59 ಸಂಸದರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ
ನವದೆಹಲಿ, ಮೇ. 28 : ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದ ಸಚಿವ ಸಂಪುಟ ವಿಸ್ತರಣೆ ಕಾರ್ಯಕ್ರಮ ರಾಷ್ಟ್ರಪತಿ ಭವನದ ಅಶೋಕ ಹಾಲ್ ನಲ್ಲಿ ನಡೆಯತೊಡಗಿದೆ. ರಾಜ್ಯದ ಮಲ್ಲಿಕಾರ್ಜುನ ಖರ್ಗೆ, ಕೆ ಎಚ್ ಮುನಿಯಪ್ಪ, ಜೈರಾಮ್ ರಮೇಶ್ ಸೇರಿದಂತೆ ಒಟ್ಟು 59 ಸಂಸದರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮ ನಡೆದಿದೆ.
14 ಮಂದಿ ಕ್ಯಾಬಿನೆಟ್ ಸಚಿವರು ಹಾಗೂ 45 ಮಂದಿ ರಾಜ್ಯ ಖಾತೆ ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 18 ಮಂದಿ ಉತ್ತರ ಭಾರತದವರಾದರೆ, 14 ಮಂದಿ ಪಶ್ಚಿಮ ಭಾರತ, 14 ಸಂಸದರು ಪೂರ್ವ ಭಾರತದಿಂದ ಮತ್ತು 8 ಜನ ಮಧ್ಯಬಾರತದಿಂದ ಹಾಗೂ 25 ಜನ ದಕ್ಷಿಣ ಭಾರತದಿಂದ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸರಕಾರದಲ್ಲಿ ಸಚಿವರಾಗಿದ್ದಾರೆ.
ಸಚಿವರ ಪಟ್ಟಿ ಇಂತಿದೆ:
ವೀರಭದ್ರ ಸಿಂಗ್, ಫಾರೂಕ್ ಅಬ್ದುಲ್ಲಾ, ವಿಲಾಸ್ ರಾವ್ ದೇಶಮುಖ್, ಮಲ್ಲಿಕಾರ್ಜುನ ಖರ್ಗೆ, ಕೆ ಎಚ್ ಮುನಿಯಪ್ಪ, ದಯಾನಿಧಿ ಮಾರನ್, ಸಲ್ಮಾನ್ ಖುರ್ಷಿದ್, ಎ ರಾಜಾ, ಎಂ ಕೆ ಅಳಗಿರಿ, ಡಿ ಪುರಂದರೇಶ್ವರಿ, ಅಜಯ್ ಮಾಕನ್, ಡಿ ಕೆ ವಾಸನ್, ಮುಕುಲ್ ವಾಸ್ನಿಕ್, ಪ್ರಫುಲ್ ಪಟೇಲ್, ಶ್ರೀಪ್ರಕಾಶ್ ಜೈಶ್ವಾಲ್, ಜೈರಾಮ್ ರಮೇಶ್, ಎ ಸಾಯಿ ಪ್ರತಾಪ್, ಗುರುದಾಸ್ ಕಾಮತ್, ಎಂ ಎಂ ಪುಲಂ ರಾಜ್, ತುಷಾರ್ ಬಾಯಿ ಚೌಧರಿ, ಇ ಅಹ್ಮದ್, ಕುಮಾರಿ ಸಿಲ್ಜಾ, ಜ್ಯೋತಿರಾಧಿತ್ಯ ಸಿಂಧಿಯಾ, ಜಿತಿನ್ ಪ್ರಸಾದ್, ಆರ್ ಪಿ ಎನ್ ಸಿಂಗ್, ವಿನ್ಸೆಂಟ್ ಪಾಲ್, ವಿ ನಾರಾಯಣ ಸಮಿ, ಎಂ ರಾಮಚಂದ್ರನ್, ಪನಬಕ್ ಲಕ್ಷ್ಮಿ, ಅಗಾತಾ ಸಂಗ್ಮಾ, ಕಾಂತಿಲಾಲ್ ಬುರಿಯಾ, ಮುಕುಲ್ ರಾಯ್, ಪಿಪಿ ಪಳನಿಮನಿಯಕ್ಕಮ್, ಎಸ್ ಗಂಧೀಸೆಲ್ವಮ್, ಪ್ರಣೀತ್ ಕೌರ್, ಸಚಿನ್ ಪೈಲೆಟ್, ಶಶಿ ತರೂರ್, ಮಾಧವ್ ಖಂಡೇಲಾ, ಕೆ ವಿ ಧಾಮಸ್, ಸುಗತ್ ರಾಯ್. ದಿನೇಶ್ ತ್ರಿವೇದಿ, ಸುಲ್ತಾನ್ ಅಹ್ಮದ್, ಮೋಹನ್ ಜಾಟುವಾ, ಡಿ ನೆಪೋಲಿಯನ್, ಎಂ ಎಸ್ ಗಿಲ್, ಪ್ರಥ್ವಿರಾಜ್ ಚೌಹಾಣ್, ದಿನ್ಸಾ ಪಟೇಲ್, ಕೃಷ್ಣ ತಿರಥ್. ಭರತ್ ಸಿನ್ಹಾ ಸೋಲಂಕಿ, ಪ್ರದೀಪ್ ಜೈನ್, ಹರೀಷ್ ರಾವತ್, ಶಿಶಿರ್ ಅಧಿಕಾರಿ, ಸುಭೋದಕಾಂತ್ ಸಾಯಿ, ಅರುಣ್ ಯಾದವ್, ಶ್ರೀಕಾಂತ್ ಜೇನಾ, ಪ್ರತೀಕ ಪ್ರಕಾಶ್ ಬಾಬು ಪಾಟೀಲ್
(ದಟ್ಸ್ ಕನ್ನಡ ವಾರ್ತೆ)