ಅಮೆರಿಕ ಪ್ರಜೆಗಳೆ ಭಾರತಕ್ಕೆ ಕಾಲಿಡಬೇಡಿ, ಒಬಾಮಾ
ವಾಷಿಂಗ್ ಟನ್, ಜೂನ. 4 : ಕಳೆದ ವರ್ಷ ಮುಂಬೈ ನಲ್ಲಿ ನಡೆದ ಭೀಕರ ಉಗ್ರರ ದಾಳಿಯ ಮಾದರಿಯಲ್ಲಿಯೇ ಇನ್ನೊಂದು ಬಾರಿಗೆ ಭಯಾನಕ ದಾಳಿಗೆ ಭಾರತ ತುತ್ತಾಗಲಿದೆ. ಈ ಹಿನ್ನೆಲೆಯಲ್ಲಿ ಭಾರತ ಪ್ರವಾಸ ಕೈಗೊಳ್ಳಲು ಅಮೆರಿಕ ಪ್ರಜೆಗಳು ಎಚ್ಚರಕದಿಂದ ತಮ್ಮ ಪ್ರವಾಸವನ್ನು ಕೈಗೊಳ್ಳಬೇಕು ಎಂದು ಅಮೆರಿಕ ಸರಕಾರ ಅಲ್ಲಿನ ಪ್ರಜೆಗಳಿಗೆ ಮುನ್ನೆಚ್ಚರಿಕೆ ನೀಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕದ ಅಧ್ಯಕ್ಷಯ ಬರಾಕ್ ಒಬಾಮಾ ಅವರು, ಇದೀಗ ತಾನೇ ಪಾಕಿಸ್ತಾನದ ಹೈಕೋರ್ಟ್ ನಿಂದ ನಿರ್ದೋಷಿಯೆಂದು ಹೊರಬಂದಿರುವ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್ ಬಿಡುಗಡೆಗೊಂಡಿದ್ದು, ಕಳೆದ ವರ್ಷ ಮುಂಬೈನಲ್ಲಿ ನಡೆದ ದಾಳಿಯ ಮಾದರಿಯಲ್ಲಿಯೇ ಇನ್ನೊಂದು ಭೀಕರ ದಾಳಿಯನ್ನು ಅಮೆರಿಕ ಗುಪ್ತಚರ ಸಂಸ್ಥೆ ಎಚ್ಚರಿಕೆ ಹಿನ್ನೆಲೆಯಲ್ಲಿ ಅಮೆರಿಕದ ಪ್ರವಾಸಿಗಳಿಗೆ ಎಚ್ಚರಿಕೆ ನೀಡಲಾಗಿದ್ದು, ಭಾರತ ಮತ್ತು ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳುವ ಮುನ್ನ ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಿ ಎಂದು ಹೇಳಿದ್ದಾರೆ. ಅಮೆರಿಕದ ಅಧ್ಯಕ್ಷರ ಈ ಹೇಳಿಕೆ ಭಾರತಕ್ಕೆ ಆಘಾತ ಮತ್ತು ಆಶ್ಚರ್ಯವನ್ನುಂಟು ಮಾಡಿದೆ.
ಮುಂಬೈ ದಾಳಿಗೆ ಸಂಬಂಧಿಸಿದಂತೆ ಲಷ್ಕರ್ ಇ ತೊಯ್ಬಾ ಸಂಘಟನೆಯ ಕೈವಾಡವಿರುವುದು ಸ್ಪಷ್ಟವಾದ ಹಿನ್ನೆಲೆಯಲ್ಲಿ ಭಾರತ ಹೇರಿದ ತೀವ್ರ ಒತ್ತಡದಿಂದ ಅವದ ಮುಖ್ಯಸ್ಥ ಹಫೀಜ್ ಸಯೀದ್ ನನ್ನು ಪಾಕ್ ಸರಕಾರ ಗೃಹ ಬಂಧನದಲ್ಲಿರಿಸಿತ್ತು. ಆದರೆ, ಬುಧವಾರ ಪಾಕಿಸ್ತಾನ ಹೈಕೋರ್ಟ್ ಸಾಕ್ಷ್ಯಾಧಾರಗಳ ಕೊರತೆಯಿಂದ ಹಫೀಜ್ ನನ್ನು ನಿರಪರಾಧಿಯೆಂದು ಬಿಡುಗಡೆ ಮಾಡಿದೆ. ಮುಂಬರುವ ದಿನಗಳಲ್ಲಿ ಭಾರತದ ಮೇಲೆ ಭಾರಿ ದಾಳಿ ನಡೆಸುವ ಸಂಚನ್ನು ಲಷ್ಕರ್ ಇ ತೊಯ್ಬಾ ರೂಪಿಸತೊಡಗಿದೆ ಎಂದು ತಿಳಿದು ಬಂದಿದೆ.
(ಏಜನ್ಸೀಸ್)












Click it and Unblock the Notifications