ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ವಾಸ್ತು' ಯೋಗದಿಂದ ಕೃಷ್ಣಗೆ ಸಚಿವ ಸ್ಥಾನ !!

By Staff
|
Google Oneindia Kannada News

SM Krishna
ಬೆಂಗಳೂರು, ಮೇ. 27 : ವಾಸ್ತುಶಾಸ್ತ್ರವನ್ನು ಬಲವಾಗಿ ನಂಬುವ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ತನಗೆ ಸದ್ಯ ಸಿಕ್ಕಿರುವ ಕ್ಯಾಬಿನೆಟ್ ಸ್ಥಾನಮಾನ ಇದರ ಬಲದಿಂದಲೇ ಎಂದು ನಂಬಿದ್ದಾರೆ. ಕೃಷ್ಣ ಅವರ ಸದಾಶಿವನಗರದಲ್ಲಿರುವ ಮನೆಯ ಬಾಗಿಲು ಉತ್ತರಾಭಿಮುಖವಾಗಿತ್ತು. ವಾಸ್ತು ಪಂಡಿತರಾದ ಗಂಗಾಧರ್ ಅವರು ಮನೆಯ ಬಾಗಿಲನ್ನು ಈಶಾನ್ಯ ದಿಕ್ಕಿಗೆ ಬದಲಾಯಿಸುವಂತೆ ಸೂಚಿಸಿದರು. ಇವರ ಆದೇಶದಂತೆ ಮೇ 15ನೇ ತಾರೀಕಿನಂದು ದುರಸ್ತಿ ಕಾರ್ಯ ಆರಂಭವಾಗಿ ಮೇ 22ನೇ ತಾರೀಕಿಗೆ ದುರಸ್ತಿ ಕೆಲಸ ಮುಗಿಯಿತು. ಈ ಕೆಲಸ ಮುಗಿದ ಕೇವಲ 30 ನಿಮಿಷಗಳಲ್ಲಿ ಪ್ರಧಾನಿ ಕರೆಮಾಡಿ ದೆಹಲಿಗೆ ಬರುವಂತೆ ಸೂಚಿಸಿದರಂತೆ.

ಸಚಿವ ಸ್ಥಾನಮಾನದ ಆಕಾಂಕ್ಷಿಯಾಗಿದ್ದ ಕೃಷ್ಣ ಕಳೆದ ವರ್ಷ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಆದರೆ ಯಾವುದೇ ಸಚಿವ ಸ್ಥಾನ ಸಿಗದೆ ನಿರಾಸೆಗೊಂಡಿದ್ದರು. ಕೃಷ್ಣ ಅವರ ಮನೆಯವರ ಪ್ರಕಾರ ಮೇ 22ನೇ ತಾರೀಕು ಮಧ್ಯಾಹ್ನ 12 ಘಂಟೆಗೆ ಬಾಗಿಲು ದುರಸ್ತಿ ಕೆಲಸ ಮುಗಿದಿತ್ತು. ಸುಮಾರು 12.30 ಕ್ಕೆ ದೂರವಾಣಿ ಕರೆಬಂತು, ಕೃಷ್ಣ ಅವರ ಪತ್ನಿ ಪ್ರೇಮಾ ಕರೆ ಸ್ವೀಕರಿಸಿದಾಗ ಅದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರದಾಗಿತ್ತು. ಪ್ರಧಾನಿ ಮನಮೋಹನ್ ಸಿಂಗ್ ಅವರು ಕೃಷ್ಣ ಅವರನ್ನು ತಕ್ಷಣವೇ ಹೊರಟು ದೆಹಲಿಗೆ ಬರುವಂತೆ ಸೂಚಿಸಿದರು. ಇಷ್ಟೆಲ್ಲಾ ವಾಸ್ತುಶಾಸ್ತ್ರದಿಂದಲೇ ಆಗಿದೆ ಅನ್ನುವುದು ಕೃಷ್ಣ ಮತ್ತು ಅವರ ಕುಟುಂಬದವರ ಅಭಿಪ್ರಾಯವಾಗಿದೆ.

1999 ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಕೃಷ್ಣ ತಮ್ಮ ಅಧಿಕೃತ ನಿವಾಸ "ಅನುಗ್ರಹ' ವನ್ನು ಕೂಡ ವಾಸ್ತು ಪ್ರಕಾರ ದುರಸ್ತಿಗೊಳಿಸಿದ್ದರು. ಅಲ್ಲದೆ 1993 ರಲ್ಲಿ ವೀರಪ್ಪ ಮೊಯ್ಲಿ ಸಚಿವ ಸಂಪುಟದಲ್ಲಿ ಮಂತ್ರಿಯಾಗಿದ್ದಾಗಲೂ ಬೆಂಗಳೂರು ಕ್ರೆಸೆಂಟ್ ರಸ್ತೆಯಲ್ಲಿರುವ ನಿವಾಸವನ್ನು ಕೂಡ ವಾಸ್ತು ಪ್ರಕಾರ ದುರಸ್ತಿಗೊಳಿಸಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X