ಕಸಬ್ ನನ್ನು ನೇಣಿಗೇರಿಸಿ : ಬಾಳಾ ಠಾಕ್ರೆ

ಕಸಬ್ ಪರ ವಿಚಾರಣೆ ನಡೆಸಿ ಪ್ರಯೋಜನವಿಲ್ಲ. ವಿಚಾರಣೆ ನಡೆಸುವಂತ ಕೃತ್ಯದಲ್ಲಿ ಅವನು ಭಾಗಿಯಾಗಿಲ್ಲ. ದೇಶದ ಸಮಗ್ರತೆ, ಐಕ್ಯತೆ ಭಾರಿ ಹೊಡೆತ ನೀಡಿರುವವನಿಗೆ ಕಾನೂನು ನೆರವಿನ ಅಗತ್ಯವಿದೆಯೇ ? ಮುಂಬೈ ನಲ್ಲಿ ನಡೆದ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವವನಿಗೆ ಕಾನೂನು ನೆರವು ನೀಡುವುದು ಖಂಡಿತ ಅಕ್ಷಮ್ಯ. ಈ ಕೂಡಲೇ ಅವನನ್ನು ಗೇಟ್ ವೇ ಆಫ್ ಇಂಡಿಯಾದ ಹೆಬ್ಬಾಗಿಲಿಗೆ ನೇಣಿಗೇರಿಸಿ ಎಂದು ಅವರು ಆಗ್ರಹಿಸಿದ್ದಾರೆ. ಇದು ನನ್ನೊಬ್ಬನ ಮಾತಲ್ಲ, ಭಾರತದ ನೂರು ಕೋಟಿ ಜನರ ಮನಸ್ಸುಗಳು ಕೂಡಾ ಇದೇ ಉತ್ತರ ನೀಡುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
166 ಮಂದಿಯನ್ನು ದಾರುಣ ಹತಕಗೈದು ದೇಶದ ಅರ್ಥಿಕತೆ ಮೇಲೆ ಭಾರಿ ಪರಿಣಾಮ ಬೀರಿರುವ ಕಸಬ್ ನಿಗೆ ಜೈಲಿನಲ್ಲಿ ರಾಜ ಮರ್ಯಾದೆ ಕೊಡುತ್ತಿರುವ ಉದ್ದೇಶವೇನು. ಆತನ ತಾಯಿ ಪಾಕಿಸ್ತಾನದಿಂದ ಮಗನನ್ನು ನೋಡಲು ಜೈಲಿಗೆ ಬಂದಾಗ ಆಕೆಗೂ ಕೂಡಾ ಭವ್ಯ ಮರ್ಯಾದೆ ನೀಡಿದ್ದೇಕೆ ಎಂದು ಪ್ರಶ್ನಿಸಿ ಬಾಳಾ ಠಾಕ್ರೆ ಆಕೆ ಏನಾದರೂ ವೀರಮಾತೆಯೇ ಎಂದು ಕಿಡಿಕಾರಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಮುಂಬೈ ಭಯೋತ್ಪಾದನೆ : ಕಸಬ್ ವಿಚಾರಣೆ












Click it and Unblock the Notifications