚರಣೆ"ಯ ಅಂಗವಾಗಿ ಈ ಸಂದರ್ಭದಲ್ಲಿ ವನಮಹೋತ್ಸವದ ಅಂಗವಾಗಿ ಹೆಚ್.ಎಸ್.ಆರ್. ಬಡಾವಣೆಯ ವಿವಿಧ ಭಾಗಗಳಲ್ಲಿ ಸಸಿಗಳನ್ನು ನೆಡಲಾಯಿತು ಎಂದು ತಿಳಿಸಿದರು. ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಜಂಟಿ ಆಯುಕ್ತ ಶೇಖರಪ್ಪ, ಹೆಚ್.ಎಸ್.ಆರ್. ಬಡಾವಣೆಯ ಕ್ಷೇಮಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ತೋಟಗಾರಿಕಾ ಹಾಗೂ ಇತರೆ ಇಲಾಖಾಧಿಕಾರಿಗಳು ಹಾಗೂ ಸ್ಥಳೀಯ ನಾಗರೀಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಐಟಿ ಕಂಪೆನಿಗಳ ಹಸಿರು ಅಭಿಯಾನ
ನಗರದ ಪ್ರಮುಖ ಐಟಿ ಕಂಪೆನಿಗಳು ಉದ್ಯಾನನಗರಿಯ ಹಸಿರನ್ನು ಉಳಿಸಿ ಬೆಳಸಲು ಹಲವು ಯೋಜನೆಗಳನ್ನು ಹಾಕಿಕೊಂಡಿರುವುದನ್ನು ಸ್ಮರಿಸಿದ ಅನಂತ್ ಕುಮಾರ್ ಅವರು , ಸರ್ಕಾರೇತರ ಸಂಸ್ಥೆಗಳು ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಪರಿಸರ ಸಂರಕ್ಷಣೆ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು.
ನಗರದ ಇನ್ಫೋಸಿಸ್ ಸಂಸ್ಥೆ ಪ್ಯಾಲಿಥೀನ್ ಬ್ಯಾಗ್ ಮುಕ್ತ ಕ್ಯಾಂಪಾಸ್ ('polythene bag free '), ಬಟ್ಟೆಯಿಂದ ತಯಾರಾದ ಚೀಲಗಳ ಬಳಕೆ ಹೆಚ್ಚಳ ಮಾಡಲು ನಿರ್ಧರಿಸಿದೆ. ಈ ನಿಯಮವನ್ನು ಮೈಸೂರು, ಬೆಂಗಳೂರು, ಹೈದರಾಬಾದ್ ಹಾಗೂ ಪುಣೆಯ ಇನ್ಫಿ ಕ್ಯಾಂಪಸ್ ನಲ್ಲಿ ಅಳವಡಿಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ವಿಪ್ರೋ ಸಂಸ್ಥೆ ಪ್ರತಿ ವರ್ಷದಂತೆ ಈ ವರ್ಷ ಇನ್ನು ಹೆಚ್ಚು ಸಸಿಗಳನ್ನು ನೆಟ್ಟು ಬೆಳಸಲು ನಿರ್ಧರಿಸಿದೆ. ಮಳೆಕೊಯ್ಲು, ಇಂಗಾಲದ ದುಷ್ಪರಿಣಾಮ, ಪೇಪರ್ ಬ್ಯಾಗ್ ಬಳಕೆ, ಕೆರೆಗಳ ಶುದ್ಧೀಕರಣ ಮುಂತಾದ ಪರಿಸರ ಸ್ನೇಹಿ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಯೋಜನೆ ರೂಪಿಸಿದೆ. ಹೆಚ್ ಸಿ ಎಲ್ ಸಂಸ್ಥೆ 'ಇ-ತ್ಯಾಜ್ಯ'(e- waste) ಗಳ ಬಗ್ಗೆ ಅರಿವು ಮೂಡಿಸಲು ಪಣ ತೊಟ್ಟಿದೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications