ದಿಲ್ಲಿ ಗದ್ದುಗೆ : ಜಯಲಲಿತಾ ಕಿಂಗ್ ಮೇಕರ್

ಇಂದು ಚೆನ್ನೈನಲ್ಲಿ ಮತದಾನ ಮಾಡಿದ ಜಯಲಲಿತಾ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಮೇ 16 ರಂದು ಫಲಿತಾಂಶ ಹೊರಬೀಳಲಿದೆ. ಅಲ್ಲಿಯವರೆಗೂ ತಾವು ಯಾವ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಈ ಚುನಾವಣೆಯಲ್ಲಿ ಎಐಎಡಿಎಂಕೆ ಕಳೆದ ಸಲಕ್ಕಿಂತ ಅತೀ ಸ್ಥಾನ ಗಳಿಸಲಿದೆ. 16 ರ ಸಂಜೆ ದಿಲ್ಲಿಗೆ ಪ್ರಯಾಣ ಬೆಳೆಸಿ ತಮ್ಮ ನಿರ್ಧಾರವನ್ನು ಘೋಷಿಸುವುದಾಗಿ ಹೇಳಿದರು.
ಎನ್ ಡಿಎ ಇಲ್ಲವೇ ಯುಪಿಎಗೆ ಬೆಂಬಲ ನೀಡುವ ಕುರಿತು ಮಾತನಾಡಿದ ಅವರು, ಈಗಾಗಲೇ ಅನೇಕ ಮುಖಂಡರು ತಮ್ಮನ್ನು ಸಂಪರ್ಕಿಸುತ್ತಿದ್ದಾರೆ. ಆದರೆ, ನಾನು ಯಾರಿಗೂ ಕೂಡಾ ಬೆಂಬಲ ನೀಡುವೆ ಎಂದು ಭರವಸೆ ನೀಡಿಲ್ಲ. 16ರ ನಂತರ ತಮ್ಮ ನಿಲುವುವನ್ನು ಸ್ಪಷ್ಟಪಡಿಸುವುದಾಗಿ ಹೇಳಿದ್ದೇನೆ ಎಂದು ಜಯಲಲಿತಾ ಹೇಳಿದರು. ಚೆನ್ನೈ ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಅಕ್ರಮ ಮತದಾನ ನಡೆಯುತ್ತಿದೆ. ಎಐಎಡಿಎಂಕೆ ಕಾರ್ಯಕರ್ತರಿಗೆ ಮತದಾನ ಮಾಡಲು ಅವಕಾಶ ಮಾಡಿಕೊಡುತ್ತಿಲ್ಲ. ಈ ಕುರಿತು ಚುನಾವಣೆ ಅಧಿಕಾರಿಗೆ ದೂರು ಸಲ್ಲಿಸುವುದಾಗಿ ಅವರು ಹೇಳಿದರು.
(ಏಜನ್ಸೀಸ್)
ಚಿದು ಮಗನ ಮೇಲೆ ಎಐಎಡಿಎಂಕೆ ದಾಳಿ
ಮತದಾನ ಮಾಡದ ಕಮಲ್ ಹಾಸನ್
ಸಿಪಿಐ(ಎಂ)-ಟಿಎಂಸಿ ಕಾರ್ಯಕರ್ತರ ಮಾರಾಮಾರಿ












Click it and Unblock the Notifications