ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕ್ಸಲ್ ಪೀಡಿತ ಪ್ರದೇಶದಲ್ಲಿ ಮತದಾನ ತೃಪ್ತಿಕರ

By Staff
|
Google Oneindia Kannada News

S Bangarappa
ಬೆಂಗಳೂರು, ಏ.30: ನಕ್ಸಲ್ ಪೀಡಿತ ಪ್ರದೇಶಗಳಾದ ದಕ್ಷಿಣ ಕನ್ನಡ, ಉಡುಪಿ -ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಕ್ಷೇತ್ರಗಳಲ್ಲಿ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಶೇ.50 ಕ್ಕೂ ಹೆಚ್ಚು ಜನ ತಮ್ಮ ಹಕ್ಕನ್ನು ಚಲಾಯಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಉಳಿದಂತೆ ಬೆಳಗ್ಗೆ ಉತ್ತಮ ಆರಂಭದ ನಡುವೆ ಕೂಡ ಮಂಡ್ಯದಲ್ಲಿ ಶೇಕಡಾವಾರು ಪ್ರಮಾಣ ಕುಂಠಿತಗೊಂಡಿದೆ.

ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರಕ್ಕೆ ಇದೇ ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿರುವ ನಳಿನ್ ಕುಮಾರ್ ಕಟೀಲ್ ವಿರುದ್ಧ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ನೇರ ಸ್ಪರ್ಧೆ ಒಡ್ಡಿದ್ದಾರೆ. ದಕ್ಷಿಣ ಕನ್ನಡಲ್ಲಿ ಶೇ.50ರಷ್ಟು ಮತದಾನ ದಾಖಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಧಾರವಾಡ, ಹಾವೇರಿ, ಉಡುಪಿ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಮಂಡ್ಯ, ಮೈಸೂರು, ಚಾಮರಾಜ ನಗರದಲ್ಲಿ ಶೇ.40ರಿಂದ 45ರಷ್ಟು ಮತದಾನ ನಡಿದಿದೆ.

ಸಂಜೆ 4 ರ ವೇಳೆಗೆ ಶೇಕಡಾವಾರು ಮತದಾನ ವಿವರ:
ಬಾಗಲಕೋಟೆ 57.48%
ಹಾವೇರಿ 48.99%
ಧಾರವಾಡ 44.33%
ದಾವಣಗೆರೆ 50.31%
ಶಿವಮೊಗ್ಗ 50.84%
ಉಡುಪಿ-ಚಿಕ್ಕಮಗಳೂರು 52.72%
ಹಾಸನ 60.89%
ದಕ್ಷಿಣ ಕನ್ನಡ 65.91%
ಮಂಡ್ಯ 44.99%
ಚಾಮರಾಜನಗರ 49.83%
ಮೈಸೂರು 50.31%

(ದಟ್ಸ್ ಕನ್ನಡ ವಾರ್ತೆ)

ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X