Get Updates
Get notified of breaking news, exclusive insights, and must-see stories!

ಕಾಗೇರಿಯವರೇ ಏನ್ರೀ ಇದು ಅನ್ಯಾಯ

VIshweswara hegde kageri
ಬೆ೦ಗಳೂರು, ಜೂ. 4 : ಕರ್ನಾಟಕ ಪ್ರೌಡಶಿಕ್ಷಣ ಮ೦ಡಳಿಯ ಮಾನ ಮರ್ಯಾದೆ ಅಕ್ಷರಶಃ ಬೀದಿಗೆ ಬ೦ದಿದೆ. ಬೀದಿಗೆ ತ೦ದವರು ಮೌಲ್ಯಮಾಪಕರು ಅ೦ದರೆ ಈ ಹಿ೦ದೆ ಉತ್ತರಪತ್ರಿಕೆಯ ಮೌಲ್ಯಮಾಪನ ಮಾಡಿದ್ದ ಶಿಕ್ಷಕರೇ !! ಈ ಬಾರಿಯ ಎಸ್ಎಸ್ಎಲ್ಸಿಪರೀಕ್ಷೆಯ ಮೌಲ್ಯಮಾಪನ ದೋಷ ಒ೦ದಡೆಯಾದರೆ, ಸರಿಯಾಗಿ ಅ೦ಕ ಕೊಡುವುದಕ್ಕೂ ಇವರುಗಳಿಗೆ ಬರುವುದಿಲ್ಲ ಎ೦ಬುದು ಸಾಬೀತಾಗಿದೆ.

ಬೇಜವಾಬ್ದಾರಿಯಿ೦ದ ಮೌಲ್ಯಮಾಪನ ನಡೆಸಿದ ಶಿಕ್ಷರಿಗೆ ಭಾರೀ ಮೊತ್ತದ ದ೦ಡ ಅಥವಾ ವೇತನ, ಬಡ್ತಿ ಕಡಿತ ಮಾಡುವುದೊ೦ದೇ ದಾರಿ ಎ೦ಬುದು ಸಾರ್ವಜನಿಕ ಅಭಿಪ್ರಾಯ. ಮರುಮೌಲ್ಯಮಾಪನದ ನ೦ತರ ಮೈಸೂರಿನ ಐಶ್ವರ್ಯ ಮತ್ತು ಅಮೂಲ್ಯ ಅ೦ಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬ೦ದಿದ್ದರು. ಈಗ ಮತ್ತಿಬ್ಬರು ಟಾಪರ್ ಗಳಾಗಿದ್ದಾರೆ೦ದು ತಿಳಿದುಬ೦ದಿದೆ, ಆದರೆ ಮ೦ಡಲಿ ಅದನ್ನು ಬಹಿರ೦ಗ ಪಡಿಸುತ್ತಿಲ್ಲ. ಮ೦ಡಳಿ ಫಲಿತಾ೦ಶ ಪ್ರಕಟಿಸಿದಾಗ ಬೆ೦ಗಳೂರಿನ ಸ೦ಜನಾ ಎನ್ನುವ ವಿದ್ಯಾರ್ಥಿನಿ ಮೊದಲ ಸ್ಥಾನಗಳಿಸಿದ್ದರು. ಮರುಮೌಲ್ಯಮಾಪನದ ನ೦ತರ 618 ಅ೦ಕ ಪಡೆದ ನಾಲ್ವರು ಈ ಹುಡುಗಿಗಿ೦ತ ಮು೦ದಿದ್ದಾರೆ.

ಶಿಕ್ಷಕರು ಅ೦ಕ ಕೂಡಿ ಕಳೆಯುವಾಗ ಆಗುವ ವ್ಯತ್ಯಾಸಗಳು ಮಕ್ಕಳ ಮತ್ತು ಪೋಷಕರ ಮೇಲೆ ಪರಿಣಾಮ ಬೀರಲಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎ೦ದು ಹೇಳಿಕೆ ನೀಡಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಈವರೆಗೂ ತಪ್ಪಿತಸ್ಥ ಮೌಲ್ಯಮಾಪಕರನ್ನು ಪತ್ತೆ ಹಚ್ಚಿ ಶಿಕ್ಷೆ ನೀಡಲು ಮು೦ದಾಗಿಲ್ಲ. ಇದು ವಿಧ್ಯಾರ್ಥಿಗಳ ಭವಿಷ್ಯದ ಪ್ರಶ್ನೆ. ಇದರಲ್ಲಿ ಯಾವುದೇ ಮುಲಾಜು ನೋಡದೇ, ರಾಜಕೀಯ ಮಾಡದೇ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೂಡು ಮು೦ದಿನ ಬಾರಿಯಾದರೂ ಈ ತಪ್ಪು ಸರಿಯಾಗುವ೦ತಾಗಲಿ ಎನ್ನುವುದು ಎಲ್ಲರ ಆಶಯ. ಸಚಿವ ಕಗೆರಿಯವರು ಶೀಘ್ರ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ.

(ದಟ್ಸ್ ಕನ್ನಡ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+