ಗರಂ ಆದ ಖರ್ಗೆ; ಕಮರಿದ ಹೋದ ಎಚ್ಡಿಕೆ ಆಸೆ
ನವದೆಹಲಿಯ ಕರ್ನಾಟಕ ಭವನದಲ್ಲಿ ಕಾಂಗ್ರೆಸ್ ಮುಖಂಡರು ನೂತನ ಸಚಿವರ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡಿದ್ದರು. ಎಸ್ ಎಂ ಕೃಷ್ಣ, ಮೊಯಿಲಿ ಮತ್ತು ರಾಜ್ಯ ಉಸ್ತುವಾರಿ ಗುಲಾಂ ನಬಿ ಆಜಾದ್ ಅವರನ್ನು ರಾಜ್ಯ ಕಾಂಗ್ರೆಸ್ ಮುಖಂಡರಾದ ಡಿ ಕೆ ಶಿವಕುಮಾರ್, ವಿ ಎಸ್ ಉಗ್ರಪ್ಪ ಮುಂತಾದವರು ಅಭಿನಂದಿಸಿದರು.
ಕೇಂದ್ರ ಸಚಿವ ಸಂಪುಟದಲ್ಲಿ ತಮಗೆ ಸ್ಥಾನ ಸಿಗುತ್ತದೆ ಎಂದು ಖರ್ಗೆ ನಿರೀಕ್ಷಿಸಿದ್ದರು. ಅವರ ಆಸೆ ಫಲಿಸದ ಕಾರಣ ಖರ್ಗೆ ಸಾಹೇಬರು 'ಗರಂ' ಆಗಿದ್ದಾರೆ ಎನ್ನಲಾಗಿದೆ. ಅವರು ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸದೆ ತಮ್ಮಲ್ಲಿನ ಅಸಮಾಧಾನವನ್ನು ಸಾಬೀತು ಪಡಿಸಿದಂತಾಗಿದೆ.
ಎಚ್ಡಿಕೆಗೆ
ಕನ್ನಡಿ
ಗಂಟಾದ
ಸಚಿವ
ಸ್ಥಾನ
ಯುಪಿಎ
ಸರಕಾರಕ್ಕೆ
ಮೂರು
ಸಂಸದರ
ಬಲವುಳ್ಳ
ಜೆಡಿಎಸ್
ಬೆಂಬಲ
ಘೋಷಿಸಿದ
ನಂತರ
ಆ
ಪಕ್ಷಕ್ಕೆ
ಸಚಿವ
ಸ್ಥಾನ
ನೀಡುವ
ವಿಚಾರವೂ
ಹೊಸ
ತಿರುವು
ಪಡೆದುಕೊಂಡಿದೆ.
ಜೆಡಿಎಸ್
ಬೆಂಬಲ
ನೀಡುವಾಗ
ಯಾವುದೇ
ಬೇಡಿಕೆ
ಇಟ್ಟಿರಲಿಲ್ಲ
ಎಂದು
ಕರ್ನಾಟಕ
ಉಸ್ತುವಾರಿ
ಹೊತ್ತಿರುವ
ಗುಲಾಂನಬಿ
ಆಜಾದ್
ತಿಳಿಸಿದ್ದಾರೆ.
ಸುದ್ದಿಗಾರರೊಂಗಿಗೆ ಮಾತನಾಡುತ್ತಿದ್ದ ಅವರು, ಯುಪಿಎ ಸರಕಾರಕ್ಕೆ ಬೆಂಬಲ ನೀಡಲು ಕುಮಾರಸ್ವಾಮಿ ಯಾವುದೇ ಷರತ್ತು ಇಲ್ಲ. ಸಚಿವ ಸ್ಥಾನ ಬೇಕಂತಲೂ ಬೇಡಿಕೆ ಇಟ್ಟಿಲ್ಲ ಎಂದು ಗುಲಾಂನಬಿ ಸ್ಪಷ್ಟಪಡಿಸಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರಿಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂದು ಎಣಿಸಿದ್ದ ಅವರ ಬೆಂಗಲಿಗರಆಸೆ ಕಮರಿಹೋದಂತಾಗಿದೆ.
(ಏಜೆನ್ಸೀಸ್)