ರೆಡಿಮೇಡ್ ಗಾರ್ಮೆಂಟ್ಸ್ ಉದ್ಯಮಕ್ಕೆ ಭಾರಿ ಬೇಡಿಕೆ
ಕೋಲಾರ, ಜೂನ್ 3: ಸುವರ್ಣ ವಸ್ತ್ರ ನೀತಿಯಡಿ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಸಿದ್ಧ ಉಡುಪು ತಯಾರಿಕೆ ತರಬೇತಿ ಪಡೆದುಕೊಳ್ಳಲು ಉತ್ತಮ ಅವಕಾಶಗಳು ಲಭ್ಯವಾಗಿದ್ದು, ಇದರ ಪ್ರಯೋಜನೆ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಶ್ರೀನಿವಾಸನ್ ಕರೆ ನೀಡಿದರು.
ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಸುವರ್ಣ ವಸ್ತ್ರ ನೀತಿಯಡಿ ತರಬೇತಿ ಪಡೆದ 70 ಅಭ್ಯರ್ಥಿಗಳಿಗೆ ನಗರದ ಅಪಾರೆಲ್ ತರಬೇತಿ ಮತ್ತು ವಿನ್ಯಾಸ ಕೇಂದ್ರದಲ್ಲಿ ಇಂದು ಏರ್ಪಡಿಸಿದ್ದ ಶಿಷ್ಯವೇತನ ವಿತರಣಾ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ತಲಾ 2 ಸಾವಿರ ರೂ.ಗಳ ಶಿಷ್ಯವೇತನದ ಚೆಕ್ಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.
ಸರ್ಕಾರದ ಸುವರ್ಣ ವಸ್ತ್ರ ನೀತಿಯಡಿ ಬಂಡವಾಳ ಹೂಡಿಕೆಗೆ ರಾಜ್ಯಕ್ಕೆ 10 ಸಾವಿರ ಕೋಟಿ ರೂ.ಗಳು ಮಂಜೂರಾಗಿದ್ದು, ಮುಂದಿನ 5 ವರ್ಷಗಳಲ್ಲಿ ರಾಜ್ಯದಲ್ಲಿ 5 ಲಕ್ಷ ಜನರಿಗೆ ಉದ್ಯೋಗ ಒದಗಿಸುವ ಗುರಿ ಹೊಂದಲಾಗಿದೆ. ಪರಿಶಿಷ್ಟ ಜಾತಿ ಮತ್ತು ವರ್ಗದ ಮಹಿಳೆಯರಿಗೆ ಶೇ.40 ರಷ್ಟು ಮೀಸಲಾತಿಯಿದ್ದು, ಗ್ರಾಮಾಂತರ ಪ್ರದೇಶದವರು ಸ್ಥಳೀಯವಾಗಿ ತರಬೇತಿ ಪಡೆದುಕೊಂಡು, ಸರ್ಕಾರದ ಸಹಾಯಧನ ಪಡೆದು ತಮ್ಮ ಗ್ರಾಮಗಳಲ್ಲಿಯೇ ತರಬೇತಿ ನೀಡುವ ಘಟಕಗಳನ್ನು ಪ್ರಾರಂಭಿಸಿ ನಿರುದ್ಯೋಗ ನಿವಾರಣೆ ಮಾಡಬಹುದಾಗಿದೆ ಎಂದು ಶ್ರೀನಿವಾಸನ್ ತಿಳಿಸಿದರು.
ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ದಿನೇಶ್ಕೃಷ್ಣ ಹೆಬ್ಬಾರ್ ಪ್ರಸ್ತಾವಿಕವಾಗಿ ಮಾತನಾಡಿ ಸುವರ್ಣ ವಸ್ತ್ರ ನೀತಿಯನ್ನು 2008 ರಲ್ಲಿ ಘೋಷಿಸಿದ್ದು, ಕೋಲಾರ ಜಿಲ್ಲೆಯಲ್ಲಿ 2008-09 ನೇ ಸಾಲಿಗೆ 268ಜನರಿಗೆ ತರಬೇತಿ ನೀಡಲು 28 ಲಕ್ಷ ರೂ.ಗಳು ಮಂಜೂರಾಗಿದೆ ಎಂದರು. ಕಳೆದ ಸಾಲಿಗೆ ಒಟ್ಟು 188 ಅಭ್ಯರ್ಥಿಗಳಿಗೆ ಎ.ಟಿ.ಡಿ.ಸಿ ಮೂಲಕ ತರಬೇತಿ ನೀಡಲಾಗುತ್ತಿದ್ದು, 70 ಜನರ ತರಬೇತಿ ಮುಗಿದಿದೆ.
118 ಮಂದಿಯ ತರಬೇತಿ ನಡೆಯುತ್ತಿದೆ ಎಂದರಲ್ಲದೆ, ಪ್ರಸಕ್ತ ಸಾಲಿಗೆ 500 ಜನರಿಗೆ ತರಬೇತಿ ನೀಡುವ ಗುರಿಯಿದೆ ಎಂದು ವಿವರಿಸಿದರು. ಕೆ.ಜಿ.ಎಫ್ನಲ್ಲಿ ಕೌಶಲ್ಯ ಅಭಿವೃದ್ಧಿ ಸಂಸ್ಥೆ ಪ್ರಾರಂಭಿಸಲು ಇಂಡಿಯನ್ ಇಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ 30 ಲಕ್ಷ ರೂ.ಗಳ ಹಂಚಿಕೆ ಮಾಡಲಾvದೆಯಲ್ಲದೆ ಮುಳಬಾಗಲಿನ ವೈಷ್ಣವಿ ಗಾರ್ಮೆಂಟ್ಸ್ನಲ್ಲಿಯೂ ಸಹ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು.
ಯೋಜನೆಯಡಿಯಲ್ಲಿ ಜವಳಿ ಕ್ಷೇತ್ರದ ಏಳಿಗೆಗೆ ಒತ್ತು ನೀಡಿದ್ದು, ಅದರಲ್ಲಿಯೂ ಸಿದ್ಧ ಉಡುಪು ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜವಳಿ ಕ್ಷೇತ್ರದಲ್ಲಿ ಕೌಶಲ್ಯ ಅಭಿವೃದ್ಧಿಗೆ ತರಬೇತಿಗಳನ್ನು ನೀಡಲಾಗುತ್ತಿದೆ ಎಂದ ಅವರು, ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿರುವ ಜವಳಿ ಉದ್ದಿಮೆಯನ್ನು ಇತರೆ ಭಾಗಗಳಿಗೆ ಹರಡಲು ಅನುಕೂಲಗಳನ್ನು ಕಲ್ಪಿಸಲಾಗಿದೆ.
ತಾಂತ್ರಿಕ
ಉನ್ನತೀಕರಣ
ಮತ್ತು
ಸಾಮರ್ಥ್ಯ
ವರ್ಧನೆಗೆ
ಯೋಜನೆಯಡಿ
ಅವಕಾಶಗಳಿವೆ
ಎಂದರು.
ಹಿಂದುಳಿದ
ತಾಲ್ಲೂಕುಗಳ
ಅಭಿವೃದ್ಧಿಗೆ
ಸಹ
ಆದ್ಯತೆ
ನೀಡಲಾಗಿದೆ
ಎಂದರಲ್ಲದೆ,
ಸಿದ್ಧ
ಉಡುಪು,
ಕೈಮಗ್ಗ,
ವಿದ್ಯುತ್
ಮಗ್ಗ,
ಸ್ಪಿನ್ನಿಂಗ್,
ನಿಟ್ಟಿಂಗ್,
ತಾಂತ್ರಿಕ
ಜವಳಿ
ಹಾಗೂ
ಜವಳಿ
ಯಂತ್ರೋಪಕರಣ
ತಯಾರಿಕೆಗಳನ್ನು
ಅಭಿವೃದ್ಧಿ
ಪಡೆಸುವ
ಗುರಿ
ಇದೆ
ಎಂದು
ತಿಳಿಸಿದರು.
ಯೋಜನೆಯಡಿ
ಸಾಲ
ಆಧಾರಿತ
ಬಂಡವಾಳ
ಹೂಡಿಕೆಗೆ
ಗರಿಷ್ಠ
25
ಲಕ್ಷ
ರೂ.ಗಳ
ರಿಯಾಯಿತಿ,
ಪ್ರವೇಶ
ಶುಲ್ಕ
ಹಾಗೂ
ನೋಂದಣಿ
ಶುಲ್ಕ
ರಿಯಾಯಿತಿ,
ಪರಿಶಿಷ್ಠ
ಜಾತಿ,
ವರ್ಗ,
ಮಹಿಳೆ,
ಅಲ್ಪಸಂಖ್ಯಾತರಿಗೆ
ಹೆಚ್ಚಿನ
ರಿಯಾಯಿತಿಗಳನ್ನು
ನೀಡಲಾಗಿದೆ
ಎಂದು
ವಿವರಿಸಿದರು.
(ದಟ್ಸ್
ಕನ್ನಡವಾರ್ತೆ)