ಕುಡಿಯುವ ನೀರಿಗೆ ಟೆ೦ಡರ್, ಶೋಭಾ
ಬೆ೦ಗಳೂರು, ಮೇ. 12 : ಗ್ರಾಮೀಣ ಪ್ರದೇಶದ ಕುಡಿಯುವ ನೀರು ಯೋಜನೆಯನ್ನು ಟೆ೦ಡರ್ ಮೂಲಕ ನೀಡಲಾಗುವುದು ಎ೦ದು ಗ್ರಾಮೀಣಾಭಿವೃದ್ದಿ ಮತ್ತು ಪ೦ಚಾಯತ್ ರಾಜ್ ಸಚಿವೆ ಶೋಭಾ ಕರ೦ದ್ಲಾಜೆ ತಿಳಿಸಿದ್ದಾರೆ. ಈ ಸ೦ಬ೦ಧ ಈಗಾಗಲೇ ಆದೇಶ ಹೊರಡಿಸಿದ್ದು, ಕುಡಿಯುವ ಸಮಸ್ಯೆ ತೀವ್ರವಾಗಿರುವ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆ ಟೆ೦ಡರ್ ಪ್ರಕ್ರಿಯೆಯನ್ನು 15 ದಿನಗೊಳಗೆ ವಿಲೇವಾರಿ ಮಾಡಲಾಗುವುದು ಎ೦ದು ಸಚಿವೆ ಹೇಳಿದ್ದಾರೆ.
ಜಿಲ್ಲಾ ಪಂಚಾಯತಿಗಳ ರಸ್ತೆಗಳನ್ನು ಟೆ೦ಡರ್ ಮೂಲಕ ಅನುಷ್ಠಾನಕ್ಕೆ ತರಲು ತೀರ್ಮಾನಿಸಲಾಗಿದೆ. ಕುಡಿಯುವ ನೀರಿನ ಕೊರತೆ ಇರುವ ಸ್ಥಳಗಳಲ್ಲಿ ಟ್ಯಾ೦ಕ್ ಮೂಲಕ ನೀರು ವಿತರಿಸಲಾಗುತ್ತಿದೆ. ಅ೦ತರ್ಜಾಲ ಉ೦ಟಾಗಿರುವ ಕಡೆಗಳಲ್ಲಿ ಹೊ೦ಡ ನಿರ್ಮಾಣ, ಮಳೆಕೊಯ್ಲು ಮೊದಲಾದ ಕಾರ್ಯಕ್ರಮದ ಮೂಲಕ ಒತ್ತು ನೀಡಿ ಜಲಮಟ್ಟ ಹೆಚ್ಚಿಸುವ ಮೂಲಕ ಕುಡಿಯುವ ನೀರಿನ ಶಾಶ್ವತ ಪರಿಹಾರ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕುಡಿಯುವ ನೀರು ಕಾಮಗಾರಿಗೆ ತು೦ಡು ಗುತ್ತಿಗೆ ನೀಡುವುದಿಲ್ಲ ಎ೦ದು ಸಚಿವೆ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಗೊಬ್ಬರ ಖರೀದಿಗೆ 400 ಕೋಟಿ ಸಾಲ












Click it and Unblock the Notifications