ಜನಾರ್ದನರೆಡ್ಡಿಗೆ ದಿಲ್ಲಿ ನಾಯಕರಿಂದ ಬುಲಾವ್

ರಾಜ್ಯದಲ್ಲಿ ಬಿಜೆಪಿ ಸರಕಾರ ತರಲು ಪ್ರಮುಖ ಪಾತ್ರವಹಿಸಿದ್ದ ರೆಡ್ಡಿ ಸಹೋದರು ಮತ್ತು ಅವರ ಆಪ್ತ ಎನ್ನಲಾದ ಶ್ರೀರಾಮುಲು ಬಳ್ಳಾರಿಯ ಅಜ್ಞಾತ ಸ್ಥಳವೊಂದರಲ್ಲಿ ಗುಪ್ತಸಭೆ ನಡೆಸುತ್ತಿದ್ದಾರೆ ಎಂಬ ವರ್ತಮಾನದ ಬೆನ್ನಲ್ಲೇ ದೆಹಲಿ ಮುಖಂಡರಿಂದ ಜನಾರ್ದನರೆಡ್ಡಿ ಅವರಿಗೆ ಕರೆ ಬಂದಿದೆ.
ಮುಖ್ಯಮಂತ್ರಿ ವಿರುದ್ಧ ಬಹಿರಂಗ ಬಂಡಾಯದ ಬಾವುಟ ಹಾರಿಸಿದ್ದ ಇಂಧನ ಸಚಿವ ಕೆ ಎಸ್ ಈಶ್ವರಪ್ಪ ಅವರು ಬುಧವಾರ ದೆಹಲಿಗೆ ತೆರಳಿ ಪಕ್ಷದ ಹಿರಿಯ ಮುಖಂಡರನ್ನು ಭೇಟಿ ಮಾಡಿ ಬಂಡಾಯದ ರಾಗವನ್ನು ಬದಲಿಸಿದ್ದಾರೆ. ಆದರೆ, ರೆಡ್ಡಿ ಸಹೋದರರ ನಡೆ ಈವರೆಗೊ ನಿಗೂಢವಾಗಿದ್ದು, ಮುಖ್ಯಮಂತ್ರಿ ವಿರುದ್ಧದ ಅವರ ಕೋಪ ತಣ್ಣಗಾಗುವ ಸೂಚನೆ ಕಂಡುಬರದಿರುವ ಹಿನ್ನೆಲೆಯಲ್ಲಿ ಬಂಡಾಯ ಶಮನಕ್ಕೆ ರಾಜನಾಥ್ ಸಿಂಗ್ ಮತ್ತು ಜೈಟ್ಲಿ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications