ಕಸಬ್ ನನ್ನು ನೇಣಿಗೇರಿಸಿ : ಬಾಳಾ ಠಾಕ್ರೆ

Hang Kasab publicly : Bal Thackeray
ಮುಂಬೈ, ಏ. 17 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ನಿಗೆ ಕಾನೂನು ನೆರವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಉಗ್ರನನ್ನು ಮುಂಬೈನ ಗೇಟ್ ವೇ ಆಫ್ ಇಂಡಿಯಾದ ಮುಂಭಾಗದಲ್ಲಿ ಸಾರ್ವಜನಿಕವಾಗಿ ನೇಣಿಗೇರಿಸಿ ಎಂದು ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಗುಡುಗಿದ್ದಾರೆ.

ಕಸಬ್ ಪರ ವಿಚಾರಣೆ ನಡೆಸಿ ಪ್ರಯೋಜನವಿಲ್ಲ. ವಿಚಾರಣೆ ನಡೆಸುವಂತ ಕೃತ್ಯದಲ್ಲಿ ಅವನು ಭಾಗಿಯಾಗಿಲ್ಲ. ದೇಶದ ಸಮಗ್ರತೆ, ಐಕ್ಯತೆ ಭಾರಿ ಹೊಡೆತ ನೀಡಿರುವವನಿಗೆ ಕಾನೂನು ನೆರವಿನ ಅಗತ್ಯವಿದೆಯೇ ? ಮುಂಬೈ ನಲ್ಲಿ ನಡೆದ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವವನಿಗೆ ಕಾನೂನು ನೆರವು ನೀಡುವುದು ಖಂಡಿತ ಅಕ್ಷಮ್ಯ. ಈ ಕೂಡಲೇ ಅವನನ್ನು ಗೇಟ್ ವೇ ಆಫ್ ಇಂಡಿಯಾದ ಹೆಬ್ಬಾಗಿಲಿಗೆ ನೇಣಿಗೇರಿಸಿ ಎಂದು ಅವರು ಆಗ್ರಹಿಸಿದ್ದಾರೆ. ಇದು ನನ್ನೊಬ್ಬನ ಮಾತಲ್ಲ, ಭಾರತದ ನೂರು ಕೋಟಿ ಜನರ ಮನಸ್ಸುಗಳು ಕೂಡಾ ಇದೇ ಉತ್ತರ ನೀಡುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

166 ಮಂದಿಯನ್ನು ದಾರುಣ ಹತಕಗೈದು ದೇಶದ ಅರ್ಥಿಕತೆ ಮೇಲೆ ಭಾರಿ ಪರಿಣಾಮ ಬೀರಿರುವ ಕಸಬ್ ನಿಗೆ ಜೈಲಿನಲ್ಲಿ ರಾಜ ಮರ್ಯಾದೆ ಕೊಡುತ್ತಿರುವ ಉದ್ದೇಶವೇನು. ಆತನ ತಾಯಿ ಪಾಕಿಸ್ತಾನದಿಂದ ಮಗನನ್ನು ನೋಡಲು ಜೈಲಿಗೆ ಬಂದಾಗ ಆಕೆಗೂ ಕೂಡಾ ಭವ್ಯ ಮರ್ಯಾದೆ ನೀಡಿದ್ದೇಕೆ ಎಂದು ಪ್ರಶ್ನಿಸಿ ಬಾಳಾ ಠಾಕ್ರೆ ಆಕೆ ಏನಾದರೂ ವೀರಮಾತೆಯೇ ಎಂದು ಕಿಡಿಕಾರಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಮುಂಬೈ ಭಯೋತ್ಪಾದನೆ : ಕಸಬ್ ವಿಚಾರಣೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+