ಭಾರತದ ಅಧುನಿಕ ಯುದ್ಧವಿಮಾನ ಅಪಘಾತ

ರಾಜ್ ಮಾಥೈ ಗ್ರಾಮದ ಬಳಿ ಇಂದು ಬೆಳಗ್ಗೆ 10.30 ರವೇಳೆಗೆ ದುರಂತ ಸಂಭವಿಸಿದೆ.ಪುಣೆ ಮೂಲದ ಪೈಲೆಟ್ ಗಳು ಎಂದಿನ ಅಭ್ಯಾಸ ಹಾರಾಟದಲ್ಲಿ ತೊಡಗಿದ್ದರು .ವಿಂಕ್ ಕಮಾಂಡರ್ ಎಸ್ ವಿ ಮುಂಜೆ ಅಪಾಯದಿಂದ ಪಾರಾಗಿದ್ದಾರೆ. ಆದರೆ ವಿಂಕ್ ಕಮಾಂಡರ್ ಪಿ ಎಸ್ ನರ್ಹಾ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
ಮೊಟ್ಟಮೊದಲ ಬಾರಿ ಈ ರೀತಿ ಆಧುನಿಕ ಸುಖೋಯ್ ಯುದ್ಧವಿಮಾನ ಅಪಘಾತಕ್ಕೆ ಒಳಗಾಗಿರುವುದು ಎನ್ನಲಾಗಿದೆ. ಬೆಂಗಳೂರಿನ ಹೆಚ್ ಎ ಎಲ್ ಹಾಗೂ ರಷ್ಯಾದ ಸಖೋಯ್ ಕಾರ್ಪೋರಷನ್ ಜಂಟಿಯಾಗಿ ನಿರ್ಮಿತ ಈ ಯುದ್ಧ ವಿಮಾನ 2002 ರಿಂದ ಭಾರತೀಯ ವಾಯುಪಡೆಯ ಉಪಯೋಗದಲ್ಲಿದೆ.
(ಏಜೆನ್ಸೀಸ್)












Click it and Unblock the Notifications