ಹಿಂದು ರಾಷ್ಟ್ರ ಘೋಷಣೆ ಅಗತ್ಯ; ತೊಗಾಡಿಯಾ

ಹುಬ್ಬಳ್ಳಿ, ಜೂ.1: ಸಂವಿಧಾನ ಬದ್ಧವಾಗಿ ಭಾರತವನ್ನು ಹಿಂದೂರಾಷ್ಟ್ರವೆಂದು ಘೋಷಿಸುವ ಅಗತ್ಯವಿದೆ. ಇದರಿಂದ ಬಹುತೇಕ ಸಮಸ್ಯೆಗಳು ನಿವಾರಣೆಯಾಗಲಿವೆ ಎಂದು ವಿಶ್ವಹಿಂದೂ ಪರಿಷತ್ ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣಭಾಯಿ ತೊಗಾಡಿಯಾ ಹೇಳಿದ್ದಾರೆ.

ವಿ ಎಚ್ ಪಿ ಆಯೋಜಿಸಿದ್ದ ಕಾರ್ಯಕ್ರವೊಂದರಲ್ಲಿ ಮಾತನಾಡುತ್ತಾ ತೊಗಾಡಿಯಾ, ನಮ್ಮ ದೇಶದಲ್ಲೇ ಹಿಂದುಗಳನ್ನು ದ್ವಿತೀಯ ದರ್ಜೆ ನಾಗರಿಕರಂತೆ ನೋಡಲಾಗುತ್ತಿದೆ. ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿಗಳನ್ನು ಹೊರತು ಪಡಿಸಿ ದೇಶದಲ್ಲಿರುವವರೆಲ್ಲರೂ ಹಿಂದುಗಳೇ. ವಿವಿಧ ಭಾಗದಲ್ಲಿರುವ ಬುಡಕಟ್ಟು ಜನಾಂಗದ ಅಭಿವೃದ್ಧಿ ನಿಟ್ಟಿನಲ್ಲಿ ವಿ ಎಚ್ ಪಿ ಶಾಲೆ, ಆಸ್ಪತ್ರೆ, ಪುನರ್ವಸತಿ ಕೇಂದ್ರಗಳನ್ನು ಆರಂಭಿಸುವ ಮೂಲಕ ಅವರನ್ನು ಹಿಂದೂಗಳಾಗಿಯೇ ಉಳಿಸಿಕೊಂಡಿದೆ.

ಭಾರತವನ್ನು ಸಂವಿಧಾನಬದ್ಧವಾಗಿ ಹಿಂದೂ ರಾಷ್ಟ್ರವೆಂದು ಘೋಷಿಸಿದಾಗ ಹಿಂದೂಗಳ ರಕ್ಷಣೆ ಪ್ರಧಾನಿಯವರ ಹೊಣೆಯಾಗಿರುತ್ತದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಿಂದುತ್ವವನ್ನು ಪ್ರಮುಖ ಅಜೆಂಡಾವಾಗಿ ಬೆಜೆಪಿ ತೆಗೆದುಕೊಳ್ಳದಿದ್ದರಿಂದ ಬಿಜೆಪಿಗೆ ಸೋಲಾಯಿತು ಎಂದು ತೊಗಾಡಿಯಾ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+