ಕಾರ್ಮಿಕರಿಗೆ ಕೇಂದ್ರ ಸರಕಾರದ ಹೊಸ ಕೊಡುಗೆ
ನವದೆಹಲಿ, ಮೇ.1: ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ಒದಗಿಸುವ ಮುಖ್ಯ ಉದ್ದೇಶದಿಂದ ಕೇಂದ್ರ ಸರ್ಕಾರದ 'ಹೊಸ ಪಿಂಚಣಿ ಯೋಜನೆ'(ಎನ್ ಪಿಎಸ್)ಕಾರ್ಮಿಕರ ದಿನವಾದ ಮೇ 1 ರಿಂದ ಜಾರಿಗೆ ಬರಲಿದೆ. ರಾಷ್ಟ್ರದ ಪ್ರತಿಯೊಬ್ಬ ನಾಗರಿಕನಿಗೂ ಪಿಂಚಣಿ ಪಡೆಯುವ ಅವಕಾಶವನ್ನು ಈ ಯೋಜನೆ ಕಲ್ಪಿಸಲಿದೆ.
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್ ಆರ್ ಡಿಎ) ಈ ಹೊಸ ಪಿಂಚಣಿ ಯೋಜನೆಯನ್ನು ರೂಪಿಸಿದೆ. 2004ರ ಜ.1 ಹಾಗೂ ಆನಂತರ ಕೇಂದ್ರ ಸರ್ಕಾರಿ ಉದ್ಯೋಗಕ್ಕೆ ಸೇರಿದ ಪ್ರತಿಯೊಬ್ಬ ನೌಕರನಿಗೂ (ಸೇನಾಪಡೆ ಸಿಬ್ಬಂದಿ ಹೊರತುಪಡಿಸಿ) ಅನ್ವಯಿಸಲಿದೆ. ಈ ಯೋಜನೆಯನ್ನು ಅಳವಡಿಸಿಕೊಳ್ಳುವಂತೆ ರಾಜ್ಯ ಸರಕಾರಗಳಿಗೆ ಕೇಂದ್ರ ಸಹಲೆ ನೀಡಿದೆ.
ಸಾಮನ್ಯ ಪ್ರಜೆಗಳು ಈ ಹೊಸ ಯೋಜನೆಗೆ ಸೇರಿ ಪಿಂಚಣಿ ಪಡೆಯಬಹುದು. ಕೇಂದ್ರ ಸರಕಾರ ದೇಶದ 22 ಕಡೆ ಸ್ಥಾಪಿಸಿರುವ ಪಾಯಿಂಟ್ಸ್ ಆಫ್ ಪ್ರೆಸೆನ್ಸ್(ಪಿಒಪಿ) ಕೇಂದ್ರಗಳ ಮೂಲಕ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಹೆಸರು ನೋಂದಾಯಿಸಿಕೊಂಡು ಕಾಯಂ ನಿವೃತ್ತಿ ಖಾತೆ ಸಂಖ್ಯೆ(ಪಿಆರ್ ಎಎನ್) ಪಡೆಯಬೇಕಾಗುತ್ತದೆ. ನೋಂದಣಿ ಅರ್ಜಿ ಮತ್ತಿತರ ಮಾಹಿತಿಗಾಗಿ ಪಿಎಫ್ ಆರ್ ಡಿಎ ಅಂತರ್ಜಾಲ ತಾಣ ನೋಡಬಹುದು.
(ಏಜೆನ್ಸೀಸ್)












Click it and Unblock the Notifications