ಸಚಿವ ಸ್ಥಾನದ ಬಿಕ್ಕಟ್ಟು ; ಡಿಎಂಕೆ ದೊಂಬರಾಟ

DMK-Cong deadlock: Karuna leaves for Chennai
ನವದೆಹಲಿ, ಮೇ. 22 : ಸಚಿವ ಸ್ಥಾನ ಹಂಚಿಕೆ ಸಂಬಂಧ ಯುಪಿಎಯೊಳಗೆ ಭಿನ್ನಮತ ಸ್ಫೋಟಗೊಂಡಿದ್ದು ಪ್ರಮುಖ ಮಿತ್ರಪಕ್ಷವಾದ ಡಿಎಂಕೆ ಮುನಿಸಿಕೊಂಡು ಬಾಹ್ಯ ಬೆಂಬಲ ನೀಡಿ ಸಂಪುಟದಿಂದ ಹೊರಗುಳಿಯಲು ನಿರ್ಧರಿಸಿದೆ. ಹಠಾತ್ತನೇ ನಡೆದ ಈ ಬೆಳವಣಿಗೆ ಶುಕ್ರವಾರ ಸಂಜೆ ಆರೂವರೆ ಗಂಟೆಗೆ ಎರಡನೇ ಬಾರಿಗೆ ಪ್ರಧಾನಮಂತ್ರಿಯಾಗಿ ಮನಮೋಹನ್ ಸಿಂಗ್ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮದ ಸಂಭ್ರಮ ಕಳೆಗುಂದಿದೆ. ನವದೆಹಲಿಯಿಂದ ಕರುಣಾನಿಧಿ ಸೇರಿದಂತೆ ಡಿಎಂಕೆ ಸಂಸದರೆಲ್ಲರೂ ಶುಕ್ರವಾರ ಬೆಳಗ್ಗೆ ಚೆನ್ನೈಗೆ ಪ್ರಯಾಣ ಬೆಳೆಸಿದರು.

ಮುನಿಸಿಕೊಂಡ ಡಿಎಂಕೆ ಅಧ್ಯಕ್ಷ ಕರುಣಾನಿಧಿ ಅವರ ಮನವೂಲಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ಪ್ರವೇಶಿಸಿದ್ದಾರೆ. ಗುರುವಾರ ತಡರಾತ್ರಿವರೆಗೂ ಮನಮೋಹನ್ ಸಿಂಗ್ ಅವರೊಂದಿಗೆ ಬಿಕ್ಕಟ್ಟು ಪರಿಹಾರ ಕುರಿತು ಚರ್ಚೆ ನಡೆಸಿದ್ದಾರೆ. ಇದಕ್ಕೂ ಮೊದಲು ಸೋನಿಯಾಗಾಂಧಿ ಮತ್ತು ಮನಮೋಹನ್ ಸಿಂಗ್ ಅವರು ಡಿಎಂಕೆ ನಾಯಕ ಕರುಣಾನಿಧಿ ಅವರ ಭೇಟಿ ಮಾಡಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ, ಕಾಂಗ್ರೆಸ್ ನಿರ್ಧಾರಕ್ಕೆ ತೀವ್ರ ಅಸಮಾಧಾನಗೊಂಡಿರುವ ಕರುಣಾನಿಧಿ ಚೆನ್ನೈ ವಿಮಾನವೇರಿದ್ದಾರೆ ಎಂದು ತಿಳಿದು ಬಂದಿದೆ.

2004ರಲ್ಲಿಯೂ ಈ ರೀತಿಯ ಚೌಕಾಶಿಯಿಂದಲೇ ಏಳು ಸಚಿವ ಸ್ಥಾನಗಳನ್ನು ಮಾತ್ರವಲ್ಲ ತಾನು ಬಯಸಿದ್ದ ನೌಕಾ ಮತ್ತು ರಸ್ತೆ ಸಾರಿಗೆ ಖಾತೆಯನ್ನೂ ಪಡೆದಿತ್ತು. ಅಸಮಾಧಾನಗೊಂಡಿದ್ದ ಡಿಎಂಕೆ ನಾಯಕ ಕರುಣಾನಿಧಿ ತಂಗಿದ್ದ ಹೋಟೆಲ್ ಕೋಣೆಗೆ ಖುದ್ದಾಗಿ ಹೋಗಿ ಸೋನಿಯಾ ಗಾಂಧಿ ಮನವೂಲಿಸಿದ್ದರು. ಅದೇ ನಾಟಕದ ದೃಶ್ಯಗಳು ಗುರುವಾರ ಸಂಜೆ ನಡೆಯಿತು.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+