ದೇವೇಗೌಡ, ಕುಮಾರಸ್ವಾಮಿ ಎಷ್ಟು ಪ್ರಾಮಾಣಿಕರು

DV Sadananda gowda
ಮಂಗಳೂರು, ಮೇ. 13 : ದೇವೇಗೌಡ, ಕುಮಾರಸ್ವಾಮಿ ಪ್ರಾಮಾಣಿಕ ರಾಜಕಾರಣ ಮಾಡುತ್ತಿರುವುದಾದರೆ ದೆಹಲಿಯಲ್ಲಿ ಮಂಗಳವಾರ ರಾತ್ರಿ ಕುಮಾರಸ್ವಾಮಿಯವರು ಮುಖ ಮುಚ್ಚಿಕೊಂಡು ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ಮಾತುಕತೆ ಮಾಡಿದ್ದನ್ನು ಬಹಿರಂಗಪಡಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿವಿ ಸದಾನಂದ ಗೌಡ ಸವಾಲು ಹಾಕಿದರು.

ಅವರು ಮಂಗಳೂರಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಕುಮಾರಸ್ವಾಮಿಯವರು ಪಾರದರ್ಶಕ ರಾಜಕಾರಣಿಯಾಗಿದ್ದರೆ ಸೋನಿಯಾಗಾಂಧಿಯವರೊಂದಿಗೆ ಮಾಡಿರುವ ಮಾತುಕತೆಯನ್ನು ಬಹಿರಂಗಪಡಿಸಿ ಎಂದು ಆಗ್ರಹಿಸಿದರು. ಚುನಾವಣಾ ಫಲಿತಾಂಶ ಪ್ರಕಟವಾಗುವ ಮೊದಲೇ ಜೆಡಿಎಸ್ ಸೋಲೊಪ್ಪಿಕೊಂಡು ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಸೋನಿಯಾ ಭೇಟಿ ಮಾಡಿದ್ದಾರೆ ಲೇವಡಿ ಮಾಡಿದ್ದಾರೆ.

ದೇವೇಗೌಡರ ದೂತರಾಗಿ ಕುಮಾರಸ್ವಾಮಿ ಸೋನಿಯಾವರನ್ನು ಭೇಟಿ ಮಾಡಿದ್ದಾರೆ ಹೊರತು ಅವರಿಗೆ ಗೊತ್ತಿಲ್ಲದೆ ಆಗಿರುವ ಭೇಟಿ ಇದಲ್ಲ. ವಚನ ಭ್ರಷ್ಟರಾದ ಕುಮಾರಸ್ವಾಮಿ, ದೇವೇಗೌಡರು ಇರುವಂತಹ ಪಕ್ಷದಲ್ಲಿ ಪ್ರಾಮಾಣಿಕರಿಗೆ ಭವಿಷ್ಯವಿಲ್ಲ. ಆದ್ದರಿಂದ ಪ್ರಾಮಾಣಿಕರಾಗಿ ಉಳಿದಿರುವ ನಾಯಕರು ಇವರ ಸಹವಾಸ ಬಿಟ್ಟು ಬೇರೆ ಪಕ್ಷಗಳನ್ನು ಸೇರಿಕೊಳ್ಳುವುದು ಒಳ್ಳೆಯದು ಎಂದು ಹೇಳಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸದಾನಂದ ಗೌಡರು ಕಾಂಗ್ರೆಸ್ ಜೆಡಿಎಸ್ ಬೇರೆಬೇರೆ ಅಲ್ಲ, ಎರಡೂ ಒಂದೇ ನಾಣ್ಯದ ಎರಡು ಮುಖಗಳು, ಚುನಾವಣೆಗೂ ಮುನ್ನ ಒಳಒಪ್ಪಂದ ಮಾಡಿಕೊಂಡಿದ್ದವು ಎನ್ನುವುದಕ್ಕೆ ಕುಮಾರಸ್ವಾಮಿಯವರ ಸೋನಿಯಾ ಭೇಟಿ ಸಾಕ್ಷಿ ಎಂದರು.

(ದಟ್ಸ್ ಕನ್ನಡ ವಾರ್ತೆ)

ಯುಪಿಎಗೆ ಬೆಂಬಲ : ಕುಮಾರಣ್ಣ ಕೇಂದ್ರ ಮಂತ್ರಿ ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+