ರಿಯಲ್ ಎಸ್ಟೇಟ್ ದಂಧೆ : ನಗರದಲ್ಲಿ ಶೂಟೌಟ್
ಬೆಂಗಳೂರು, ಜೂ.1: ನಗರದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರದ ಜಿದ್ದಿಗೆ ಮತ್ತೊಂದು ಶೂಟೌಟ್ ಪ್ರಕರಣ ಸಂಭವಿಸಿದೆ. ಜೀವನ್ ಭೀಮಾ ನಗರದ ಕೋಡಿಹಳ್ಳಿಯ ನಿವಾಸಿ ಶ್ರೀನಿವಾಸರೆಡ್ಡಿ (35) ಗಾಯಗೊಂಡು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶ್ರೀನಿವಾಸರೆಡ್ಡಿ ಅವರು ಮಹಾನಗರಪಾಲಿಕೆಯ ಮಾಜಿ ಸದಸ್ಯ ಮುನಿರೆಡ್ಡಿ ಅವರ ಸಹೋದರ. ಗುಂಡು ಹಾರಿಸಿದ ಅವರ ಸೋದರ ಸಂಬಂಧಿ ವೆಂಕಟರಾಮರೆಡ್ಡಿ ನಂತರ ಪಿಸ್ತೂಲು ಸಮೇತ ಪೊಲೀಸರಿಗೆ ಶರಣಾಗಿದ್ದಾರೆ. ಶ್ರೀನಿವಾಸರೆಡ್ಡಿ ಹಾಗೂ ವೆಂಕಟರಾಮ ರೆಡ್ಡಿ ಇಬ್ಬರೂ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದರು ಎನ್ನಲಾಗಿದೆ.
ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದೆ ಎಂದು ವೆಂಕಟರಾಮರೆಡ್ಡಿ ಹೇಳಿಕೆ ನೀಡಿದ್ದಾರೆ. ಆದರೆ ಈ ಮುಂಚೆ ತಮಿಳುನಾಡಿನ ಹೊಗೆನಕಲ್ ನಲ್ಲಿ ಕಾರ್ಮಿಕನೊಬ್ಬನ ಮೇಲೆ ಗುಂಡು ಹಾರಿಸಿದ ಆರೋಪವನ್ನು ವೆಂಕಟರಾಮರೆಡ್ಡಿ ಎದುರಿಸುತ್ತಿದ್ದಾರೆ. ಆರೋಪ ಹೊತ್ತಿರುವ ವೆಂಕಟರಾಮರೆಡ್ಡಿಗೆ ಪಿಸ್ತೂಲು ಪರವಾನಗಿ ನೀಡಿರುವ ಪೊಲೀಸ್ ಕ್ರಮವನ್ನು ಶ್ರೀನಿವಾಸರೆಡ್ಡಿ ಸ್ನೇಹಿತರು ಖಂಡಿಸಿದ್ದಾರೆ.
(ದಟ್ಸ್ ಕನ್ನಡವಾರ್ತೆ)












Click it and Unblock the Notifications