'ವಾಸ್ತು' ಯೋಗದಿಂದ ಕೃಷ್ಣಗೆ ಸಚಿವ ಸ್ಥಾನ !!

ಸಚಿವ ಸ್ಥಾನಮಾನದ ಆಕಾಂಕ್ಷಿಯಾಗಿದ್ದ ಕೃಷ್ಣ ಕಳೆದ ವರ್ಷ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಆದರೆ ಯಾವುದೇ ಸಚಿವ ಸ್ಥಾನ ಸಿಗದೆ ನಿರಾಸೆಗೊಂಡಿದ್ದರು. ಕೃಷ್ಣ ಅವರ ಮನೆಯವರ ಪ್ರಕಾರ ಮೇ 22ನೇ ತಾರೀಕು ಮಧ್ಯಾಹ್ನ 12 ಘಂಟೆಗೆ ಬಾಗಿಲು ದುರಸ್ತಿ ಕೆಲಸ ಮುಗಿದಿತ್ತು. ಸುಮಾರು 12.30 ಕ್ಕೆ ದೂರವಾಣಿ ಕರೆಬಂತು, ಕೃಷ್ಣ ಅವರ ಪತ್ನಿ ಪ್ರೇಮಾ ಕರೆ ಸ್ವೀಕರಿಸಿದಾಗ ಅದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರದಾಗಿತ್ತು. ಪ್ರಧಾನಿ ಮನಮೋಹನ್ ಸಿಂಗ್ ಅವರು ಕೃಷ್ಣ ಅವರನ್ನು ತಕ್ಷಣವೇ ಹೊರಟು ದೆಹಲಿಗೆ ಬರುವಂತೆ ಸೂಚಿಸಿದರು. ಇಷ್ಟೆಲ್ಲಾ ವಾಸ್ತುಶಾಸ್ತ್ರದಿಂದಲೇ ಆಗಿದೆ ಅನ್ನುವುದು ಕೃಷ್ಣ ಮತ್ತು ಅವರ ಕುಟುಂಬದವರ ಅಭಿಪ್ರಾಯವಾಗಿದೆ.
1999 ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಕೃಷ್ಣ ತಮ್ಮ ಅಧಿಕೃತ ನಿವಾಸ "ಅನುಗ್ರಹ' ವನ್ನು ಕೂಡ ವಾಸ್ತು ಪ್ರಕಾರ ದುರಸ್ತಿಗೊಳಿಸಿದ್ದರು. ಅಲ್ಲದೆ 1993 ರಲ್ಲಿ ವೀರಪ್ಪ ಮೊಯ್ಲಿ ಸಚಿವ ಸಂಪುಟದಲ್ಲಿ ಮಂತ್ರಿಯಾಗಿದ್ದಾಗಲೂ ಬೆಂಗಳೂರು ಕ್ರೆಸೆಂಟ್ ರಸ್ತೆಯಲ್ಲಿರುವ ನಿವಾಸವನ್ನು ಕೂಡ ವಾಸ್ತು ಪ್ರಕಾರ ದುರಸ್ತಿಗೊಳಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications