ಸಮಾಜವಾದಿ ಕುಟುಂಬದಲ್ಲಿ ಒಡಕು

ಮುಲಾಯಂ ಅಜಂ ವಿರುದ್ದ ಮೃದು ಧೋರಣೆ ತಾಳಿದ್ದಾರೆ. ಮಾಜಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಎಸ್ಪಿ ಸೇರಿದ ಮೇಲೆ ಅಜಂ ನನ್ನ ವಿರುದ್ದ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರ ಆರೋಪಕ್ಕೆಲ್ಲಾ ಉತ್ತರಿಸುವ ಅವಶ್ಯಕತೆ ನನಗಿಲ್ಲ. ಅಲ್ಪ ಸಂಖ್ಯಾತರ ಮತಕ್ಕೆ ನನ್ನಿಂದ ತೊಂದರೆಯಾಗುತ್ತಿದೆ ಎಂದು ಅಜಂಖಾನ್ ಹೇಳಿದ್ದಾರೆ. ಪಕ್ಷದ ಏಳಿಗೆಗಾಗಿ ಶ್ರಮಿಸುವವನು ನಾನು, ಅಜಂ ಅವರಿಂದ ರಾಜಕೀಯ ಪಾಠ ಕಲಿಯುವ ಅವಶ್ಯಕತೆ ನನಗಿಲ್ಲ ಎಂದು ಪಕ್ಷದ ಚುನಾವಣೆ ಪ್ರಚಾರ ಸಭೆಯಲ್ಲಿ ಹೇಳಿ ಪಕ್ಷಕ್ಕೆ ತೀವ್ರ ಮುಜುಗರ ತಂದೊಡ್ಡಿದ್ದಾರೆ. ಪಕ್ಷದ ಸಂಸದೆ ಜಯಪ್ರದ ಕೂಡ ಈ ಸಭೆಯಲ್ಲಿ ಹಾಜರಿದ್ದರು.
ಅಮರ್ ಸಿಂಗ್ ಅವರ ಹೇಳಿಕೆಗೆ ಸೊಪ್ಪು ಹಾಕದಂತೆ ಕಾಣುತ್ತಿರುವ ಮುಲಾಯಂ, ಅಜಂ ಖಾನ್ ಅವರ ಅವಶ್ಯಕತೆ ಪಕ್ಷಕ್ಕೆ ಇದೆ. ಅವರೊಬ್ಬರು ಪ್ರಭಾವಿ ಮುಸ್ಲಿಂ ನಾಯಕ. ಅವರ ಮೇಲೆ ಕ್ರಮ ಕೈಗೊಳ್ಳುವ ಸಾಧ್ಯತೆ ಇಲ್ಲ. ಅಮರ್ ಸಿಂಗ್ ಅವರಿಗೆ ಈ ವಿಷಯದಲ್ಲಿ ಬಹಿರಂಗ ಹೇಳಿಕೆ ನೀಡದಂತೆ ಸೂಚಿಸಿದ್ದೇನೆ ಮತ್ತು ಅವರ ಬಳಿ ಚರ್ಚಿಸುತ್ತೇನೆ ಎಂದು ಹೇಳಿದ್ದಾರೆ.
(ಏಜನ್ಸೀಸ್)
ಮಾಯಾ ಸೋಲಿಸಲು ಬಿಜೆಪಿಗೂ ಬೆಂಬಲ : ಎಸ್ಪಿ
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications