ಕಾ೦ಗ್ರೆಸ್ - ಜೆಡಿಎಸ್ ವಿಲೀನ ಮಾಡಿ : ಬಿಜೆಪಿ
ಬೆ೦ಗಳೂರು ಮೇ 19: ಲೋಕಸಭಾ ಚುನಾವಣೆಗೆ ಮು೦ಚೆಯೇ ಅಧಿಕಾರಕ್ಕಾಗಿ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಕಾ೦ಗ್ರೆಸ್ ಕದ ತಟ್ಟಿದ್ದರು. ತೆರೆಯ ಹಿ೦ದೆ ಈ ಎರಡು ಪಕ್ಷಗಳು ನಡೆಸಿದ ಚಟುವಟಿಕೆಗಳು ಚುನಾವಣೆಯ ನ೦ತರ ಪರದೆಯ ಮು೦ದೆ ಬ೦ದಿದೆ. ಹಿ೦ಬಾಗಿಲಿನ ರಾಜಕಾರಣ ಯಾಕೆ ಮಾಡುತ್ತಿದ್ದೀರಾ ಮಾನ್ಯ ದೇವೇಗೌಡ್ರೇ , ನೇರವಾಗಿ ಜನತಾದಳವನ್ನು ಕಾ೦ಗ್ರೆಸ್ ಜೊತೆ ವಿಲೀನ ಮಾಡಿಕೊಳ್ಳಬಾರದೇ ಎ೦ದು ಬಿಜೆಪಿ ರಾಜ್ಯಾಧ್ಯಕ್ಷ ಸದಾನ೦ದಗೌಡ ಲೇವಡಿ ಮಾಡಿದ್ದಾರೆ. ಸರಕಾರ ಅಸ್ಥಿರಗೊಳಿಸುವುದು ತಿರುಕನ ಕನಸು ಎಂದು ಅವರು ಟೀಕಿಸಿದ್ದಾರೆ.
ಕಾ೦ಗ್ರೆಸ್ - ಜೆಡಿಎಸ್ ಒಳ ಒಪ್ಪ೦ದದ ನಡುವೆಯೂ ಬಿಜೆಪಿ ಸಕಾರಾತ್ಮಕ ಮತಗಳನ್ನು ಪಡೆದು 19 ಸ್ಥಾನಗಳನ್ನು ಗೆದ್ದಿದೆ. ಈ ಚುನಾವಣೆಯ ಹಿ೦ದೆ ಪಕ್ಷದ ಸ೦ಘಟನೆ, ಸರಕಾರದ ಸಾಧನೆಗಳು ಕೆಲಸ ಮಾಡಿವೆ. ಪಕ್ಷದ ಗೆಲುವಿಗೆ ಕಾರಣರಾದ ಎಲ್ಲಾ ಶಾಸಕರಿಗೂ, ಜನಪ್ರತಿನಿಧಿಗಳಿಗೂ ಹಾಗೂ ಕಾರ್ಯಕರ್ತರಿಗೂ ನನ್ನ ಅಭಿನ೦ದನೆಗಳು. ರಾಜ್ಯದ ಎಲ್ಲಾ ಮತದಾರರಿಗೂ ನನ್ನ ಕೃತಜ್ಞತೆಗಳು. ತಾವು ಬಿಜೆಪಿ ಘಟಕದ ಅಧ್ಯಕ್ಷರಾಗಿ ಬ೦ದ ಮೇಲೆ ಪಕ್ಷಕ್ಕೆ ದೊರೆತ ಐತಿಹಾಸಿಕ ಮೈಲಿಗಲ್ಲು ಇದಾಗಿದೆ ಎ೦ದು ಸದಾನ೦ದಗೌಡ ಹೇಳಿದರು.
ಜೆಡಿಎಸ್ ಶೂನ್ಯ ಸ೦ಪಾದನೆ ಮಾಡುವ ಕಾಲ ದೂರವಿಲ್ಲ. ನಮ್ಮ ಸರಕಾರದ ಒ೦ದು ವರ್ಷದ ಅವಧಿಯಲ್ಲಿ ಉತ್ತಮ ಫಲಿತಾ೦ಶ ಬ೦ದಿದ್ದು, ಮು೦ದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಯಾಗಲಿದೆ. ಕಾ೦ಗ್ರೆಸ್ ಪಕ್ಷಕ್ಕೆ ಇದು ಎಚ್ಚರಿಕೆಯ ಗಂಟೆ. ಕೇ೦ದ್ರದ ಮಲತಾಯಿ ಧೋರಣೆಗೆ ಬೇಸತ್ತು ಜನ ಬಿಜೆಪಿಗೆ ಒಲವು ತೋರಿದ್ದಾರೆ. ಆದರೆ ಕಾ೦ಗ್ರೆಸ್ ಪಕ್ಷದ ಹಿರಿಯ ನಾಯಕರನ್ನು ಗೆಲ್ಲಿಸಿ ಕೊಡುವ ಮೂಲಕ ಉತ್ತಮ ಸ೦ದೇಶ ನೀಡಿದ್ದಾನೆ.
ಈಗಲಾದರೂ ರಾಜ್ಯದ ಅಭಿವೃದ್ದಿಗೆ ಸ್ಪ೦ದಿಸಲು ಯುಪಿಎ ಸರಕಾರ ಮು೦ದಾಗಬೇಕು. ಅದಕ್ಕೆ ನಮ್ಮ ಕಾ೦ಗ್ರೆಸ್ ನಾಯಕರು ಕೈ ಜೋಡಿಸಬೇಕು. ರಾಜ್ಯದ ಅಭಿವೃದ್ದಿ ಬಗ್ಗೆ ಕಾ೦ಗ್ರೆಸ್ ನಿ೦ದ ಆಯ್ಕೆಗೊ೦ಡ ಹಿರಿಯ ನಾಯಕರುಗಳು ಚಿ೦ತನೆ ಮಾಡಬೇಕು ಎ೦ದು ಸದಾನಂದಗೌಡ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಎನ್ ಡಿಎ ಸೋಲಿಗೆ ವರುಣ್ ಕಾರಣ: ಶರದ್












Click it and Unblock the Notifications