ರಾಯಚೂರು, ಬೀದರಿನಲ್ಲಿ ಅಕ್ರಮ ಮದ್ಯ ವಶ
ರಾಯಚೂರು, ಏ. 19 : ಲೋಕಸಭಾ ಚುನಾವಣೆ ಪ್ರಯುಕ್ತ ಜಿಲ್ಲೆಯಲ್ಲಿ ಅಬಕಾರಿ ಮತ್ತು ಪೊಲೀಸ್ ಇಲಾಖೆಯವರು ಜಂಟಿಯಾಗಿ, ಜಿಲ್ಲೆಯ ಹೊರಗಡೆಯಿಂದ ಮದ್ಯ, ಮತ್ತಿತರ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಬಹುದಾದಂತ ವಸ್ತುಗಳು ಒಳಗಡೆ ನುಸುಳದಂತೆ ತಡೆಗಟ್ಟಲು ಪ್ರಮುಖ ರಸ್ತೆಗಳಲ್ಲಿ ಚೆಕ್ಪೋಸ್ಟ್ಗಳನ್ನು ತೆರೆದಿದ್ದಾರೆ.
ದೇವದುರ್ಗ ತಾಲೂಕಿನ ತಿಂಥಣಿ ಬ್ರಿಜ್ ಚೆಕ್ಪೋಸ್ಟ್ನಲ್ಲಿ ಏಪ್ರಿಲ್ 17 ರಂದು ಬೆಂಗಳೂರು ಕಡೆಯಿಂದ ಬಂದ ಕೆಎ 52, 3090 ಲಾರಿಯಲ್ಲಿದ್ದ 14.74 ಲಕ್ಷ ರೂ ಮೌಲ್ಯದ ಮದ್ಯದ ಪೆಟ್ಟಿಗೆಗಳು ಹಾಗೂ 6 ಲಕ್ಷ ರೂ ಮೌಲ್ಯದ ವಾಹನ ಸೇರಿದಂತೆ 20.74 ಲಕ್ಷ ರೂ ಗಳನ್ನು ಸಮರ್ಪಕ ದಾಖಲೆ ಇಲ್ಲದ ಕಾರಣ ವಶಪಡಿಸಿಕೊಂಡಿದ್ದು, ಇಬ್ಬರು ವಾಹನ ಚಾಲಕರನನ್ನು ಬಂದಿಸಿ ಮಾನ್ವಿ ವಲಯ ನಿರೀಕ್ಷಕರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ ಹಾಗೂ ಸದರಿ ಪ್ರಕರಣವು ತನಿಖೆಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ದಂಡಾಧಿಕಾರಿಗಳು ಮತ್ತು ಜಿಲ್ಲಾಚುನಾವಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಅನಧಿಕೃತ ಮದ್ಯ ಸಾಗಾಣೆ ಲಾರಿ ಸಮೇತ ಮದ್ಯ ವಶ
ಬೀದರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಧರಂಸಿಂಗ್ ಅವರಿಗೆ ಸೇರಿದ ವಾಹನದಿಂದ 9,17ಲಕ್ಷ ರುಪಾಯಿ ಹಣವನ್ನು ಶನಿವಾರ ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಮಧ್ಯಾಹ್ನ 2 ಗಂಟೆಯ ವೇಳೆಗೆ ನಗರದ ಚಿಟ್ಟಾ ಬಳಿ ಸೆಕ್ಟರಲ್ ಮ್ಯಾಜಿಸ್ಟ್ರೇಟ್ ಅವರು ಗುಲ್ಬರ್ಗಾದ ನೀಲಕಂಠಪ್ಪ ಮೂಲಗೆ ಎಂಬವರಿಗೆ ಸೇರಿದ ಕೆಎ 32 ಎಂ ಬಿ 29 ವಾಹನವನ್ನು ನಿಲ್ಲಿಸಿ ಪರಿಶೋಧನೆ ನಡೆಸಿದಾಗ ಲಕೋಟೆಗಳಲ್ಲಿ ಹಂಚಲು ಸಿದ್ಧಪಡಿಸಲಾಗಿದ್ದ ಹಣ ಪತ್ತೆಯಾಗಿದೆ. ವಾಹನದಲ್ಲಿ ಇದ್ದ ಮೂವರು ಪರಾರಿಯಾಗಿದ್ದು, ಚಾಲಕನನ್ನು ಹಿಡಿಯಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಹಂಚಲು ತರಲಾಗುತ್ತಿದ್ದ ಹಣ ಇದು ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ವಾಹನದಲ್ಲಿ ಇತರ ದಾಖಲೆಗಳು ಸಹ ಪತ್ತೆಯಾಗಿದ್ದು, ತನಿಖೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಹರ್ಷಗುಪ್ತಾ ಅವರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಧರಂಗೆ ಸೇರಿದ 10 ಲಕ್ಷ ರು. ನಗದು ವಶ!
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು











Click it and Unblock the Notifications