ಉದ್ಯಾನವನ ಸಂರಕ್ಷಣೆಗೆ ಅನಂತ್‌ ಕುಮಾರ್ ಕರೆ

Ananth Kumar
ಬೆಂಗಳೂರು, ಜೂ. 9: ಉದ್ಯಾನ ನಗರಿಯೆಂದು ಖ್ಯಾತವಾಗಿರುವ ಬೆಂಗಳೂರು ನಗರದ ಉದ್ಯಾನವನಗಳನ್ನು ಕಾಪಾಡಲು ಸಹಕರಿಸುವಂತೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯ ಅನಂತ್‌ಕುಮಾರ್ ಅವರು ನಗರದ ನಾಗರೀಕರಿಗೆ ಕರೆ ನೀಡಿದರು. ಅವರು ನಗರದ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಹೆಚ್.ಎಸ್. ಆರ್. ಬಡಾವಣೆಯಲ್ಲಿ ನೂತನವಾಗಿ ಅಭಿವೃದ್ಧಿಪಡಿಸಿರುವ ಐದು ಉದ್ಯಾನವನಗಳನ್ನು ಉದ್ಫಾಟಿಸಿ ಮಾತನಾಡುತ್ತಿದ್ದರು.

ಸಮಾರಂಭದಲ್ಲಿ ಹಾಜರಿದ್ದ ಸ್ಥಳೀಯ ಶಾಸಕ ಎಂ. ಸತೀಶ್‌ರೆಡ್ಡಿ ಅವರು, "ವಿಶ್ವ ಪರಿಸರ ದಿನಾಚರಣೆ"ಯ ಅಂಗವಾಗಿ ಈ ಸಂದರ್ಭದಲ್ಲಿ ವನಮಹೋತ್ಸವದ ಅಂಗವಾಗಿ ಹೆಚ್.ಎಸ್.ಆರ್. ಬಡಾವಣೆಯ ವಿವಿಧ ಭಾಗಗಳಲ್ಲಿ ಸಸಿಗಳನ್ನು ನೆಡಲಾಯಿತು ಎಂದು ತಿಳಿಸಿದರು. ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಜಂಟಿ ಆಯುಕ್ತ ಶೇಖರಪ್ಪ, ಹೆಚ್.ಎಸ್.ಆರ್. ಬಡಾವಣೆಯ ಕ್ಷೇಮಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ತೋಟಗಾರಿಕಾ ಹಾಗೂ ಇತರೆ ಇಲಾಖಾಧಿಕಾರಿಗಳು ಹಾಗೂ ಸ್ಥಳೀಯ ನಾಗರೀಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಐಟಿ ಕಂಪೆನಿಗಳ ಹಸಿರು ಅಭಿಯಾನ
ನಗರದ ಪ್ರಮುಖ ಐಟಿ ಕಂಪೆನಿಗಳು ಉದ್ಯಾನನಗರಿಯ ಹಸಿರನ್ನು ಉಳಿಸಿ ಬೆಳಸಲು ಹಲವು ಯೋಜನೆಗಳನ್ನು ಹಾಕಿಕೊಂಡಿರುವುದನ್ನು ಸ್ಮರಿಸಿದ ಅನಂತ್ ಕುಮಾರ್ ಅವರು , ಸರ್ಕಾರೇತರ ಸಂಸ್ಥೆಗಳು ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಪರಿಸರ ಸಂರಕ್ಷಣೆ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು.

ನಗರದ ಇನ್ಫೋಸಿಸ್ ಸಂಸ್ಥೆ ಪ್ಯಾಲಿಥೀನ್ ಬ್ಯಾಗ್ ಮುಕ್ತ ಕ್ಯಾಂಪಾಸ್ ('polythene bag free '), ಬಟ್ಟೆಯಿಂದ ತಯಾರಾದ ಚೀಲಗಳ ಬಳಕೆ ಹೆಚ್ಚಳ ಮಾಡಲು ನಿರ್ಧರಿಸಿದೆ. ಈ ನಿಯಮವನ್ನು ಮೈಸೂರು, ಬೆಂಗಳೂರು, ಹೈದರಾಬಾದ್ ಹಾಗೂ ಪುಣೆಯ ಇನ್ಫಿ ಕ್ಯಾಂಪಸ್ ನಲ್ಲಿ ಅಳವಡಿಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ವಿಪ್ರೋ ಸಂಸ್ಥೆ ಪ್ರತಿ ವರ್ಷದಂತೆ ಈ ವರ್ಷ ಇನ್ನು ಹೆಚ್ಚು ಸಸಿಗಳನ್ನು ನೆಟ್ಟು ಬೆಳಸಲು ನಿರ್ಧರಿಸಿದೆ. ಮಳೆಕೊಯ್ಲು, ಇಂಗಾಲದ ದುಷ್ಪರಿಣಾಮ, ಪೇಪರ್ ಬ್ಯಾಗ್ ಬಳಕೆ, ಕೆರೆಗಳ ಶುದ್ಧೀಕರಣ ಮುಂತಾದ ಪರಿಸರ ಸ್ನೇಹಿ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಯೋಜನೆ ರೂಪಿಸಿದೆ. ಹೆಚ್ ಸಿ ಎಲ್ ಸಂಸ್ಥೆ 'ಇ-ತ್ಯಾಜ್ಯ'(e- waste) ಗಳ ಬಗ್ಗೆ ಅರಿವು ಮೂಡಿಸಲು ಪಣ ತೊಟ್ಟಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+