ಆಂಧ್ರದಲ್ಲೊಬ್ಬ ಕಲಿಯುಗದ ಬೇಡರಕಣ್ಣಪ್ಪ !!
ಹೈದರಾಬಾದ್, ಏ. 17 : ಅಂದು ಬೇಡರಕಣ್ಣಪ್ಪ ತಾನು ನಂಬಿದ ತನ್ನ ಆರಾಧ್ಯ ದೇವರು ಶಿವನಿಗಾಗಿ ತನ್ನ ಕಣ್ಣುಗುಡ್ಡೆಯನ್ನು ಕಿತ್ತು ದೇವರಿಗೆ ದಾನ ನೀಡಿದ ಕಥೆ ಪುರಾಣ ಕಾಲದ್ದು. ತಾನು ನಂಬಿದ ದೇವರಿಗೆ ತನ್ನೆರಡೂ ಕಣ್ಣುಗಳನ್ನು ಕಿತ್ತುಕೊಟ್ಟ ಭೂಪ ಕಥೆಯನ್ನು ಇತ್ತಿಚೆಗೆ ಕರ್ನಾಟಕದಲ್ಲಿ ನೋಡಿದ್ದಾಗಿದೆ. ಆದರೆ, ಆಂದ್ರಪ್ರದೇಶದಲ್ಲೊಬ್ಬ ಪಿತ್ತ ನೆತ್ತಿಗೇರಿದ ಅಭಿಮಾನಿಯೊಬ್ಬ ಮುಖ್ಯಮಂತ್ರಿ ವೈ ಎಸ್ ರಾಜಶೇಖರರೆಡ್ಡಿ ಚುನಾವಣೆಯಲ್ಲಿ ಮತ್ತೆ ಗೆದ್ದು ಬರಲೆಂದು ತನ್ನ ನಾಲಿಗೆಯನ್ನು ಕತ್ತರಿಸಿ ದೇವರಿಗೆ ಹರಕೆ ಒಪ್ಪಿಸುವುದೇ !
ಪಶ್ಚಿಮ ಗೋದಾವರಿ ಜಿಲ್ಲೆಯವನಾಗಿರುವ ಮಹೇಶ್ ಅನ್ನುವ ಕಾಂಗ್ರೆಸ್ ಕಾರ್ಯಕರ್ತ ಹರಿತವಾದ ಬ್ಲೇಡನಲ್ಲಿ ನಾಲಿಗೆ ಕತ್ತರಿಸಿ ಇಲ್ಲಿನ ಶ್ರೀನಗರ ಕಾಲೋನಿಯಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿನ ಹುಂಡಿಗೆ ಹಾಕಿದ್ದಾನೆ. ನಂತರ ತೀವ್ರ ರಕ್ತಸ್ರಾವಗೊಂಡು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಪೊಲೀಸರು ಆತನನ್ನು ದಾಖಲಿಸಿದ್ದಾರೆ.
ಬಿಸಿರಕ್ತದ ಹುಮ್ಮಸ್ಸಿನಲ್ಲೋ ಅಥವಾ ರಾಜಕೀಯ ನಾಯಕರುಗಳನ್ನು ಓಲೈಸಲೆಂದೋ ತೆಗೆದುಕೊಳ್ಳುವ ಇಂತಹ ಹುಂಬು ನಿರ್ಧಾರ ಅದೆಷ್ಟು ಸರಿಯೋ ತಪ್ಪೋ, ಸದ್ಯಕ್ಕೆ ನೋವು ತಿನ್ನುತ್ತಿರುವುದು ಮಾತ್ರ ತಲೆ ಕೆಟ್ಟ ಅಭಿಮಾನವೇ?
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು