Get Updates
Get notified of breaking news, exclusive insights, and must-see stories!

ಆಟೋಗೆ ಡಿಕ್ಕಿ ಹೊಡೆದ ಡಿಸೈರ್ ಕಾರಿಗೆ ಕಲ್ಲೇಟು

Shivamogga councillor Mariyappas son Abhishek
ಶಿವಮೊಗ್ಗ,ಮೇ 29 : ಪಾನಮತ್ತರಾಗಿ ಕಾರು ಚಲಾಯಿಸಿಕೊಂಡು ಬಂದ ಇಬ್ಬರು ಯುವಕರು ಆಟೋವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದ ನಗರಸಭಾ ಸದಸ್ಯ ಮರಿಯಪ್ಪರವರ ಮಗ ಅಭಿಷೇಕ್ ತೀವ್ರವಾಗಿ ಗಾಯಗೊಂಡಿದ್ದಾರೆ. ಇದರಿಂದ ಉದ್ರಿಕ್ತವಾದ ಗುಂಪೊಂದು ಅಪಘಾತ ಮಾಡಿದ ಕಾರನ್ನೇ ಕಲ್ಲುಗಳನ್ನು ಬೀಸಿ ಜಖಂಗೊಳಿಸಿದ ಘಟನೆ ಗುರುವಾರದಂದು ರಾತ್ರಿ ನಗರದ ಎಲ್.ಎಲ್.ಆರ್ ರಸ್ತೆಯಲ್ಲಿ ನಡೆದಿದೆ.

ಮಲ್ಲಿಕಾರ್ಜುನ ನರ್ಸಿಂಗ್ ಹೋಂನ ಡಾ|.ಶ್ರೀನಾಥ್‌ರವರ ಮಗ ಹಾಗೂ ಆತನ ಸ್ನೇಹಿತನಿದ್ದ ಮಾರುತಿ ಸ್ವಿಫ್ಟ್ ಡಿಸೈರ್ ಕಾರು (ಕೆಎ13,ಎಂ6864) ಜ್ಯೂಯಲ್ ರಾಕ್ ರಸ್ತೆಯಿಂದ ಎಲ್.ಎಲ್.ಆರ್.ರಸ್ತೆ ಕಡೆಗೆ ಅತಿವೇಗವಾಗಿ ಬಂದು ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆಯಿತು. ಇದರಿಂದ ಆಟೋರಿಕ್ಷಾದಲ್ಲಿ ಪ್ರಯಾಣ ಮಾಡುತ್ತಿದ್ದ, ಮೈಸೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಅಭಿಷೇಕ್‌ಗೆ ಭುಜ ಸೇರಿದಂತೆ ಹಲವೆಡೆ ತೀವ್ರ ಗಾಯಗಳಾಗಿವೆ.

ಅಪಘಾತ ಸಂಭವಿಸಿದ ಕೂಡಲೇ ಸುತ್ತಮುತ್ತಲಿನ ಜನರೆಲ್ಲಾ ಒಗ್ಗೂಡಿ, ಕಾರಿನಿಂದ ಡಾ| ಶ್ರೀನಾಥ್‌ರವರ ಮಗ ಮತ್ತು ಆತನ ಸ್ನೇಹಿತನನ್ನು ಹೊರಕ್ಕೆಳೆದು ಕಾರನ್ನು ಸೈಜುಗಲ್ಲುಗಳಿಂದ ಪುಡಿಪುಡಿ ಮಾಡಿದರು. ಅಲ್ಲಿಗೆ ಆಗಮಿಸಿದ ಟ್ರಾಫಿಕ್ ಪೊಲೀಸರು ಕಾರನ್ನು ಘಟನೆಯ ಸ್ಥಳದಿಂದ ಬೇರೆ ಕಡೆಗೆ ಒಯ್ಯಲು ಪ್ರಯತ್ನಿಸಿದಾಗ ಒಗ್ಗೂಡಿದ್ದ ಗುಂಪು ಪೊಲೀಸರ ಕ್ರಮವನ್ನು ವಿರೋಧಿಸಿತು. ಆಗ ಪೊಲೀಸರಿಗೂ ಹಾಗೂ ಸ್ಥಳದಲ್ಲಿದ್ದ ಹಲವರ ನಡುವೆ ಮಾತಿನ ಚಕಮಕಿ ನಡೆದು ಹೊಡೆದಾಟದ ಮಟ್ಟಕ್ಕೆ ಹೋಯಿತು. ಈ ಘಟನೆಯಲ್ಲಿ ಹೊಯ್ಸಳ ವಾಹನದ ಚಾಲಕ ಸತ್ಯನಾರಾಯಣ್, ಟ್ರಾಫಿಕ್ ಪೊಲೀಸ್ ಠಾಣೆಯ ಸಹಾಯಕ ಸಬ್‌ಇನ್ಸ್‌ಪೆಕ್ಟರ್ ವಾಸು ಸೇರಿದಂತೆ ಕೆಲವರಿಗೆ ಹೊಡೆತ ಬಿದ್ದವು. ಇದರಿಂದ ಕೋಪಗೊಂಡ ಪೊಲೀಸರು ಸಹ ಲಾಠಿ ಚಾರ್ಜ್ ಮಾಡಿದರು. ಎ.ಎಸೈ. ವಾಸುರವರ ಲಾಠಿಯ ಏಟಿನಿಂದ ನಾಮನಿರ್ದೇಶಿತ ನಗರಸಭಾ ಸದಸ್ಯ ಶಿವಣ್ಣರಿಗೆ ತೀವ್ರತರದ ಗಾಯಗಳಾಗಿವೆ. ಶಿವಣ್ಣನನ್ನು ನಂಜಪ್ಪ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಗೊಳಪಡಿಸಲಾಗಿದೆ.

ಗಾಯಗೊಂಡಿರುವ ಅಭಿಷೇಕ್ ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕೌನ್ಸಿಲರ್ ಶಿವಣ್ಣ ಸಹ ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+