ಡಿ ಕೆ ಶಿವಕುಮಾರ್ ವಿರುದ್ದ ಮೊಕದ್ದಮೆ
ಮಡಿಕೇರಿ, ಏ. 29 : ಯಾವುದೇ ಮುನ್ಸೂಚನೆ ನೀಡಿದೆ ಅನಧಿಕೃತವಾಗಿ ಇಲ್ಲಿನ ರಿಸಾರ್ಟ್ ವೊಂದರಲ್ಲಿ ತಂಗುವ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ದ ಚುನಾವಣೆ ಆಯೋಗ ಪ್ರಕರಣ ದಾಖಲಿಸಿದೆ.
ರಾಜ್ಯದಲ್ಲಿ ಎಪ್ರಿಲ್ 30ಕ್ಕೆ ಎರಡನೇ ಹಂತದ ಚುನಾವಣೆಗಳು ನಡೆಯಲಿವೆ. ಎಪ್ರಿಲ್ 28ಕ್ಕೆ ರಾಜಕೀಯ ಮುಖಂಡರ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿತು. ಬಹಿರಂಗ ಪ್ರಚಾರ ಸೇರಿದಂತೆ ಹೊರಗಡೆಯಿಂದ ಆಗಮಿಸಿರುವ ಮುಖಂಡರು ಬೇರೆ ಸ್ಥಳಗಳಿಂದ ಜಾಗ ಖಾಲಿ ಮಾಡಬೇಕು. ಆದರೆ, ಡಿಕೆ ಶಿವಕುಮಾರ್ ಅವರು ಮಡಿಕೇರಿಯ ಕುಶಾಲನಗರದಲ್ಲಿರುವ ಕೋದಂಡರಾಮಯ್ಯ ಅವರ ರಿಸಾರ್ಟ್ ನಲ್ಲಿ ಉಳಿದುಕೊಂಡಿದ್ದು, ನೀತಿ ಸಂಹಿತೆ ಉಲ್ಲಂಘನೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಮಹದೇವಪೇಟೆಯಲ್ಲಿ ಇಬ್ಬರು ಸ್ಥಳೀಯ ನಾಯಕರು ಪ್ರಚಾರ ನಡೆಸುತ್ತಿರುವ ಆರೋಪದ ಮೇಲೆ ಬಂಧಿಸಲಾಗಿತ್ತು. ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications